ಮಂಡ್ಯ | ಆತಂಕವಾದ ಸೋಲಿಸಿ, ಶಾಂತಿ, ಸೌಹಾರ್ದತೆ ಬೆಳೆಸಬೇಕಿದೆ: ಅಪರ ಜಿಲ್ಲಾಧಿಕಾರಿ ಹೆಚ್ ಎಲ್ ನಾಗರಾಜು

Date:

Advertisements

ದೇಶದಲ್ಲಿಂದು ನಮ್ಮನ್ನೆಲ್ಲ ಆತಂಕವಾದ ಬೆಂಬಿಡದೆ ಕಾಡುತ್ತಿದೆ. ಈ ಆತಂಕವಾದವನ್ನು ಸೋಲಿಸಿ, ಶಾಂತಿ, ಸೌಹಾರ್ದತೆಯನ್ನು ಬೆಳೆಸಬೇಕಿದೆ. ಆಗ ಮಾತ್ರ ದೇಶದಲ್ಲಿ ಐಕ್ಯತೆ ಸಾಧ್ಯ ಎಂದು ಮಂಡ್ಯ ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ನುಡಿದರು.

ಅವರು ಕಲಾವಿದೆ ಮಂಜುಳ ಆಲದಹಳ್ಳಿ ಮುಂದಾಳತ್ವದ ಅರುಣೋದಯ ಕಲಾತಂಡ, ಹುಲುಗಪ್ಪ ಕಟ್ಟಿಮನಿಯವರ ಸಂಕಲ್ಪ ಮೈಸೂರು ತಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಜತೆಗಿರುವನು ಚಂದಿರ’ ಸಾಮಾಜಿಕ ನಾಟಕ ಪ್ರದರ್ಶನವು ಮಂಡ್ಯದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಜರುಗಿತು. ನಾಟಕ ಪ್ರದರ್ಶನಕ್ಕೆ ತಬಲ ಬಾರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, “ಸರ್ವರೂ ಸಮನ್ವಯತೆಯಿಂದ ಬದುಕಲು ಸಾಧ್ಯ. ಸರ್ವ ಜನಾಂಗದ ಮನಸ್ಸುಗಳನ್ನು ಗಟ್ಟಿಗೊಳಿಸಿದರೆ ಮಾತ್ರ ದೇಶ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮತ್ತೊಮ್ಮೆ ಪ್ರಚೋದನಾಕಾರಿಗಳೇ ಪ್ರಜ್ವಲಿಸುತ್ತವೆ ದೇಶದಲ್ಲಿ ಅಶಾಂತಿ ಮೂಡುತ್ತದೆ ಎಂದು ಅಭಿಪ್ರಾಯಿಸಿದರು.

Advertisements
WhatsApp Image 2024 08 13 at 9.56.36 AM 1

“ಅಶಾಂತಿ ಮೂಡಿದಾಗ ವ್ಯಕ್ತಿಗಳಾಗಲಿ ಕುಟುಂಬಗಳಾಗಲಿ, ಸಮಾಜವಾಗಲಿ ನೆಮ್ಮದಿಯಿಂದ ಬದುಕಲಿಕ್ಕೆ ಸಾಧ್ಯವಿಲ್ಲ. ಆತಂಕಗಳು ಹೆಚ್ಚಾಗುತ್ತಾ ಹೋಗುತ್ತವೆ. ಆತಂಕವಾದಿಗಳ ಕೈಗೆ ನಮ್ಮ ಅತಂಕ ಸಿಗುತ್ತದೆ. ಆಗ ಅವರು ಮತ್ತಷ್ಟು ಪ್ರಬಲರಾಗುತ್ತಾರೆ. ಸಮಾಜವನ್ನು ಸರ್ವನಾಶ ಮಾಡುತ್ತಾರೆ. ಮನುಕುಲದ ನಾಶವಾಗುವ ಆತಂಕಗಳು ಹೆಚ್ಚಾಗುತ್ತಾ ಹೋಗುತ್ತವೆ. ಇಂತಹ ಸನ್ನಿವೇಶಗಳ ನಡುವೆ ಸರ್ವಜನಾಂಗದ ಪ್ರೀತಿ, ಸಹಬಾಳ್ವೆ, ನೆಮ್ಮದಿಯ ಸಂದೇಶವನ್ನು ಸಾರುವ ಜತೆಗಿರುವನು ಚಂದಿರ ನಾಟಕದಂತ ಪ್ರದರ್ಶನಗಳು ಹೆಚ್ಚೆಚ್ಚು ನಡೆಯಲಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಲಿ” ಎಂದರು.

ರೈತನಾಯಕಿ ಸುನಂದ ಜಯರಾಂ ಮಾತನಾಡಿ, “ದೇಶದಲ್ಲಿ ಐಕ್ಯತೆಯನ್ನು ಸಾಧಿಸಲು ಧರ್ಮ, ಜಾತಿ, ಮತ ಬಿಟ್ಟು ಒಗ್ಗಟ್ಟಿನಿಂದ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.

