ಈ ದಿನ ಕವಿತೆ | ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ ನೀಡು ಪ್ರಭುವೇ…

Date:

Advertisements

ನಡೆಯುತ್ತಿದೆ ತಿಂಗಳಿಂದ ಯುದ್ಧ
ಮುಗಿಯಲಿಲ್ಲ ರಕ್ತ ರಂಗಿನಾಟ
ಪಟಪಟ ಸಿಡಿವ ಮದ್ದು ಗುಂಡು
ಎದೆ ನಡುಗಿಸುವ ಶಬ್ದಕ್ಕೆ
ಬೆದರಿದ ಗರ್ಭದಲ್ಲಿರುವ ಶಿಶುವಿನ
ತಳಮಳದ ಹೊಯ್ದಾಟ.
ಎತ್ತರೆತ್ತರದ ಕಟ್ಟಡಗಳು
ಥರಗುಟ್ಟಿ ನೆಲಕ್ಕುರುಳುವಾಗ
ಒಳಗಿರುವ ಮಹಿಳೆ ಮಕ್ಕಳು
ಜೀವಂತ ಸಮಾಧಿ
ನೋವಿನ ಪರಮಾವಧಿ
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ
ನೀಡು ಪ್ರಭುವೇ…

ಶೌಚಕ್ಕೆ ಉದ್ದನೆಯ ಸಾಲು ಸಾಲು
ನಿಸರ್ಗದ ಒತ್ತಡಕ್ಕೆ ತಡೆ
ಮುಟ್ಟಿಗೆ ಶುದ್ಧ ಪ್ಯಾಡುಗಳಿಲ್ಲ
ಸ್ನಾನಕ್ಕೆ ಶುದ್ದ ನೀರಿಲ್ಲ
ನರಕವಾಗಿದೆ ಬದುಕು
ಗಾಝಾದಲ್ಲಿ ಬಿದ್ದಿರುವ ಶವಗಳು
ಭೀಕರ ಸಾವಿನ ದೃಶ್ಯಗಳು
ಗಾಝಾ ಎಂದರೆ ಮಕ್ಕಳ ಮಸಣ
ಶೌಚ, ನೀರು, ಒಳ ಉಡುಪುಗಳು
ಲಭ್ಯವಿಲ್ಲ, ಎಲ್ಲೆಡೆಯೂ ಅಪಾಯ
ಮಹಿಳೆ ಮಕ್ಕಳಿಗೆ, ಗರ್ಭಿಣಿಯರಿಗೆ
ಸುರಕ್ಷಿತ ತಾಣಗಳೇ ಇಲ್ಲ
ಅಂಗಲಾಚುವ ಹೆಂಗಳೆಯರಿಗೆ
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ
ನೀಡು ಪ್ರಭುವೇ…

ಹೆರಿಗೆ ನೋವು ಕಾಣಿಸಿದೆ
ಯಾವ ಜಾಗವೂ ಸುರಕ್ಷಿತವಲ್ಲ
ಜೀವ ಉಳಿಸಿಕೊಳ್ಳುವ ಹೋರಾಟ
ಹೊಸಜೀವ ಉಳಿಸುವ ಪರದಾಟ
ಅಲ್ಲಿಂದ ಇಲ್ಲಿಗೆ ಅಲೆದಾಟ
ವಲಸೆ ಹೋಗುವುದಾದರೂ ಎಲ್ಲಿಗೆ?
ಮೇಲಿಂದ ಹೆರಿಗೆಯ ನೋವು, ಸಂಕಟ
ಯಾವ ಜಾಗವೂ ಸುರಕ್ಷಿತವಲ್ಲ.
ಮನೆ, ಆಸ್ಪತ್ರೆ, ಶಾಲೆ ಭದ್ರತೆಯ
ತಾಣಗಳೇ ಮಾಯವಾಗಿವೆ.
ಭೂಮಿಯ ಮೇಲೆ ಹೆರಿಗೆಗೊಂದು
ಸುರಕ್ಷಿತ ತಾಣವನ್ನು
ಎಲ್ಲಿ ಹುಡುಕಲಿ ಹೇಳು ಪ್ರಭುವೇ!
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ
ನೀಡು ಪ್ರಭುವೇ…

