ಡೆಲ್ಲಿ ಕ್ಯಾಪಿಟಲ್ಸ್‌ ಮುನ್ನಡೆಸುವ ಆಟಗಾರರ ಹೆಸರು ಘೋಷಣೆ

Date:

Advertisements

ಐಪಿಎಲ್ 2025ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನಡೆಸುವ ಆಟಗಾರರ ಹೆಸರನ್ನು ಪ್ರಾಂಚೈಸಿಯ ಸಹ ಮಾಲೀಕರಾದ ಪಾರ್ಥ್‌ ಜಿಂದಾಲ್ ಅಂತಿಮಗೊಳಿಸಿದ್ದಾರೆ. 14 ಕೋಟಿ ರೂ.ಗೆ ಹರಾಜಾದ ಕೆ ಎಲ್ ರಾಹುಲ್‌ ಹಾಗೂ ಅಕ್ಷರ್‌ ಪಟೇಲ್‌ ತಂಡವನ್ನು ಮುನ್ನಡೆಸಲಿದ್ದಾರೆ. ನ.24 ರಂದು ನಡೆದ ಬಿಡ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೆ ಎಲ್ ರಾಹುಲ್ ಅವರನ್ನು ಖರೀದಿಸಿತ್ತು.    

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾರ್ಥ್‌ ಜಿಂದಾಲ್, ಇಬ್ಬರೂ ಆಟಗಾರರು ತಂಡದ ಕಿರಿಯ ಸದಸ್ಯರಿಗೆ ಮಾರ್ಗದರ್ಶನ ನೀಡಲಿದ್ದಾರೆ. ನಾಯಕನ ಹೆಸರನ್ನು ಮುಂದಿನ ಋತುವಿನಲ್ಲಿಯೇ ತಿಳಿಸಲಾಗುವುದು. ನಾವು ಆರಂಭಿಕರಾಗಿ ಆಡುವವರ ಸಾಮರ್ಥ್ಯವನ್ನು ಎದುರು ನೋಡುತ್ತಿದ್ದು, ಅನುಭವದೊಂದಿಗೆ ಇನಿಂಗ್ಸ್ ಕಟ್ಟುವ ಕೆಲವರಿದ್ದಾರೆ. ಕೆ ಎಲ್‌ ರಾಹುಲ್‌ ಐಪಿಎಲ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಇವರು ಕೆಲವು ಆಟಗಾರರಂತೆ ಪ್ರತಿ ಋತುವಿನಲ್ಲಿಯೂ 400ಕ್ಕೂ ಅಧಿಕ ರನ್‌ ಪೇರಿಸಿದ್ದಾರೆ. ದೆಹಲಿಯ ಪಿಚ್‌ ಇವರ ಆಟಕ್ಕೆ ಸರಿ ಹೊಂದುತ್ತದೆ ಎಂದು ಭಾವಿಸಿದ್ದೇನೆ. ನಾವು ಅವರನ್ನು ಹೊಂದಿರುವುದಕ್ಕೆ ಹರ್ಷಗೊಂಡಿದ್ದೇನೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಮಾರ್ಚ್​ 14 ರಿಂದ 18ನೇ ಆವೃತ್ತಿಯ ಐಪಿಎಲ್ ಹಂಗಾಮ ಆರಂಭ, ಮೂರು ವರ್ಷದ ವೇಳಾಪಟ್ಟಿ ಪ್ರಕಟ

Advertisements

“ನಮ್ಮ ಬ್ಯಾಟಿಂಗ್‌ ಪಡೆಯಲ್ಲಿ ಯುವ ಆಟಗಾರರಿದ್ದಾರೆ. ಕೆ ಎಲ್‌ ರಾಹುಲ್ ಹಾಗೂ ಅಕ್ಷರ್‌ ತಂಡವನ್ನು ಮುನ್ನಡೆಸಲಿದ್ದಾರೆ. ಕೆ ಎಲ್ ರಾಹುಲ್ ಅವರ ಬ್ಯಾಟಿಂಗ್‌ ಅನುಭವ ಈ ಋತುವಿನಲ್ಲಿ ಪ್ರಮುಖ ಆಕರ್ಷಣೆಯಾಗಿರುತ್ತದೆ. ನಾವು ಎರಡನೇ ದಿನದ ಹಾರಾಜಿನಲ್ಲೂ ಪ್ರಮುಖ ಸಾಮರ್ಥ್ಯವಿರುವ ಬೌಲರ್‌ಗಳನ್ನು ಖರೀದಿಸುತ್ತೇವೆ. ಎಲ್ಲ ವಿಭಾಗಗಳಲ್ಲಿ ನಮ್ಮ ತಂಡ ಅತ್ಯುತ್ತಮವಾಗಿರಲಿದೆ” ಎಂದು ಹೇಳಿದರು.

ದೆಹಲಿ ತಂಡ ಮೊದಲ ದಿನದ ಮೆಗಾ ಹರಾಜಿನಲ್ಲಿ 9 ಆಟಗಾರರನ್ನು ಖರೀದಿಸಿತ್ತು. ಮೆಗಾ ಹರಾಜಿನ ಡಿಸಿ ಸ್ವಾಧೀನಪಡಿಸಿಕೊಂಡ ಆಟಗಾರರು:

1. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) – ಬೌಲರ್ – ರೂ 11.75 ಕೋಟಿ

2. ಕೆಎಲ್ ರಾಹುಲ್ (ಭಾರತ) – ಡಬ್ಲ್ಯುಕೆ-ಬ್ಯಾಟರ್ – ರೂ. 14 ಕೋಟಿ

3. ಜೇಕ್ ಫ್ರೇಸರ್-ಮೆಕ್‌ಗುರ್ಕ್ (ಆಸ್ಟ್ರೇಲಿಯಾ) – ಬ್ಯಾಟರ್ – ರೂ. 9 ಕೋಟಿ (ಆರ್‌ಟಿಎಂ – ಖರೀದಿಸಿದ ಆಟಗಾರರನ್ನು ಪುನಃ ಖರೀದಿಸುವುದು)

4. ಹ್ಯಾರಿ ಬ್ರೂಕ್ (ಇಂಗ್ಲೆಂಡ್) – ಬ್ಯಾಟರ್ – ರೂ. 6.25 ಕೋಟಿ

5. ಟಿ ನಟರಾಜನ್ (ಭಾರತ) – ಬೌಲರ್ – ರೂ. 10.75 ಕೋಟಿ

6. ಕರುಣ್ ನಾಯರ್ (ಭಾರತ) – ಬ್ಯಾಟರ್ – ರೂ. 50 ಲಕ್ಷ

7. ಸಮೀರ್ ರಿಜ್ವಿ (ಭಾರತ) – ಆಲ್‌ರೌಂಡರ್‌- ರೂ 95 ಲಕ್ಷ

8. ಅಶುತೋಷ್ ಶರ್ಮಾ (ಭಾರತ) – ಆಲ್‌ರೌಂಡರ್‌ – ರೂ 3.80 ಕೋಟಿ

9. ಮೋಹಿತ್ ಶರ್ಮಾ (ಭಾರತ) – ಬೌಲರ್ – ರೂ 2.20 ಕೋಟಿ   

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X