ವಿಶ್ವಕಪ್ | ದಕ್ಷಿಣ ಆಫ್ರಿಕಾಕ್ಕೆ 5 ವಿಕೆಟ್ ಗೆಲುವು; ಉತ್ತಮ ಪ್ರದರ್ಶನ ನೀಡಿ ಟೂರ್ನಿಯಿಂದ ಅಫ್ಘಾನ್‌ ನಿರ್ಗಮನ

Date:

Advertisements

ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ರೌಂಡ್‌ ರಾಬಿನ್‌ ಲೀಗ್‌ನ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನ್‌ ನೀಡಿದ 245 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 47.3 ಓವರ್‌ಗಳಲ್ಲಿ ಜಯದ ಮುನ್ನಡಿ ಬರೆಯಿತು. ಹರಿಣಗಳ ಗೆಲುವಿನಲ್ಲಿ  ವಾನ್ ಡರ್ ಡುಸೆನ್(ಅಜೇಯ 76), ಆಂಡಿಲೆ ಫೆಹ್ಲುಕ್ವಾಯೊ(ಅಜೇಯ 39)  ಮಾರ್ಕ್ರಾಮ್ (25),ಡೇವಿಡ್ ಮಿಲ್ಲರ್ (24) ಹಾಗೂ ಕ್ವಿಂಟನ್‌ ಡಿ ಕಾಕ್ (41) ಗೆಲುವಿನ ರೂವಾರಿಗಳಾದರು.

ರಶೀದ್ ಖಾನ್‌ 37/2, ಮೊಹಮ್ಮದ್ ನಬಿ 35/2 ವಿಕೆಟ್ ಪಡೆದು ಪಡೆದು ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಾಡಿ ಒಂದಿಷ್ಟು ಭರವಸೆ ಮೂಡಿಸಿದರೂ ಕೊನೆಯಲ್ಲಿ ವಿಕೆಟ್  ಉರುಳಿಸಲು ಸಾಧ್ಯವಾಗಲಿಲ್ಲ.

Advertisements

ಅತ್ಯಂತ ಹೆಚ್ಚು ಗಳಿಸಿ 430ಕ್ಕೂ ಅಧಿಕ ರನ್‌ಗಳ ಅಂತರ ಗೆಲುವು ಸಾಧಿಸಿದ್ದರೆ ಅಫ್ಘಾನಿಸ್ತಾನ ಸೆಮಿಫೈನಲ್‌ ರೇಸಿನ ಪೈಪೋಟಿಯಲ್ಲಿ ಸ್ಥಾನ ಪಡೆಯುತ್ತಿತ್ತು. ಆದರೆ ಸಾಧರಣ ಮೊತ್ತ ಗಳಿಸುವುದರೊಂದಿಗೆ ಮೊದಲ ನಾಲ್ಕರ ಘಟ್ಟದ ಕನಸು ಕಮರಿ ಹೋಯಿತು. ಜೊತೆಗೆ ದಕ್ಷಿಣ ಆಫ್ರಿಕಾ ತಂಡವನ್ನು ಕೂಡ ಅಲೌಟ್‌ ಮಾಡಲು ಸಾಧ್ಯವಾಗಲಿಲ್ಲ.

ಆದರೂ ಈ ಟೂರ್ನಿಯಲ್ಲಿ ಇಂಗ್ಲೆಂಡ್, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳಂಥ ಪ್ರಬಲ ತಂಡಗಳನ್ನು ಮಣಿಸಿ ಉತ್ತಮ ಪ್ರದರ್ಶನ ತೋರಿತು.

ಈ ಸುದ್ದಿ ಓದಿದ್ದೀರಾ? ಒಂದೇ ಬಾಲ್‌ಗೆ ಎರಡು ವಿಕೆಟ್: ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ‘ಟೈಮ್ಡ್ ಔಟ್’ಗೆ ಮ್ಯಾಥ್ಯೂಸ್ ಔಟ್

ಒಮರ್ಜಾಯ್ ಉತ್ತಮ ಆಟ

ಟಾಸ್‌ ಗೆದ್ದ ಅಫ್ಘಾನ್‌ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಬ್ಯಾಟಿಂಗ್‌ ಆಯ್ದುಕೊಂಡರು. ಅಜ್ಮತುಲ್ಲಾ ಒಮರ್ಜಾಯ್  ಅವರ ಅಜೇಯವಾಗಿ ಗಳಿಸಿದ 97 ರನ್‌ಗಳ ಆಟದಿಂದ ಅಫ್ಘಾನ್‌ 50 ಓವರ್‌ಗಳಲ್ಲಿ  ತನ್ನ ಎಲ್ಲ ವಿಕೆಟ್ ಕಳೆದುಕೊಂಡು 244 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿತು.

ಅಫ್ಘಾನ್‌ ಒಂದು ಹಂತದಲ್ಲಿ  ಕುಸಿತ ಕಂಡಿತ್ತು. 116 ರನ್‌ ವೇಳೆಗೆ 6 ವಿಕೆಟ್‌ ಪತನವಾಗಿತ್ತು. ಆದರೆ, ಕೊನೆಯವರೆಗೂ ನಿಂತು ಆಡಿದ ಒಮರ್ಜಾಯ್‌ ತಂಡದ ಮೊತ್ತ 240 ದಾಟಲು ಕಾರಣರಾದರು.  3 ರನ್‌ಗಳಿಂದ ಶತಕ ವಂಚಿತರಾದರೂ ಅಜೇಯರಾಗಿ ಉಳಿದರು. 107 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ ಹಾಗೂ 3 ಸಿಕ್ಸರ್‌ನೊಂದಿಗೆ  97 ರನ್‌ ಬಾರಿಸಿದರು.

ಇವನ್ನು ಹೊರತು ಪಡಿಸಿದರೆ ನೂರ್ ಅಹ್ಮದ್ (26),ರಹಮತ್ ಶಾ (26) ಹಾಗೂ ರಹಮಾನುಲ್ಲಾ ಗುರ್ಬಾಜ್ (25) ರನ್‌ಗಳ ಕೊಡುಗೆ ನೀಡಿದರು.

ದಕ್ಷಿಣ ಆಫ್ರಕಾ ಪರ ಜೆರಾಲ್ಡ್ ಕೋಟ್ಜಿ 44/4, ಕೇಶವ್‌ ಮಹಾರಾಜ್‌ 25/2 ಹಾಗೂ ಲುಂಗಿ ಎನ್ಗಿಡಿ 69/2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್‌ಗಳೆನಿಸಿಕೊಂಡರು.

 

 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X