ಐಪಿಎಲ್‌ನಲ್ಲಿ ತನ್ನನ್ನು ಉಳಿಸಿಕೊಳ್ಳದ ಆರ್‌ಸಿಬಿ: ಭಾವುಕ ಪೋಸ್ಟ್ ಹಾಕಿದ ವೇಗಿ ಮೊಹಮ್ಮದ್ ಸಿರಾಜ್

Date:

Advertisements

ಕಳೆದ ಏಳು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ(ಆರ್‌ಸಿಬಿ) ಭಾಗವಾಗಿದ್ದ ಮೊಹಮ್ಮದ್ ಸಿರಾಜ್, ಅವರನ್ನು ಈ ಬಾರಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಖರೀದಿಸಲು ನಿರಾಸಕ್ತಿ ವಹಿಸಿತ್ತು.

ಆರ್‌ಸಿಬಿ ತನ್ನ ವೇಗಿಯನ್ನು ಉಳಿಸಿಕೊಳ್ಳಲು ನಿರಾಸಕ್ತಿ ವಹಿಸಿದ ಬೆನ್ನಲ್ಲೇ, 2025​ರ ಗುಜರಾತ್ ಟೈಟನ್ಸ್​ ಖರೀದಿ ಮಾಡಿತ್ತು. ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆದ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟನ್ಸ್ ಸಿರಾಜ್ ಅವರನ್ನು 12.25 ಕೋಟಿಗೆ ಖರೀದಿಸಿದೆ.

ಈ ಬೆನ್ನಲ್ಲೇ ಆರ್​ಸಿಬಿ ಜೊತೆಗಿನ ದಿನಗಳನ್ನು ನೆನೆದು ತೆಲಂಗಾಣದ ಡಿಸಿಪಿ, ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಭಾವುಕರಾಗಿದ್ದು, ಆರ್‌ಸಿಬಿ ಜೊತೆಗೆ ಕಳೆದಿದ್ದ ಕ್ಷಣಗಳನ್ನು ಹಾಗೂ ಅನುಭವವನ್ನು ವಿಡಿಯೋ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

Advertisements

ಆರ್‌ಸಿಬಿ ಜೊತೆಗೆ ಕಳೆದ ವಿಶೇಷ ಕ್ಷಣಗಳ ಕುರಿತ ವೀಡಿಯೊವನ್ನು ಸಹಿತ, ಜೊತೆಗೆ ಸುದೀರ್ಘವಾದ ಫೋಸ್ಟ್‌ವೊಂದನ್ನು ಬರೆದುಕೊಂಡಿದ್ದಾರೆ.

“ನನ್ನ ಪ್ರೀತಿಯ ಆರ್‌ಸಿಬಿಗೆ.. ಆರ್‌ಸಿಬಿ ಜೊತೆಗಿನ ಏಳು ವರ್ಷಗಳು ತುಂಬಾ ಖುಷಿ ನೀಡಿವೆ. ಆರ್‌ಸಿಬಿ ಜೆರ್ಸಿಯಲ್ಲಿನ ದಿನಗಳನ್ನು ನೆನಪಿಸಿಕೊಂಡಾಗ ಹೃದಯ ಉಕ್ಕಿ ಬರುತ್ತದೆ. ಕೃತಜ್ಞತೆ, ಪ್ರೀತಿಯ ಭಾವನೆ ನನ್ನಲ್ಲಿ ತುಂಬಿದ ತುಂಬಿ ತುಳುಕುತ್ತದೆ. ಮೊದಲ ಬಾರಿಗೆ ನಾನು ತೊಟ್ಟ ಜೆರ್ಸಿ, ಆರ್​ಸಿಬಿ ಜೊತೆಗಿನ ಬಂಧವನ್ನು ತುಂಬಾನೇ ಬಿಗಿಯಾಗಿಸಿದೆ. ಅದು ಇಷ್ಟರಮಟ್ಟಿಗೆ ನಮ್ಮ ಬಂಧವನ್ನು ಗಟ್ಟಿಯಾಗಿಸುತ್ತೆ ಅಂತಾ ಎಂದೂ ಯೋಚಿಸಿರಲಿಲ್ಲ” ಎಂದು ವೇಗಿ ತಿಳಿಸಿದ್ದಾರೆ.

