2026ರ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿ | ಕತಾರ್​ ಮೋಸದಾಟಕ್ಕೆ ಭಾರತ ಫುಟ್ಬಾಲ್​ ತಂಡ ‘ಔಟ್’; ವ್ಯಾಪಕ ಆಕ್ರೋಶ

Date:

Advertisements

ಕ್ರಿಕೆಟ್​​ನಂತೆ ಫುಟ್ಬಾಲ್​ನಲ್ಲಿ ಮಹತ್ತರ ಬದಲಾವಣೆ ತರಬೇಕಿದೆ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣ, ಕತಾರ್​ ತಂಡದ ಮೋಸದಾಟಕ್ಕೆ ಭಾರತದ ಫುಟ್ಬಾಲ್​ ತಂಡ ಬಲಿಯಾಗಿದೆ.

2026ರ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿಯಲ್ಲಿ ಕತಾರ್​ ತಂಡವು ನಡೆಸಿದ ಮೋಸದಾಟಕ್ಕೆ ಭಾರತೀಯ ಫುಟ್ಬಾಲ್​ ತಂಡ ಔಟ್ ಆಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಕತಾರ್ ವಿರುದ್ಧ 2-1 ಗೋಲಿನ ಅಂತರದ ಸೋಲಿನಿಂದ ಭಾರತ ತಂಡ 2026ರ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿಯಿಂದ ಹೊರಬಿದ್ದರೆ, 2027ರ ಏಷ್ಯನ್​ ಕಪ್​ಗೆ ನೇರ ಅರ್ಹತೆ ಪಡೆಯಲು ವಿಫಲವಾಗಿ ಡಬಲ್​ ಶಾಕ್​ ಅನುಭವಿಸಬೇಕಾಯಿತು.

Advertisements

ದೋಹಾದಲ್ಲಿ ನಿನ್ನೆ (ಮಂಗಳವಾರ) ನಡೆದ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿಯ 2ನೇ ಸುತ್ತಿನಲ್ಲಿ ಏಷ್ಯನ್​ ಚಾಂಪಿಯನ್​ ಕತಾರ್​ ತಂಡದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಮೋಸದಾಟಕ್ಕೆ ಸೋಲು ಕಂಡಿತು. ನಿರ್ಣಾಯಕ ಪಂದ್ಯದಲ್ಲಿ ಗೆಲುವಿಗಾಗಿ ಹೋರಾಡುತ್ತಿದ್ದ ಭಾರತಕ್ಕೆ ಕತಾರ್​ ಎಸಗಿದ ದ್ರೋಹದಿಂದ 1-2 ಗೋಲುಗಳಿಂದ ನಿರಾಸೆ ಅನುಭವಿಸಿತು.

2 ಬಾರಿಯ ಏಷ್ಯನ್​ ಚಾಂಪಿಯನ್​ ಆದ ಕತಾರ್​ ವಿರುದ್ಧ ಭಾರತ ಉತ್ತಮ ಆಟವಾಡುತ್ತಿತ್ತು. ಮೊದಲಾರ್ಧದ 37ನೇ ನಿಮಿಷದಲ್ಲಿ ಭಾರತದ ಲಾಲಿಯನ್ಜುವಾಲಾ ಚಾಂಗ್ಟೆ ಆಕರ್ಷಕ ಕಾಲ್ಚಳಕದಿಂದ ಮೊದಲ ಗೋಲು ದಾಖಲಾಯಿತು. 1-0 ಯಲ್ಲಿ ಮುನ್ನಡೆದ ಭಾರತ ಮೊದಲಾರ್ಧದಲ್ಲಿ ಕತಾರ್​ಗೆ ಗೋಲು ಬಿಟ್ಟುಕೊಡದೇ ಮುನ್ನಡೆ ಸಾಧಿಸಿತು.

ಕತಾರ್​ ಮೋಸದಾಟ ಹೇಗೆ?

