ಐಪಿಎಲ್‌ ಹಿನ್ನೋಟ | 15 ಆವೃತ್ತಿ, 3 ಫೈನಲ್, ಒಮ್ಮೆಯೂ ಒಲಿಯದ ಚಾಂಪಿಯನ್‌ ಪಟ್ಟ

Date:

Advertisements

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 16ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಮಾರ್ಚ್‌ 31ರಂದು ಅಹ್ಮದಾಬಾದ್‌ನಲ್ಲಿ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌-ನಾಲ್ಕು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗುವುದರೊಂದಿಗೆ ಈ ಬಾರಿಯ ಟೂರ್ನಿಗೆ ಚಾಲನೆ ದೊರೆಯಲಿದೆ.

2008ರಲ್ಲಿ 8 ತಂಡಗಳೊಂದಿಗೆ ಆರಂಭವಾದ ಐಪಿಎಲ್‌, ಈ ಬಾರಿ 16ನೇ ಆವೃತ್ತಿಗೆ ಕಾಲಿಡುತ್ತಿದ್ದು, 10 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಕಳೆದ 15 ಆವೃತ್ತಿಗಳಲ್ಲೂ ಅಭಿಮಾನಿಗಳ ನೆಚ್ಚಿನ ತಂಡವಾಗಿದ್ದರೂ ಸಹ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಆರ್‌ಸಿಬಿ ತಂಡ ಒಮ್ಮೆಯೂ ಚಾಂಪಿಯನ್‌ ಆಗಿಲ್ಲ ಎಂಬುದು ವಿಶೇಷ. 2016ರಲ್ಲಿ ಕೊನೆಯದಾಗಿ  ಫೈನಲ್‌ ಪ್ರವೇಶಿಸಿದ್ದ ಆರ್‌ಸಿಬಿ, ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ  8 ರನ್‌ಗಳ ಅಂತರದಲ್ಲಿ ಶರಣಾಗಿತ್ತು.    

2013ರಿಂದ 2021ರವರೆಗೂ ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದರೂ ಸಹ ಚಾಂಪಿಯನ್‌ ಪಟ್ಟದಿಂದ ದೂರವೇ ಉಳಿದಿದೆ. ಇದುವರೆಗೂ ಮೂರು ಬಾರಿ ಫೈನಲ್‌ ಪ್ರವೇಶಿಸಿದ್ದೇ ಐಪಿಎಲ್‌ನಲ್ಲಿ ಆರ್‌ಸಿಬಿಯ ದೊಡ್ಡ ಸಾಧನೆ. ಆದರೆ ಈ ಮೂರೂ ಫೈನಲ್‌ಗಳಲ್ಲೂ ಬೆಂಗಳೂರು ತಂಡ ಮುಗ್ಗರಿಸಿದೆ.

Advertisements

ಆರ್‌ಸಿಬಿ ಫೈನಲ್‌ ಆಡಿದ ವರ್ಷ, ಎದುರಾಳಿ ತಂಡ ಮತ್ತು ಮೈದಾನ

2009 ಡೆಕ್ಕನ್‌ ಚಾರ್ಜರ್ಸ್‌, ವಾಂಡರರ್ಸ್‌ ಸ್ಟೇಡಿಯಂ,

2011 ಚೆನ್ನೈ ಸೂಪರ್‌ ಕಿಂಗ್ಸ್‌ , ಎಂ ಎ ಚಿದಂಬರಂ ಸ್ಟೇಡಿಯಂ

2016 ಸನ್‌ರೈಸರ್ಸ್‌ ಹೈದರಾಬಾದ್‌, ಎಂ ಚಿನ್ನಸ್ವಾಮಿ ಸ್ಟೇಡಿಯಂ  

2008ರಿಂದ 2022ರವರೆಗಿನ ಆರ್‌ಸಿಬಿಯ ಐಪಿಎಲ್‌ ಪಯಣ

2008 ಲೀಗ್ ಹಂತ, 7ನೇ ಸ್ಥಾನ

2009 ರನ್ನರ್ಸ್-ಅಪ್

2010 ಪ್ಲೇಆಫ್‌

2011 ರನ್ನರ್ಸ್-ಅಪ್

2012 ಲೀಗ್ ಹಂತ, 5ನೇ ಸ್ಥಾನ

2013 ಲೀಗ್ ಹಂತ, 5ನೇ ಸ್ಥಾನ

2014 ಲೀಗ್ ಹಂತ, 7ನೇ ಸ್ಥಾನ

2015 ಪ್ಲೇಆಫ್‌

2016 ರನ್ನರ್ಸ್ ಅಪ್

2017 ಲೀಗ್ ಹಂತ, 8ನೇ ಸ್ಥಾನ

2018 ಲೀಗ್ ಹಂತ 6ನೇ ಸ್ಥಾನ

2019 ಲೀಗ್ ಹಂತ 8ನೇ ಸ್ಥಾನ

2020 ಪ್ಲೇಆಫ್

2021 ಪ್ಲೇ ಆಫ್‌

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X