1002498526

ಮುಂದುವರಿದು, “ಆರ್​ಸಿಬಿ ಪರ ನಾನು ಮಾಡಿದ ಮೊದಲ ಬಾಲ್​​ನಿಂದ ಹಿಡಿದು, ಪ್ರತಿ ವಿಕೆಟ್, ಆಡಿದ ಪ್ರತಿ ಪಂದ್ಯ, ನಿಮ್ಮೊಂದಿಗೆ ಕಳೆದ ಪ್ರತಿಕ್ಷಣ. ಆ ನನ್ನ ಪ್ರಯಾಣ ಅಸಾಧಾರಣ. ಈ ಪ್ರಯಾಣದಲ್ಲಿ ಏರಿಳಿತಗಳಿದ್ದವು. ಆದರೆ ನೆನಪುಗಳು ಸ್ಥಿರವಾಗಿ ಉಳಿದಿವೆ. ಆರ್‌ಸಿಬಿ ಅಂದರೆ ಹೃದಯ ಬಡಿತ, ಮನೆಯಂತೆ ಭಾಸವಾಗುವ ಕುಟುಂಬ. ಇದು ಫ್ರಾಂಚೈಸಿಗಿಂತ ದೊಡ್ಡದು” ಎಂದು ಮೊಹಮ್ಮದ್ ಸಿರಾಜ್ ಬರೆದಿದ್ದಾರೆ.

ಸಿರಾಜ್ ವೀಡಿಯೊ ಪೋಸ್ಟ್‌ನಲ್ಲಿ ‘ನಾ ಹಮಾರಾ, ನಾ ತುಮ್ಹಾರಾ ಹುವಾ, ಇಷ್ಕಾ ಕಾ ಯೇ ಸಿತಮ್ ನ ಗನ್ವಾರಾ ಹುವಾ’ ಹಾಡನ್ನು ಬಳಸಿದ್ದಾರೆ.

ಈ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಗುಜರಾತ್ ಟೈಟನ್ಸ್ ತಂಡದ ರಶೀದ್ ಖಾನ್, ‘ಈಗ ನೀವು ನಮ್ಮವರು’ ಎಂದು ಕಾಲೆಳೆದಿದ್ದಾರೆ.

ಮೊಹಮ್ಮದ್ ಸಿರಾಜ್ ಪೋಸ್ಟ್ ಗೆ ಕಮೆಂಟ್ ಹಾಕಿರುವ ಹಲವಾರು ಆರ್‌ಸಿಬಿ ಅಭಿಮಾನಿಗಳು, ಆರ್‌ಸಿಬಿ ಈವರೆಗೆ ಕಪ್ ಗೆಲ್ಲದಿರಬಹುದು. ಆದರೆ, ಇತರೆಲ್ಲ ಫ್ರಾಂಚೈಸಿಗಳಿಗಿಂತ ಆರ್‌ಸಿಬಿ ಸದಾ ವಿಭಿನ್ನ. ಆರ್‌ಸಿಬಿ ಅಂದರೇನೆ ಅದೊಂದು ಭಾವನಾತ್ಮಕ ಸಂಬಂಧ.‌ ನೀವು ಇನ್ನಷ್ಟು ಸಾಧನೆ ಮಾಡಿ. ಮತ್ತೆ ಆರ್‌ಸಿಬಿ ತಂಡಕ್ಕೆ ಸೇರುವ ದಿನಗಳು ಬರಲಿ. ಆಲ್ ದ ಬೆಸ್ಟ್ ” ಎಂದು ಶುಭ ಹಾರೈಸಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

Download Eedina App Android / iOS

X