ಮಂಡ್ಯ | ಕೋರಮಂಡಲ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಮೇಲೆ ರೈತರ ಆಕ್ರೋಶ

Date:

Advertisements

ಈ ವರ್ಷ ರೈತರು ಬೆಳೆದ ಕಬ್ಬು ನೆಲಕಚ್ಚಿದೆ ಎಂಬುದನ್ನೇ ನೆಪವಾಗಿಟ್ಟುಕೊಂಡಿರುವ ಕೋರಮಂಡಲ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ, ಕಾರ್ಖಾನೆ ತೀವ್ರ ಸಂಕಷ್ಟದಲ್ಲಿ ಇದೆಯೆಂದು ಹೇಳಿಕೆ ನೀಡಿದೆ. ಆದರೆ, ತನ್ನ ಸಮೀಪದಲ್ಲೇ ಬಡ ರೈತ ಹಗಲು-ಇರಳು ಕಷ್ಟಪಟ್ಟು ಕಬ್ಬಿನ ಫಸಲು ಬೆಳೆದಿದ್ದಾರೆ. ಕಬ್ಬು ಬೆಳೆಗೆ 15 ತಿಂಗಳು ಕಳೆದರೂ ಕಟಾವು ಭಾಗ್ಯ ದೊರಕಿಲ್ಲ. ಕಾರ್ಖಾನೆ ಯಾಕೆ ರೈತರು ಬೆಳದ ಕಬ್ಬು ಖರೀದಿ ಮಾಡಿಲ್ಲವೆಂದು ಕಾರ್ಖಾನೆ ಆಡಳಿತ ಮಂಡಳಿಯನ್ನ ರೈತಪರ ಹೋರಾಟಗಾರ ಕರೋಟಿ ತಮ್ಮಯ್ಯ ಪ್ರಶ್ನಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್‌ ಪೇಟೆಯಲ್ಲಿ ಸುದ್ದಿಗಾರರ ಎದುರು ಮಾತನಾಡಿದ ಅವರು, “ಮಾಕವಳ್ಳಿ ಗ್ರಾಮದ ಸಮೀಪವಿರುವ ಕೋರಮಂಡಲ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಜೆ. ರವಿ ರೆಡ್ಡಿ ಅವರು ಪ್ರತೀ ವರ್ಷಕ್ಕಿಂತ ಈ ವರ್ಷ ರೈತರು ಬೆಳೆದ ಕಬ್ಬಿನ ಫಸಲು ವಾಡಿಕೆಗಿಂತ ಈ ಬಾರಿ ಕಮ್ಮಿ ಹಾಗೂ ಹೆಚ್ಚು ಇಳುವರಿ ಇಲ್ಲದ ಕಾರಣ ಕಾರ್ಖಾನೆ ನಷ್ಟದಲ್ಲಿದೆ ಎನ್ನುತ್ತಿದ್ದಾರೆ. ಆದರೆ, ಅವರ ಕಾರ್ಖಾನೆ ಸಮೀಪ ಇರುವ ಮಾಕವಳ್ಳಿಯ ಬಡ ರೈತ ನಾಗೇಶ್ ಅವರ ಸರ್ವೇ ನಂ.119ರಲ್ಲಿ ಕಬ್ಬು ಬೆಳೆದಿದ್ದಾರೆ. ಬೆಳೆದ ಫಸಲುನ್ನು ಅರ್ಧ ಕಟಾವು ಮಾಡಿಕೊಂಡು ಉಳಿದ ಫಸಲನ್ನು ಕಟಾವು ಮಾಡಿಕೊಳ್ಳದೆ ಕಾರ್ಖಾನೆ ಬಿಟ್ಟಿರುವುದೇಕೆ? ಇದು ಕಾರ್ಖಾನೆಯ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಕಾರ್ಖಾನೆಯ ಧೋರಣೆಯಿಂದ ಸಂಕಷ್ಟಕ್ಕೀಡಾಗಿರುವ ರೈತರನ್ನು ಹುಡುಕುತ್ತಾ ಹೋದರೆ ನೂರಾರು ರೈತರು ಸಿಗಬಹುದು” ಎಂದು ಕಿಡಿಕಾರಿದರು.

“ನಿಮ್ಮ ಕಾರ್ಖಾನೆ ತನ್ನ ಸಾಮರ್ಥ್ಯವನ್ನು ಮೀರಿ ಫಸಲುನ್ನು ಹೇರಿದ್ದೀದೆ. ರೈತ ಬೆಳೆದ ಕಬ್ಬು ಈ ಬಾರಿ ಇಳುವರಿ ಬಂದಿಲ್ಲ ಎಂದು ಹೇಳುವವರು ನೀವು ರೈತ ಬೆಳೆದ ಕಬ್ಬನ್ನ ಸೂಕ್ತ ಸಮಯಕ್ಕೆ ಕಟಾವು ಮಾಡಿಸಿಕೊಂಡರೆ ಸೂಕ್ತ ಇಳುವರಿ ದೊರಕುತ್ತದೆ. ಅದನ್ನು ಬಿಟ್ಟು ವರ್ಷದ ಮೇಲೆ ಆರು ತಿಂಗಳು ಕಳೆದರೂ ಕಬ್ಬಿನ ಕಟಾವು ಭಾಗ್ಯ ದೊರಕುವುದಿಲ್ಲ, ಎಂದರೆ ಇಳುವರಿ ಬರುತ್ತಾ ಎಂದು ನೀವೇ ಹೇಳಬೇಕು” ಎಂದು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisements

“ಕಟಾವು ವಿಚಾರದಲ್ಲಿ ಕಬ್ಬಿನ ಅರ್ಧ ಹಣವನ್ನ ಕಟಾವುಗೆ ನೀಡುವ ಪರಿಸ್ಥಿತಿಗೆ ತಲುಪುತ್ತದೆ. ನಿಮ್ಮ ಕಾರ್ಖಾನೆಯ ಲಾಭಕ್ಕಾಗಿ ಅಪಾಯಕಾರಿ ಎಥನಾಲ್ ಘಟಕ ಸ್ಥಾಪನೆಯ ತಯಾರಿಗಾಗಿ ಕಾರ್ಖಾನೆ ನಷ್ಟದಲ್ಲಿದೆ ಎನ್ನುವ ಹೇಳಿಕೆಯನ್ನ ನಿಲ್ಲಿಸಬೇಕು. ಮೊದಲು ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮದ ಅಭಿವೃದ್ಧಿಯ ಬಗ್ಗೆ, ತಾಲೂಕಿನ ರೈತರ ವಿಚಾರದಲ್ಲಿ ಮತ್ತು ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಅಸಡ್ಡೆ ತೋರಿಸುವುದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ” ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತ ಮಾಕವಳ್ಳಿ ನಾಗೇಶ್, ಕರೋಟಿ ರವಿಕುಮಾರ್ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X