‘ಭಾರತಕ್ಕಿಂತ ಮೋದಿ ದೊಡ್ಡವರೆ?’: ಸರ್ಕಾರದ ಪ್ರಚಾರ ರಥಯಾತ್ರೆ ತಡೆದು ಪ್ರಶ್ನಿಸಿದ ಯುವಕ, ವಿಡಿಯೋ ವೈರಲ್

Date:

Advertisements

ಕೇಂದ್ರದ ಯೋಜನೆಗಳ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಮೋದಿ ಹೆಸರಿನಲ್ಲಿ ‘ವಿಕಾಸ ಭಾರತ ಸಂಕಲ್ಪ ಯಾತ್ರಾ’ ರಥಯಾತ್ರೆ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಯೋಜನಾ ರಥಯಾತ್ರೆಯನ್ನು ಪ್ರಶ್ನಿಸಿ ಯುವಕನೊಬ್ಬ ತಡೆದು ನಿಲ್ಲಿಸಿರುವ ಘಟನೆ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ನಡೆದಿದೆ.

ಕೊಲ್ಹಾಪುರ ಜಿಲ್ಲೆಯ ಗ್ರಾಮವೊಂದರ ಇಂಜಿನಿಯರಿಂಗ್ ಪದವೀಧರನಾದ ಯುವಕ ರಾಜ್‌ವೈಭವ್‌ ಸೋಬಾ ರಾಮಚಂದ್ರ ಅವರು ‘ವಿಕಾಸ ಭಾರತ ಸಂಕಲ್ಪ ಯಾತ್ರಾ’ ರಥಯಾತ್ರೆಯನ್ನು ತಡೆದು ನಿಲ್ಲಿಸಿದ್ದಾರೆ. ಸಂಕಲ್ಪ ಯಾತ್ರೆಯಲ್ಲಿ ‘ಮೋದಿ ಗ್ಯಾರಂಟಿ ಯೋಜನೆಗಳು’ ಎಂದು ಅಡಿಬರಹ ಬಳಸಲಾಗಿದ್ದು, ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಪ್ರಶ್ನಿಸಿದ್ದಾರೆ.

ಘಟನೆಯು ಡಿಸೆಂಬರ್‌ 13ರಂದು ನಡೆದಿದ್ದು, ಇಂಜಿಯರಿಂಗ್ ಪದವೀಧರರಾದ 30 ವರ್ಷದ ರಾಮಚಂದ್ರ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ತಾಲೂಕಿನ ಯುವಕನ ಸ್ವಗ್ರಾಮ ಸೋನ್ಯಾಚಿ ಶಿರೋಳಿ ಗ್ರಾಮದಲ್ಲಿ ಸಂಕಲ್ಪ ಯಾತ್ರೆ ಬರುತ್ತಿದ್ದ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

Advertisements

ಯುವಕ ಪ್ರಶ್ನಿಸಿರುವ ವಿಡಿಯೋ ಮಹಾರಾಷ್ಟ್ರದ ವಿವಿಧ ಭಾಗಗಳ ಗ್ರಾಮದಲ್ಲಿ ವೈರಲ್‌ ಆಗಿದ್ದು, ಆತನಿಂದ ಪ್ರೇರೇಪಣೆ ಪಡೆದ ಅನೇಕರು ತಮ್ಮ ಗ್ರಾಮಗಳಲ್ಲಿ ವಿಕಾಸ್ ಭಾರತ್‌ ರಥಯಾತ್ರೆ ವಾಹನವನ್ನು ತಡೆದಿದ್ದಾರೆ. ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಸಾರ್ವಜನಿಕರ ಹಣವನ್ನು ಆಡಳಿತ ಪಕ್ಷ ಬಿಜೆಪಿ ಪೋಲು ಮಾಡುತ್ತಿದೆ ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನ ಈ ಕಚ್ಚಾಟ, ‘ಆತ್ಮಹತ್ಯೆ’ಯ ಹುಚ್ಚಾಟ

