ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರಕ್ಕೆ ಬಿಜೆಪಿ ಟಕ್ಕರ್‌ | ದೇವದಾಸ್‌ಗೆ ರಾಹುಲ್‌ ಗಾಂಧಿ ಹೋಲಿಸಿ ಪೋಸ್ಟರ್

Date:

Advertisements
  • ಪಾಟ್ನಾದ ಬಿಜೆಪಿ ಕಚೇರಿ ಹೊರಗೆ ರಾಹುಲ್‌ ಗಾಂಧಿ ಪೋಸ್ಟರ್
  • ವಿಷ್ಣುವಿನ ಪಕ್ಕ ರಾಹುಲ್‌ ಫೋಟೋವಿನ ಪೋಸ್ಟ್‌ ಹಾಕಿದ ಆರ್‌ಜೆಡಿ

ಬಿಹಾರದ ಪಾಟ್ನಾದ ಬೀದಿಗಳಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ಪೋಸ್ಟರ್‌ಗಳು ರಾರಾಜಿಸುತ್ತಿದ್ದು ಇದಕ್ಕೆ ವಿರುದ್ಧವಾಗಿ ಬಿಜೆಪಿಯು ರಾಜ್ಯದ ತನ್ನ ಕಚೇರಿ ಹೊರಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ‘ದೇವದಾಸ್’ ಪಾತ್ರಕ್ಕೆ ಹೋಲಿಕೆ ಮಾಡಿ ಪೋಸ್ಟರ್‌ವೊಂದನ್ನು ಹಾಕಿದೆ ಎಂದು ಶುಕ್ರವಾರ (ಜೂನ್‌ 23) ವರದಿಯಾಗಿದೆ.

ನಾನಾ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಟ್ನಾದಲ್ಲಿ ಈ ಪೋಸ್ಟರ್ ಗಳನ್ನು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿ ಪೋಸ್ಟರ್‌ ಮೂಲಕ ರಾಹುಲ್‌ ಅವರನ್ನು ಟೀಕಿಸಿದೆ.

ಪೋಸ್ಟರ್‌ನಲ್ಲಿ ರಾಹುಲ್‌ ಗಾಂಧಿ ಅವರನ್ನು ದೇವದಾಸ್‌ ಪಾತ್ರಕ್ಕೆ ಹೋಲಿಕೆ ಮಾಡಿ ಬಿಜೆಪಿ ಟೀಕಿಸಿದೆ. ಪೋಸ್ಟರ್ ಮೇಲ್ಭಾಗದಲ್ಲಿ ