ಈ ದಿನ ಗ್ರೌಂಡ್ ರಿಪೋರ್ಟ್‌ | ವಯನಾಡ್; ಕೆಸರು ಮಣ್ಣು ಎಂದು ಕಾಲಿಟ್ಟಿದ್ದೆ, ಆದರೆ, ಅಲ್ಲಿ ಪುಟ್ಟ ಮಗುವಿನ ಮೃತದೇಹವಿತ್ತು!

Date:

Advertisements

ಕೇರಳ ಕಂಡ ಅತ್ಯಂತ ಭೀಕರ ಭೂ ಕುಸಿತವು ವಯನಾಡ್ ಜಿಲ್ಲೆಯಲ್ಲಿ ಕಳೆದ ಜುಲೈ 30ರ ಬೆಳ್ಳಂಬೆಳಗ್ಗೆ ಸಂಭವಿಸಿತ್ತು. ಅಲ್ಲಿನ ಪರಿಸ್ಥಿತಿಗಳ ಬಗ್ಗೆ ವರದಿ ಮಾಡಲು ಈ ದಿನ.ಕಾಮ್ ಪ್ರತಿನಿಧಿ ಮೋಹನ್ ಮೈಸೂರು ತೆರಳಿದ್ದಾರೆ.

ಹೆಜ್ಜೆ ಇಟ್ಟರೆ ಹುದುಗುವ ಪಾದಗಳು. ಯಾರ ದೇಹದ ಮೇಲೆ ಕಾಲಿಟ್ಟೆವೋ ಅನ್ನುವ ಪಾಪ ಪ್ರಜ್ಞೆ, ನೋವಿನ ದುಗುಡ, ಹೆಜ್ಜೆ ಹೆಜ್ಜೆಗೂ ಭೂ ಸಮಾಧಿಯಾದವರ ಹುಡುಕಾಟ.

ಹೌದು ಇದು. ವಯನಾಡ್‌ನ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಬಗ್ಗೆ ವರದಿ ಮಾಡಲು ತೆರಳಿದಾಗ ಆದ ಅನುಭವ.

Advertisements

ಈ ದಿನ.ಕಾಮ್‌ನ ಪ್ರತಿನಿಧಿಯಾಗಿ ವಯನಾಡ್‌ನ ಭೀಕರ ದುರಂತದ ಬಗ್ಗೆ ವರದಿ ಮಾಡಲೆಂದು ತೆರಳಿದ್ದೆ. ಭೂಕುಸಿತಕ್ಕೆ ಒಳಗಾಗಿದ್ದ ಅಟ್ಟಮಲ ಗ್ರಾಮದಲ್ಲಿ ವಿಡಿಯೋ ಮಾಡುತ್ತಿರುವಾಗ ಸ್ಥಳದಲ್ಲಿ ಕಾರ್ಯಾಚರಣೆಯಲ್ಲಿದ್ದ ಪೊಲೀಸರೊಬ್ಬರು ಕೈಸನ್ನೆ ಮೂಲಕ ಕೆಳಗೆ ನೋಡು ಅನ್ನುವ ಸಂಜ್ಞೆ ಮಾಡುತ್ತಾ ಇದ್ದರು. ನಾನು ಜೋಪಾನವಾಗಿ ನೋಡಿಕೊಂಡು ಸಾಗು ಅನ್ನುತ್ತಿರಬೇಕು ಎಂದು ಭಾವಿಸಿದೆ. ಆದರೆ, ಮತ್ತದೇ ಸಂಜ್ಞೆ ಮಾಡಿದಾಗ ಒಮ್ಮೆ ಕೆಳಗೆ ನೋಡಿದೆ. ನನ್ನ ಕಾಲಿನ ಪಕ್ಕದಲ್ಲಿ ಮಗುವಿನ ದೇಹ.

ವಯನಾಡ್ 1 1

ಹೌದು. ಪುಟ್ಟ ಮಗುವಿನ ಮೃತದೇಹವೊಂದು ನನ್ನ ಕಾಲ ಬುಡದಲ್ಲಿತ್ತು. ಗುರುತಿಸಲು ಅಸಾಧ್ಯವಾದ ರೀತಿಯಲ್ಲಿ ಕೊಳೆತಿದೆ. ಕ್ಷಣಾರ್ಧದಲ್ಲೇ ಒಳಗಿನಿಂದಲೇ ಕುಸಿದು ಹೋದೆ, ನನಗೆ ಅರಿವಿಲ್ಲದೆ ಕಂಗಳಲ್ಲಿ ಹನಿ, ಕೈಕಾಲು ನಡುಗಿತು.