“ರಾಜಕೀಯ ಪಕ್ಷಗಳು ಮತ್ತು ಕೇಂದ್ರ ಸರ್ಕಾರದ ನಡುವಿನ ವ್ಯತ್ಯಾಸ ಹಾಗೂ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ನನಗೆ ಅರಿವಿದೆ. ನಾನು ಕೆಲವೊಂದನ್ನು ಗಮನಿಸಿ ಅವರನ್ನು ಪ್ರಶ್ನಿಸಿದೆ. ಮೊದಲನೆಯದಾಗಿ, ಸರ್ಕಾರವೇ ತನ್ನ ಕೆಲಸವನ್ನು ನಿರ್ವಹಿಸುತ್ತಿರುವಾಗ ಇಷ್ಟು ದೊಡ್ಡ ಮಟ್ಟದ ಪ್ರಚಾರ ಏಕೆ ಮಾಡುತ್ತಿದೆ? ಸರ್ಕಾರಿ ಕಾರ್ಯಕ್ರಮಗಳ ಗ್ಯಾರಂಟಿಗಳನ್ನು ಮೋದಿ ಗ್ಯಾರಂಟಿ ಎಂದು ಏಕೆ ಘೋಷಿಸುತ್ತಿದ್ದಾರೆ” ಎಂದು ರಾಮಚಂದ್ರ ಪ್ರಶ್ನಿಸಿದ್ದಾರೆ.

“ಇದು ಸರ್ಕಾರಿ ಕಾರ್ಯಕ್ರಮ ಎಂದು ಪ್ರಚಾರದಲ್ಲಿ ತೊಡಗಿದ್ದ ಅಧಿಕಾರಿಗಳೆ ನಮಗೆ ತಿಳಿಸಿದ್ದಾರೆ. ನನ್ನ ಸರಳ ಪ್ರಶ್ನೆ ಎಂದರೆ, ಒಂದು ನಿರ್ದಿಷ್ಟ ಆಡಳಿತ ಪಕ್ಷಕ್ಕಾಗಿ ಪ್ರಚಾರ ನಡೆಸಲು ಸಾರ್ವಜನಿಕ ಹಣವನ್ನು ದೊಡ್ಡ ಮಟ್ಟದಲ್ಲಿ ಏಕೆ ವೆಚ್ಚ ಮಾಡಲಾಗುತ್ತಿದೆ. ಮೋದಿ ಭಾರತಕ್ಕಿಂತ ದೊಡ್ಡವರೆ? ರಾಷ್ಟ್ರ ಲಾಂಛನವನ್ನು ಒಬ್ಬ ವ್ಯಕ್ತಿಯ ಹಾಗೂ ಒಂದು ಪಕ್ಷದ ಪರವಾಗಿ ಬಳಸಲಾಗುತ್ತದೆ. ಇದನ್ನು ಹೇಗೆ ಅನುಮತಿಸಲಾಗಿದೆ? ಭಾರತದ ಧ್ವಜವನ್ನು ಕೂಡ ರಥಯಾತ್ರೆಯಲ್ಲಿ ಬಿಜೆಪಿ ಧ್ವಜದಂತೆ ಮಾರ್ಪಡಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಮೋದಿ ಹೆಸರನ್ನು ಪ್ರಶ್ನಿಸಿರುವುದಕ್ಕೆ ಕೋಪಗೊಂಡಿರುವ ಸ್ಥಳೀಯ ಬಿಜೆಪಿ ನಾಯಕರು ಪೊಲೀಸ್ ದೂರು ನೀಡುವುದಾಗಿ ರಾಮಚಂದ್ರನಿಗೆ ಬೆದರಿಕೆಯೊಡ್ಡಿದ್ದಾರೆ. ಆದರೆ ತಾವು ಇದ್ಯಾವುದಕ್ಕೂ ಜಗ್ಗುವುದಿಲ್ಲ. ಅಗತ್ಯ ದಾಖಲೆಗಳೊಂದಿಗೆ ಪೊಲೀಸ್ ದೂರು ನೀಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ತಿಳಿಸಿರುವುದಾಗಿ ರಾಮಚಂದ್ರ ಹೇಳಿದ್ದಾರೆ.

