ಐಪಿಎಲ್‌ 2023 | ಅಂತಿಮ ಎಸೆತದಲ್ಲಿ ʻನೋ ಬಾಲ್‌ ಡ್ರಾಮʼ; ಸೋತು ಗೆದ್ದ ಹೈದರಾಬಾದ್!

Date:

Advertisements

ನಾಟಕೀಯ ತಿರುವು ಪಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಹೈದರಾಬಾದ್‌ 4 ವಿಕೆಟ್‌ಗಳ ವೀರೋಚಿತ ಜಯ ಸಾಧಿಸಿದೆ.

ಜೈಪುರದಲ್ಲಿ ಭಾನುವಾರ ನಡೆದ ಡಬಲ್‌ ಹೆಡ್ಡರ್‌ʼನ ಎರಡನೇ ಪಂದ್ಯ ಆತಿಥೇಯ ರಾಜಸ್ಥಾನ ರಾಯಲ್ಸ್‌ ತಂಡದ ಪಾಲಿಗೆ ʻಕೈಗೆ ಬಂದ ತುತ್ತು ಬಾಯಿಗೆ ಇಲ್ಲʼ ಎಂಬಂತಾಯಿತು.

ವಿಕೆಟ್-ನೋಬಾಲ್-ಸಿಕ್ಸರ್!

Advertisements

215 ರನ್‌ ಗುರಿ ಬೆನ್ನಟ್ಟುವ ವೇಳೆ ಹೈದರಾಬಾದ್‌ ಗೆಲುವಿಗೆ ಅಂತಿಮ ಎಸೆತದಲ್ಲಿ 5 ರನ್‌ಗಳ ಅಗತ್ಯವಿತ್ತು. ಸ್ಟ್ರೈಕ್‌ನಲ್ಲಿದ್ದ ಸಮದ್‌ ಲಾಂಗ್‌ ಆಫ್‌ಗೆ ಬಾರಿಸಿದ್ದ ಚೆಂಡನ್ನು ಕ್ಷೇತ್ರರಕ್ಷಣೆಯಲ್ಲಿದ್ದ ಜಾಸ್‌ ಬಟ್ಲರ್‌ ಸುಲಭವಾಗಿಯೇ ಕ್ಯಾಚ್‌ ಹಿಡಿದಿದ್ದರು.

ರಾಯಲ್ಸ್‌ ಪಾಳಯದಲ್ಲಿ ವಿಜಯೋತ್ಸವ ಪ್ರಾರಂಭವಾಗುತ್ತಲೇ ಮೈದಾನದಲ್ಲಿ ʻನೋ ಬಾಲ್‌ ಸೈರನ್‌ʼ ಮೊಳಗಿತ್ತು. ಸಂದೀಪ್‌ ಶರ್ಮಾ ಎಸೆದ ಅಂತಿಮ ಎಸೆತ ನೋ ಬಾಲ್‌ ಏಂಬುದು ರೀಪ್ಲೇನಲ್ಲಿ ಸ್ಪಷ್ಟವಾಗಿತ್ತು. ಹೀಗಾಗಿ ಶರ್ಮಾ ಹೆಚ್ಚುವರಿಯಾಗಿ ಬೌಲ್‌ ಮಾಡಬೇಕಾಯಿತು.