ಮರದ ಕೊಂಬೆಗಳ ನಡುವೆ ಸಿಲುಕಿಕೊಂಡಿದ್ದ ಪುಟ್ಟ ಮಗುವಿನ ಮೃತದೇಹವೊಂದು ಕಣ್ಣಿಗೆ ಬಿತ್ತು. ಅದರ ಸಮೀಪವೇ ಕ್ರಿಕೆಟ್ ಬಾಲ್. ಜೊತೆಗೆ ಪಕ್ಕದಲ್ಲೇ ಚಾಕಲೇಟ್ ಕೂಡ ಬಿದ್ದಿತ್ತು.

ವಯನಾಡ್ ಜಿಲ್ಲೆಯಲ್ಲಿ ಕಳೆದ ಜುಲೈ 30ರ ಬೆಳ್ಳಂಬೆಳಗ್ಗೆ ಭೀಕರ ಭೂಕುಸಿತ ಸಂಭವಿಸಿತ್ತು. ಅಲ್ಲಿನ ಪರಿಸ್ಥಿತಿಗಳನ್ನು ನೋಡಿದರೆ, ಬರೆಯಲು ಕೂಡ ಪದಗಳು ಸಿಗದು.

ವಯನಾಡು ಜಿಲ್ಲೆಯ ಕಲ್ಪೆಟ್ಟ ಮಂಡಲ, ಮೇಪ್ಪಾಡಿ ವ್ಯಾಪ್ತಿಯ ಮುಂಡಕೈ, ಚೋರಲ್‌ಮಲ, ಅಟ್ಟಮಲ, ಪುದುಮಲ, ಸೂಜಿಪಾರ ವ್ಯಾಪ್ತಿಯಲ್ಲಿ ಭೂ ಕುಸಿತ ದುರಂತ ಸಂಭವಿಸಿದೆ.

ಮೇಪ್ಪಾಡಿಯಿಂದ ಸರಿ ಸುಮಾರು 13 ಕಿಮೀ ದೂರ ಇರುವ ಪ್ರದೇಶ ಈ ಮುಂಡಕೈ. ಈಗೇನು ಭೂ ಕುಸಿತ ಆಗಿದೆ ಈ ಪ್ರದೇಶವೆಲ್ಲ ಪ್ರವಾಸೋದ್ಯಮ, ರೆಸಾರ್ಟ್, ಗ್ಲಾಸ್ ಬ್ರಿಡ್ಜ್, ಝಿಪ್ ವೈರ್, ಮೌಂಟೇನ್ ವ್ಯೂ ಹೀಗೆ ಪ್ರವಾಸಿಗರನ್ನು ಕೈಬೀಸಿ ಕರೆಯುವ ಸುಂದರ ತಾಣವಾಗಿತ್ತು. ಆದರೆ, ಪ್ರಕೃತಿ ಮುಂದೆ ನಾವೆಲ್ಲರೂ ನಗಣ್ಯ ಎಂಬುದನ್ನು ಈ ದುರಂತ ಸಾಕ್ಷಿಯಾಗಿದೆ.

ಸತತ ಮೂರು ವಾರಗಳಿಂದ ತೀವ್ರ ಮಳೆಗೆ ನಲುಗಿದ್ದ ಈ ಪ್ರದೇಶ ಭೂ ಕುಸಿತದಿಂದಾಗಿ ಅಷ್ಟು ಗ್ರಾಮಗಳು ಭೂ ಸಮಾಧಿಯಾಗಿದೆ. ಗ್ರಾಮಕ್ಕೆ ಗ್ರಾಮವೇ ಕೊಚ್ಚಿಕೊಂಡು ಹೋಗಿದೆ. ನೂರಾರು ಜನ ಕಣ್ಮರೆಯಾಗಿದ್ದಾರೆ.

ಮುಂಡಕೈ, ಅಟ್ಟಮಲ, ಪುದುಮಲ ಮಾರ್ಗವಾಗಿ ಬೆಟ್ಟ ಗುಡ್ಡಗಳಿಂದ, ಟೀ ಎಸ್ಟೇಟ್ ಮೂಲಕ ಪದಿನೊನ್ನಾಮ್ ಪಾಲಂ ಎಂಬ ಪುಟ್ಟ ಕಾಲುವೆ ಹರಿಯುತ್ತಾ ಇದ್ದಿದ್ದು, ಈಗ ದೊಡ್ಡ ನದಿಯಂತೆ ಮಾರ್ಪಾಡಾಗಿದೆ.