ಬಳಿಕ ದ್ವಿತೀಯಾರ್ಧದಲ್ಲಿ ಗೋಲು ಬಾರಿಸುವ ಬದಲಿಗೆ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಭಾರತಕ್ಕೆ ಕತಾರ್​ ಮೋಸ ಮಾಡಿತು. 75ನೇ ನಿಮಿಷದಲ್ಲಿ ಕತಾರ್ ಗೋಲು ಗಳಿಸುವ ಪ್ರಯತ್ನ ಮಾಡಿತು. ಗೋಲು ಪೆಟ್ಟಿಗೆಯ ಅಂಚಿನಲ್ಲಿ ನಡೆದ ಚಕಮಕಿಯಲ್ಲಿ ಚೆಂಡು ಗೆರೆ ದಾಟಿ ಹೋಯಿತು. ಇದರಿಂದ ಭಾರತದ ಗೋಲ್​ಕೀಪರ್​ ಮತ್ತು ನಾಯಕರಾದ ಗುರ್​ಪ್ರೀತ್​ ಸಿಂಗ್ ಚೆಂಡನ್ನು ಹಿಡಿಯಲು ಪ್ರಯತ್ನಿಸಲಿಲ್ಲ.

ಆದರೆ, ಕತಾರ್​ನ ಅಲ್​ ಹಸನ್​ ಹೊರ ಹೋಗಿದ್ದ ಚೆಂಡನ್ನು ಒಳಗೆ ಮೆಲ್ಲ ಎಳೆದುಕೊಂಡು ಇನ್ನೋರ್ವ ಆಟಗಾರ ಯೂಸುಫ್​ ಅಯೆಮ್​ಗೆ ಪಾಸ್​ ನೀಡಿದರು. ಯೂಸುಫ್​ ಚೆಂಡನ್ನು ತಕ್ಷಣವೇ ಗೋಲಿಗೆ ತಳ್ಳಿ ಸಂಭ್ರಮಿಸಲು ಶುರು ಮಾಡಿದರು. ಭಾರತೀಯ ಆಟಗಾರರು ಇದನ್ನು ಪ್ರಶ್ನಿಸಿದರು. ಚೆಂಡು ಹೋಗಿದೆ ಎಂದು ರೆಫ್ರಿ ಬಳಿ ದೂರಿದರು. ಆದರೆ, ರೆಫ್ರಿಗಳು ಗೋಲು ಗಳಿಸಿದ ಅಂಕವನ್ನು ಕತಾರ್​ ನೀಡಿದರು. ಇದರಿಂದ ಭಾರತೀಯರು ಭಾರೀ ನಿರಾಸೆಗೆ ಒಳಗಾದರು.

ಬಳಿಕ ಆಟ ಮುಗಿಯಲು 5 ನಿಮಿಷ ಇದ್ದಾಗ (85ನೇ ನಿಮಿಷ) ಕತಾರ್​ ಮತ್ತೊಂದು ಗೋಲು ದಾಖಲಿಸಿ ಸಂಭ್ರಮಾಚರಣೆ ಮಾಡಿತು. ಮೊದಲ ಗೋಲಿನ ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ಮೈದಾನದಲ್ಲಿ ರೆಫ್ರಿಗಳಿಗೆ ಕಣ್ಣಿಲ್ಲವೇ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕತಾರ್​ಗೆ ಮುಖ್ಯವಾಗಿಲ್ಲದ ಪಂದ್ಯದಲ್ಲಿ ಬಾರತ ತಂಡದ ವಿರುದ್ಧ ಮೋಸದಾಟವಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಂಡದ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ.