ರಂಗನಿರ್ದೇಶಕಿ ಕೆ.ಆರ್ .ಸುಮತಿ ಮಾತನಾಡಿ, ತಾಯಿಗೆ ಅತ್ಯುತ್ತಮ ಸ್ಥಾನಮಾನವನ್ನು ನೀಡುತ್ತೇವೆ. ಆದರೆ ಈ ವ್ಯವಸ್ಥೆ ಭ್ರೂಣದಲ್ಲೇ ಹೆಣ್ಣು ಮಗುವಿನ ವಿರುದ್ದ ನಿಲ್ಲುವಷ್ಟು ಕ್ರೂರವಾಗಿದೆ. ಮಹಿಳೆಯರ ಸಮಾನತೆಯ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮ ನುಡಿಯನ್ನು ನಡೆಯ ಜೊತೆ ಸಮನ್ವಯ ಮಾಡುವುದನ್ನು ಮರೆತು ಬಿಡುತ್ತೇವೆ. ನಮ್ಮ ನಡೆ-ನುಡಿಯ ಜೊತೆ ಸಮನ್ವಯತೆ ಇರಬೇಕು” ಎಂದರು.

ಹುಲುಗಪ್ಪ ಕಟ್ಟಿಮನಿ ಅವರ ರಂಗವಿನ್ಯಾಸ, ನಿರ್ದೇಶನದಲ್ಲಿ ಮೂಡಿಬಂದ `ಜತೆಗಿರುವನು ಚಂದಿರ’ ನಾಟಕ ಪ್ರೇಕ್ಷಕರ ಮನಗೆದ್ದಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರುಣೋದಯ ಕಲಾತಂಡದ ಗೌರವಾಧ್ಯಕ್ಷ ಜೆ ಡಿ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಅರುಣೋದಯ ಕಲಾತಂಡದ ಅಧ್ಯಕ್ಷೆ ಆಲದಹಳ್ಳಿ ಮಂಜುಳಾ, ಪ್ರಗತಿಪರ ಚಿಂತಕ ಬಿ ಟಿ ವಿಶ್ವನಾಥ್, ಸಿಐಟಿಯುನ ಸಿ.ಕುಮಾರಿ, ರೈತಸಂಘದ ಲತಾಶಂಕರ್, ನಿವೃತ್ತ ಶಿಕ್ಷಕಿ ರತ್ನಜೈನ್ ಉಪಸ್ಥಿತರಿದ್ದರು. ಕ್ರಾಂತಿಗೀತೆಗಾಯಕ, ಜನಕಲಾರಂಗದ ಅಧ್ಯಕ್ಷ ಹುರುಗಲವಾಡಿ ರಾಮಯ್ಯ ನಿರೂಪಿಸಿದರು.

WhatsApp Image 2024 08 13 at 9.56.37 AM 2
WhatsApp Image 2024 08 13 at 9.56.37 AM 1
WhatsApp Image 2024 08 13 at 9.56.37 AM
WhatsApp Image 2024 08 13 at 9.56.36 AM
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿಂದನೆ ಆರೋಪ : ಬಂಧಿತರಾಗಿದ್ದ ವಕೀಲ ಕೆ ಎನ್‌ ಜಗದೀಶ್‌ಗೆ ಜಾಮೀನು ಮಂಜೂರು

ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದ ಆರೋಪದ ಮೇಲೆ ಶುಕ್ರವಾರ ಸಂಜೆ ಬಂಧಿತರಾಗಿದ್ದ ಬಿಗ್‌...

ಚಿಕ್ಕಮಗಳೂರು l ಅತ್ತೆಯನ್ನು ಹತ್ಯೆಗೈದ ಸೊಸೆ

ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಸೊಸೆಯೇ ಅತ್ತೆಯನ್ನು ಹತ್ಯೆ ಮಾಡಿರುವ ಘಟನೆ...

ಧರ್ಮಸ್ಥಳ ಪ್ರಕರಣ | ಸೌಜನ್ಯ ಹೋರಾಟ ಮುಂದುವರಿಯಲಿದೆ: ಮಹೇಶ್ ಶೆಟ್ಟಿ ತಿಮರೋಡಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಕೋಲಾರ | ಪ್ರಗತಿಪರ ರೈತ ತುರಾಂಡಹಳ್ಳಿ ರವಿ ತೋಟಕ್ಕೆ ಅಂತಾರಾಷ್ಟ್ರೀಯ ಅಧಿಕಾರಿಗಳು ಭೇಟಿ

ಕೋಲಾರ ತಾಲೂಕಿನ ತುರಾಂಡಹಳ್ಳಿ ಗ್ರಾಮದ ಪ್ರಗತಿಪರ ರೈತ ಟಿ.ಎನ್ ರವಿ ಅವರ...

Download Eedina App Android / iOS

X