Advertisements

ಕುಡಿಯಲು ನೀರಿಲ್ಲ
ಅನ್ನ ಆಹಾರ ದೂರದ ಮಾತು
ನೀರಿಲ್ಲದೇ ಬಾಣಂತಿಯರ
ಎದೆ ಹಾಲು ಬತ್ತಿ ಹೋಗಿದೆ
ಹಸಿವು ತಡೆಯದೆ ಹಸುಳೆಗಳ
ಅಕ್ರಂದನ ಮುಗಿಲು ಮುಟ್ಟಿದೆ
ಬಿಕ್ಕಿ ಬಿಕ್ಕಿ ಕಣ್ಣುಮುಚ್ಚುವ ಕಂದ
ವಿದ್ಯುತ್ತಿಲ್ಲ, ಆಮ್ಲಜನಕವಿಲ್ಲದೇ ಜೀವಬಿಟ್ಟ
ಮಕ್ಕಳು ಅಂಗಳದ ಶವವಾಗಿ
ಕೊಳೆತ ವಾಸನೆ ತಡೆಯಲಾಗದು
ಸುರಕ್ಷಿತ ಜಾಗವಿಲ್ಲ ಹೆರಿಗೆಗೆ
ಎಲ್ಲಿ ಹೋಗಲಿ ಹೇಳು ಪ್ರಭುವೇ?
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ
ನೀಡು ಪ್ರಭುವೇ…

ಇಸ್ರೇಲಿನ ಯಹೂದಿಗಳ
ಯುದ್ಧಕ್ಕೆ ಗಾಝಾ ಮಸಣವಾಯ್ತು
ಪ್ಯಾಲೆಸ್ತೇನಿಯರ ನರಮೇಧವಾಯ್ತು
ಉರಿದುಬಿದ್ದ ಮನೆಗಳು
ಛಿದ್ರವಾದ ದೇಹಗಳು
ಹಾಲುಗಲ್ಲದ ಹಸುಮಕ್ಕಳ
ಎದೆಗವುಚಿ ರೋದಿಸುವ ತಾಯಂದಿರು
ಕರುಣೆಯ ಹನಿ ಅಮೃತ ನೀಡಲು
ಅಲ್ಲಾಹ್‍ನಲ್ಲಿ ಪ್ರಾರ್ಥಿಸುವ ಕೈಗಳು
ಹೆರಿಗೆಗೆ ಸುರಕ್ಷಿತ ತಾಣ ಒದಗಿಸಲು
ಕೋರುತ್ತಿದ್ದಾರೆ
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ
ನೀಡು ಪ್ರಭುವೇ…

ಢಾಂ.ಢುಂ.ಧಡ್, ಧಡಲ್
ನಿರಂತರ ಬೀಳುವ ಬಾಂಬು
ಎದೆ ನಡುಗಿಸುವ ಶಬ್ದ
ಹಸಿವು, ನೀರು, ಬಟ್ಟೆಯಿಲ್ಲದೆ
ಪರಿಣಾಮಗಳು ಮುಂದಿವೆ
ಹೆರಿಗೆ ನೋವು ಕಾಣಿಸಿದೆ
ಯಾವ ಜಾಗವೂ ಸುರಕ್ಷಿತವಿಲ್ಲ
ಜೀವ ಉಳಿಸಿಕೊಳ್ಳುವ
ಹೊಸಜೀವ ಉಳಿಸುವ ಪರದಾಟ
ಅಲ್ಲಿಂದ ಇಲ್ಲಿಗೆ ಅಲೆದಾಟ
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ ನೀಡು ಪ್ರಭುವೇ…

k shareefa
ಡಾ ಕೆ ಷರೀಫಾ
+ posts

ಬಂಡಾಯ ಸಾಹಿತಿ, ಕವಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಕೆ ಷರೀಫಾ
ಡಾ ಕೆ ಷರೀಫಾ
ಬಂಡಾಯ ಸಾಹಿತಿ, ಕವಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಮಹಿಳೆಯರು ಮೌಢ್ಯದ ಆಚರಣೆ ಬಿಡಬೇಕು; ವಿಶ್ವೇಶ್ವರಯ್ಯ, ಶರಣ ಸಾಹಿತ್ಯ ಪರಿಷತ್

"ಮಹಿಳೆಯರು ಪುರೋಹಿತಶಾಹಿ ವ್ಯವಸ್ಥೆ ನಿರ್ಮಿಸಿರುವ ಮೌಢ್ಯದ ಆಚರಣೆಗಳನ್ನು ಬಿಟ್ಟು ಹೊರಗೆ ಬರಬೇಕು"...

ದಾವಣಗೆರೆ | ಕನಿಷ್ಠ ವೇತನ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 2025ರ ಜನವರಿಯಲ್ಲಿ ನಡೆದಿದ್ದ ಆಶಾ ಕಾರ್ಯಕರ್ತೆಯರ ರಾಜ್ಯ...

ಶಕ್ತಿ ಯೋಜನೆ | ರಾಜ್ಯಾದ್ಯಂತ 500 ಕೋಟಿ ಮಹಿಳೆಯರ ಪ್ರಯಾಣ: ಕಾರ್ಮಿಕರಿಗೆ ಸುಲಭ ಸಂಚಾರ, ಆರ್ಥಿಕ ಬಲ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ 500...

Download Eedina App Android / iOS

X