ಭಾರತಕ್ಕೆ ಡಬಲ್​ ಶಾಕ್​; ಫಿಫಾಗೆ ದೂರು:

ಈ ಸೋಲಿನ ಮೂಲಕ ಭಾರತ ಎರಡು ಆಘಾತ ಅನುಭವಿಸಿತು. 2026 ರಲ್ಲಿ ನಡೆಯುವ ಫಿಫಾ ವಿಶ್ವಕಪ್​ ಮತ್ತು 2027 ರ ಏಷ್ಯನ್​ ಕಪ್​ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಪಂದ್ಯದಲ್ಲಾದ ಮೋಸದ ಬಗ್ಗೆ ಭಾರತ ಫುಟ್ಬಾಲ್​ ಸಂಸ್ಥೆ ಅಂತಾರಾಷ್ಟ್ರೀಯ ಫುಟ್ಬಾಲ್​ ಸಂಸ್ಥೆಗೆ(FIFA) ಪತ್ರ ಬರೆದು ದೂರು ನೀಡಿದೆ.

Qatar 1

ವಿವಾದಾತ್ಮಕ ಗೋಲು ನೀಡಿದ್ದು, ಭಾರತೀಯರನ್ನು ಘಾಸಿಗೊಳಿಸಿದೆ. ಗೆಲುವು, ಸೋಲನ್ನು ತಂಡ ವಿನಮ್ರವಾಗಿ ಒಪ್ಪುತ್ತದೆ. ಆದರೆ, ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ ಎಂದು ಪತ್ರದಲ್ಲಿ ನಮೂದಿಸಲಾಗಿದೆ.

ಇದನ್ನು ಓದಿದ್ದೀರಾ? ಜಿಜ್ಞಾಸೆ | ರಿಷಬ್ ಪಂತ್‌ಗೆ ಸಿಕ್ಕ ಸೌಲಭ್ಯ ಸಾಮಾನ್ಯರಿಗೇಕಿಲ್ಲ, ಸರ್ಕಾರಗಳ ಆದ್ಯತೆಗಳೇನು?

ಪತ್ರಿಕಾಗೋಷ್ಠಿಯಲ್ಲಿ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮುಖ್ಯ ಕೋಚ್​ ಇಗೊರ್​ ಸ್ಟಿಮ್ಯಾಕ್​, “ಭಾರತೀಯರು ಹೆಮ್ಮೆ ಪಡುವಂತೆ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಮೊದಲ ಗೋಲಿನ ವಿವಾದದಿಂದಾಗಿ ತಂಡ ಸೋತಿದೆ. ಟಿವಿ ರಿಪ್ಲೈನಲ್ಲಿ ಸತ್ಯ ಕಾಣಿಸುತ್ತದೆ. ಆದಾಗ್ಯೂ ತಂಡ ಸೋತು ಭಾರತೀಯರನ್ನು ನಿರಾಸೆ ತಂದಿದ್ದಕ್ಕೆ ಬೇಸರವಿದೆ” ಎಂದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

ಏಷ್ಯಾಕಪ್​ಗೆ ಅಚ್ಚರಿಯ ಭಾರತ ತಂಡ ಪ್ರಕಟ; ಹಲವರಿಗೆ ಕೊಕ್‌, ಪ್ರಮುಖರ ಆಗಮನ

ಮಹತ್ವದ ಟಿ20 ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ...

ಏಷ್ಯನ್ ಚಾಂಪಿಯನ್‌ಶಿಪ್‌ | 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚು ಗೆದ್ದ ಮನು ಭಾಕರ್

ಕಝಾಕಿಸ್ತಾನದ ಶಿಮ್ಕೆಂಟ್‌ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 10 ಮೀಟರ್...

ಬುಲಾ ಚೌಧರಿ ಪದ್ಮಶ್ರೀ ಪದಕ ಕಳವು: ‘ಎಲ್ಲವನ್ನೂ ಕಳೆದುಕೊಂಡೆ’ ಎಂದ ಈಜುಪಟು

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಮ್ಮ ಪೂರ್ವಜರ ಮನೆಯಿಂದ ಪದ್ಮಶ್ರೀ ಪದಕ...

Download Eedina App Android / iOS

X