ಫ್ರೀ ಹಿಟ್‌ ಅವಕಾಶವಿದ್ದ ಎಸೆತದಲ್ಲಿ ಹೈದರಾಬಾದ್‌ ಗೆಲುವಿಗೆ  4 ರನ್‌ಗಳ ಅಗತ್ಯವಿತ್ತು. ಮೂರು ರನ್‌ ಪಡೆದರೆ ಪಂದ್ಯ ಟೈ ಆಗುತ್ತಿತ್ತು. ಆದರೆ ಯಾವುದರ ತೆಲನೋವು ಬೇಡ ಎಂಬಂತೆ ಸಂದೀಪ್‌ ಶರ್ಮಾ ಎಸೆದ ಬಹುತೇಕ ಯಾರ್ಕರ್‌ ಎಸೆತವನ್ನು ಸಮದ್‌ ಸುಂದರವಾಗಿ ಸಿಕ್ಸರ್‌ಗೆ ಅಟ್ಟಿದರು. ಅಲ್ಲಿಗೆ ರಾಜಸ್ಥಾನ ‘ಗೆದ್ದ’ ಪಂದ್ಯವನ್ನು ಯಾರೂ ನಿರೀಕ್ಷಿಸದ ರೀತಿಯಲ್ಲಿ ಹೈದರಾಬಾದ್‌ ತನ್ನದಾಗಿಸಿಕೊಂಡಿತು.

ಅಂತಿಮ ಎಸೆತ ನೋಬಾಲ್‌ ಅಲ್ಲದೆ ಒಂದು ರನೌಟ್‌ ಅವಕಾಶ ಮತ್ತು ಎರಡು ಸುಲಭ ಕ್ಯಾಚ್‌ (ಮೆಕಾಯ್‌ ಮತ್ತು ಸಂಜು ಸ್ಯಾಮ್ಸನ್‌) ಅವಕಾಶಗಳನ್ನು ಕೈಚೆಲ್ಲಿದ್ದು ರಾಜಸ್ಥಾನ ಪಾಲಿಗೆ ಮುಳುವಾಯಿತು.

ಅಂತಿಮ ಎರಡು ಓವರ್‌ಗಳಲ್ಲಿ 43 ರನ್‌!

18 ಓವರ್‌ಗಳ ಮುಕ್ತಾಯಕ್ಕೆ ಹೈದರಾಬಾದ್‌ ತಂಡ 5 ವಿಕೆಟ್‌ ನಷ್ಟದಲ್ಲಿ 174 ರನ್‌ಗಳಿಸಿತ್ತು. ಇನ್ನುಳಿದ ಕೊನೆಯ 12 ಎಸೆತಗಳಲ್ಲಿ 41 ರನ್‌ಗಳಿಸಬೇಕಾದ ಕಠಿಣ ಗುರಿ ಎಸ್‌ಆರ್‌ಎಚ್‌ ಮುಂದಿತ್ತು. ಆದರೆ 19ನೇ ಓವರ್‌ ಎಸೆದ ಕುಲ್ದಿಪ್‌ ಯಾದವ್‌ ಅವರ ಮೊದಲ ಮೂರು ಎಸೆತಗಳನ್ನು ಫಿಲಿಪ್ಸ್‌ ಹ್ಯಾಟ್ರಿಕ್‌ ಸಿಕ್ಸರ್‌ಗೆ ಟ್ಟಿದರು. ನಂತರದ ಎಸೆತದಲ್ಲಿ ಬೌಂಡರಿಯೂ ದಾಖಲಾಯಿತು. ಹೀಗಾಗಿ ಕೊನೆಯ ಓವರ್‌ನಲ್ಲಿ ಗೆಲುವಿನ ಗುರಿ 17 ಆಗಿತ್ತು.  

ಇದಕ್ಕೂ ಮೊದಲು ತವರು ಅಭಿಮಾನಿಗಳೆದುರು ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಆರ್‌ಆರ್‌ ತಂಡ ಆರಂಭಿಕ ಜಾಸ್‌ ಬಟ್ಲರ್‌ 95 ರನ್‌ (59 ಎಸೆತ 4×10, 6×4) ಮತ್ತು ನಾಯಕ ಸಂಜು ಸ್ಯಾಮ್ಸನ್‌ ಗಳಿಸಿದ ಬಿರುಸಿನ ಅರ್ಧಶತಕಗಳ (66 ರನ್‌, 38 ಎಸೆತ, 4×4, 6×5) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ 214 ರನ್‌ ಗಳಿಸಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X