ರಾಮಚಂದ್ರನಿಂದ ಸ್ಪೂರ್ತಿ ಪಡೆದ ಹಲವು ಯುವಕರು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳ 60 ಕಡೆ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯನ್ನು ಶಾಂತಿಯುತವಾಗಿ ಕೈಗೊಳ್ಳಿ ಯಾವುದೇ ಕಾರಣಕ್ಕೂ ಗಲಭೆ, ಹಾನಿ ಮಾಡಬೇಡಿ ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ರಾಮಚಂದ್ರ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಇಂಥಾ ಯುವಕರ ಸಂಖ್ಯೆ ಬೆಳೆಯಬೇಕು,,, ಯುವಕರು ಮಬ್ಭಕ್ತರಾಗಬಾರದು,,,ಹಾಗಾದಾಗಲೇ ಈ ರಾಜಕಾರಣ ಇಂಥಾ ಕೆಳ ಮಟ್ಟಕ್ಕೆ ಇಳಿಯುವುದು,,, ಕರ್ನಾಟಕದಲ್ಲಿ ಗ್ಯಾರಂಟಿಗಳನು ಬಿಟ್ಟಿ ಭಾಗ್ಯವೆಂದು ಅಪಪ್ರಚಾರ ಮಾಡುವ ಅರೆಬೆಂದ ಭಕ್ತರು, ಕೋಮುವ್ಯಾಧಿ ಪುರೋಹಿತಶಾಹಿ ಮೋಧ್ಯಮಗಳು,,,ಇಲ್ಲಿ ಮಾತ್ರ ಮೋದಿ ಗ್ಯಾರಂಟಿ ಅಂದ್ರೆ ಪರವಾಗಿಲ್ಲ,,,ಎಡಬಿಡಂಗಿತನ

  2. ಯಾವುದೇ ವಿಷಯವಿರಲಿ , ಪರ – ವಿರೋಧ ಇದ್ದೇ ಇರುತ್ತದೆ. ಕೊಲ್ಹಾಪುರದ ರಾಮಚಂದ್ರ ‘ ಮೋದಿ ಗ್ಯಾರಂಟಿ ‘ ಯನ್ನು ಪ್ರಚಾರಕ್ಕೆ ಬಳಸುವ ರೀತಿಯನ್ನು ಪ್ರಶ್ನಿಸಿದ್ದಾರೆ. ಪ್ರಶ್ನಿಸುವ ಹಕ್ಕನ್ನು ಸಂವಿಧಾನವೇ ನಮಗೆ ಕೊಟ್ಟಿದೆ.

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಅಲ್ಲೂ ಪರ – ವಿರೋಧ ಚರ್ಚೆಗಳು ನಡೆಯುತ್ತಿವೆ. ಚರ್ಚೆಗಳು ನಡೆಯಬೇಕು. ಚರ್ಚೆ – ವಿಮರ್ಶೆಗಳು ನಡೆದಾಗ ಇನ್ನಷ್ಟು ವಿಷಯಗಳು ಹೊರ ಬಂದು ಮತ್ತಷ್ಟು ಚರ್ಚೆಗಳು ನಡೆಯುತ್ತದೆ.

    ಚರ್ಚೆಗಳು ನಡೆಯಬಾರದು. ನಮ್ಮನ್ನು ಯಾರೂ ಪ್ರಶ್ನಿಸಬಾರದು. ನಾವು ಮಾಡಿದುದೆಲ್ಲವೂ ಸರಿ ಎಂಬ ಮನೋಭಾವನೆ ಎಂದೂ , ಯಾರಲ್ಲೂ ಇರಬಾರದು. ‘ ಮನ್ ಕೀ ಬಾತ್ ‘ ನ್ನು ಕೇಳುವ ಜನರು ‘ ಜನ್ ಕೀ ಬಾತ್ ‘ ನ್ನೂ ಕೇಳಲು ಸಿದ್ಧರಿರಬೇಕು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X