ವಯನಾಡ್ 3

ಮುಂಡಕೈ ಗ್ರಾಮದಲ್ಲಿ ಸುಮಾರು 400 ಮನೆಗಳಿದ್ದವು ಎಂದು ಬದುಕಿ ಉಳಿದವರು ಮಾಹಿತಿ ನೀಡಿದ್ದಾರೆ. ಈಗ ಶೇ.90ರಷ್ಟು ಮನೆಗಳು ಉಳಿದಿಲ್ಲ. ನೂರಾರು ಜನ ಕೊಚ್ಚಿ ಹೋಗಿದ್ದಾರೆ, ಮಣ್ಣಿನಡಿ ಸಮಾಧಿಯಾಗಿ ಹೋಗಿದ್ದಾರೆ.

ಇನ್ನು ಅಟ್ಟಮಲ, ಪುದುಮಲ, ಚೋರಲ್ ಮಲ ಭಾಗದ ಎಸ್ಟೇಟ್ ಕೂಲಿ ಕೆಲಸಕ್ಕೆ ಬಂದಿದ್ದ ಅಸ್ಸಾಂ ಭಾಗದ ಕುಟುಂಬಗಳು ನಾಪತ್ತೆ, ಕನ್ನಡಿಗರ ಮನೆ, ಕುಟುಂಬಗಳು ಕಣ್ಮರೆಯಾಗಿವೆ. ರೆಸಾರ್ಟ್‌ನಲ್ಲಿ ಉಳಿದಿದ್ದವರು ಇಲ್ಲ. ಸಿಕ್ಕ ದೇಹಗಳಲ್ಲಿ ಗುರುತಿಸಿದ, ಗುರುತಿಸಲಾಗದ ದೇಹಗಳನ್ನಷ್ಟೇ ಹೇಳಲು ಸಾಧ್ಯ ಆಗಿದೆ ವಿನಃ ಇದುವರೆಗೆ ಕಣ್ಮರೆಯಾದವರ ಬಗ್ಗೆ ಹೇಳಲು ಸಾಧ್ಯವೇ ಆಗಿಲ್ಲ.

ತಮ್ಮ ಪ್ರಾಣ ಉಳಿಸಿಕೊಳ್ಳುವುದೇ ಕಷ್ಟ, ಬೇರೆಯವರ ಪ್ರಾಣ ಉಳಿಸಲು ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಂಡ ಕೆಲವು ಕುಟುಂಬಗಳ ಪರಿಸ್ಥಿತಿಯಂತೂ ಕರುಣಾಜನಕ.

ವಯನಾಡ್ 2

ಪ್ರವಾಸಿಗರ ಸ್ವರ್ಗವಾಗಿದ್ದ ವಯನಾಡು ಇದೀಗ ನರಕವಾಗಿದೆ. ಮತ್ತೆ ಪ್ರವಾಸೋದ್ಯಮ ಚೇತರಿಸಿಕೊಳ್ಳುವುದು ಕಷ್ಟದ ಮಾತು. ಸಹಜ ಸ್ಥಿತಿಗೆ ಮರಳಲು ಸಾಧ್ಯವೇ ಅನ್ನುವ ಪ್ರಶ್ನೆ ಈಗ ಸಂತ್ರಸ್ತರ ಮುಂದಿರುವುದು. ಹಲವಾರು ವರ್ಷಗಳಿಂದ ಕಟ್ಟಿಕೊಂಡಿದ್ದ ಬದುಕು ದಿಢೀರ್ ಭೂಕುಸಿತ ಉಂಟಾಗಿ, ನೀರಲ್ಲಿ ಕೊಚ್ಚಿ ಹೋಗಿದೆ. ನನ್ನೋರು, ತನ್ನೋರು ಯಾರಿಲ್ಲ. ಜನರ ಆರ್ತನಾದ ಕೇಳುಗರ ಕಿವಿ ಗುಯ್ ಅನ್ನದೆ ಬಿಡದು.

ಎಲ್ಲಿ ನೋಡಿದರಲ್ಲಿ ಮಡುಗಟ್ಟಿದ ದುಃಖ. ಮಾತಾಡಿದರೆ, ಮಾತಾಡಿಸಿದರೆ ನನ್ನವರು, ತನ್ನ ಕುಟುಂಬದವರ ಕಳೆದುಕೊಂಡ ಮಾತುಗಳು. ಪ್ರಕೃತಿ ಮುನಿದಾಗ ಅದರ ರುದ್ರ ತಾಂಡವದ ನರಕ ಸದೃಶ್ಯವೇ ವಯನಾಡಿನ ಭೂ ಕುಸಿತ.

WhatsApp Image 2023 09 02 at 8.42.26 PM
ಮೋಹನ್ ಜಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X