ಮೋದಿ ಅವರೇ, ರಾಜ್ಯ ಬಿಜೆಪಿಗೆ ‘ಬಿಎಸ್‌ವೈ & ಸನ್ಸ್ ಪಾರ್ಟಿ’ ಎಂದು ನಾಮಕರಣ ಮಾಡಿ: ಕಾಂಗ್ರೆಸ್‌ ಲೇವಡಿ

Date:

Advertisements

ಪ್ರಧಾನಿ ನರೇಂದ್ರ ಅವರೇ, ವಿಧಾನಸಭಾ ಚುನಾವಣೆಗಾಗಿ ಮೂರು ದಿನಕ್ಕೊಮ್ಮೆ ಕೈಬೀಸಿ ಹೋದರೂ ಕನ್ನಡಿಗರು ಕ್ಯಾರೇ ಅಂದಿಲ್ಲ. ಈಗ ನಿಮ್ಮ ತಗಡು ಚುನಾವಣಾ ಭಾಷಣ ಕೇಳುವರೇ” ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

ಎಕ್ಸ್‌ ತಾಣದಲ್ಲಿ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, “ಎಸ್‌ಬಿಐ ಬ್ಯಾಂಕನ್ನೇ ಏಟಿಎಂ ಮಾಡಿಕೊಂಡಿರುವ ತಾವು ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತಾಡುವ ಅರ್ಹತೆ ಹೊಂದಿಲ್ಲ. ದಮ್ಮು ತಾಕತ್ತು ಇದ್ದರೆ ಚುನಾವಣಾ ಬಾಂಡ್ ಬಗ್ಗೆ ಮಾತಾಡಿ” ಎಂದು ಸವಾಲು ಹಾಕಿದೆ.

“ಹಿಪಾಕ್ರಸಿಗೆ ಮತ್ತೊಂದು ಹೆಸರೇ ಮೋದಿ! ಶಿವಮೊಗ್ಗದಲ್ಲಿ ವೇದಿಕೆ ಮೇಲೆ ಯಡಿಯೂರಪ್ಪರನ್ನು ಕೂರಿಸಿಕೊಂಡು, ಆ ಕಡೆ ಅಭ್ಯರ್ಥಿಯಾಗಿರುವ ದೊಡ್ಡ ಮಗ, ಈ ಕಡೆ ರಾಜ್ಯಾಧ್ಯಕ್ಷನಾದ ಚಿಕ್ಕ ಮಗನನ್ನು ಕೂರಿಸಿಕೊಂಡಿದ್ದ ಮೋದಿ ಅವರೇ ನಿಮ್ಮ ಡೋಂಗಿತನ ಬಯಲಾಗಿದೆ. ನಿಮ್ಮ ಟೆಲಿಪ್ರಾಂಪ್ಟರ್ ನಿಂದ “ಕುಟುಂಬ ರಾಜಕೀಯ“ ಎಂಬ ಪದವನ್ನು ಅಳಿಸಿಬಿಡಿ. ಅಥವಾ ರಾಜ್ಯ ಬಿಜೆಪಿಗೆ “BSY & ಸನ್ಸ್ ಪಾರ್ಟಿ” ಎಂದು ನಾಮಕರಣ ಮಾಡಿಬಿಡಿ” ಎಂದು ಟೀಕಿಸಿದೆ.

Advertisements

“ನರೇಂದ್ರ ಅವರೇ, ನೀವು ಮತ ಕೇಳುತ್ತಿರುವುದು ಯಡಿಯೂರಪ್ಪನವರ ಮಗ ಎನ್ನುವುದು ತಿಳಿದಿದೆಯೇ? ನಿಮ್ಮ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪನವರ ಮಗ ಎನ್ನುವುದು ತಿಳಿದಿದೆಯೇ? ಇದು ಕುಟುಂಬ ರಾಜಕಾರಣ ಅಲ್ಲವೇ? “ಕುಟುಂಬ ರಾಜಕಾರಣ“ ಎಂದು ಟೀಕಿಸಿ ಈಗ ರಾಜಕೀಯ ಕುಟುಂಬದ ಪರ ಮತ ಕೇಳುವ ಮೋದಿಯದ್ದು ಹಿಪಾಕ್ರಸಿ ಅಲ್ಲದೆ ಇನ್ನೇನು” ಎಂದು ಕುಟುಕಿದೆ.

“ಕಷ್ಟಕ್ಕೆ ಬರಲಿಲ್ಲ, ಚುನಾವಣೆಗೆ ಬಾರದೆ ಇರುವುದಿಲ್ಲ“ ಇದು ಮೋದಿ ಅವರ ಧ್ಯೇಯವಾಕ್ಯ! ಕರ್ನಾಟಕಕ್ಕೆ ಬರ ಪರಿಹಾರ ನೀಡಿ ಎಂದು ಪತ್ರ ಬರೆದಿದ್ದು ಆಯ್ತು, ಮುಖ್ಯಮಂತ್ರಿಗಳು ಭೇಟಿಯಾಗಿ ಮನವಿ ಮಾಡಿದ್ದೂ ಆಯ್ತು, ಆದರೂ ನಯಾಪೈಸೆ ಹಣ ಬಿಡುಗಡೆ ಮಾಡದೆ ಯಾವ ಮುಖವಿಟ್ಟುಕೊಂಡು ಮತ ಕೇಳಲು ಬಂದಿದ್ದೀರಿ? ಕೇಂದ್ರ ಬರ ಅಧ್ಯಯನ ತಂಡ ಮಾಡಿದ ಅಧ್ಯಯನ ವರದಿ ಎಲ್ಲಿ ಹೋಯ್ತು, ಫಲಶೃತಿ ಏನಾಯ್ತು ಮೋದಿಯವರೇ” ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

“ಬರದಿಂದ ಕಂಗಾಲಾಗಿರುವ ಕನ್ನಡಿಗರಿಗೆ ಕೇಂದ್ರ ಸರ್ಕಾರ ನೀಡಿದ ಒಂದೇ ಒಂದು ನೆರವು ನೀಡಿದ ಉದಾಹರಣೆ ಇದ್ದರೆ ಮೋದಿ ಅವರು ಜನತೆಗೆ ತಿಳಿಸಲಿ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ದಿನಗಳನ್ನು 100ರಿಂದ 150 ದಿನಗಳಿಗೆ ಏರಿಸುವಂತೆ ನಮ್ಮ ಸರ್ಕಾರ ಮನವಿ ಮಾಡಿದ್ದರೂ ಕೂಲಿ ದಿನಗಳನ್ನು ಏರಿಸಲಿಲ್ಲವೇಕೆ? ಭಾರತದ ಬಡ ಜನರು “ಚುನಾವಣಾ ಬಾಂಡ್” ಖರೀದಿಸಲಿಲ್ಲ ಎನ್ನುವ ಅಸಹನೆಯೇ?” ಎಂದು ವಾಗ್ದಾಳಿ ನಡೆಸಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

Download Eedina App Android / iOS

X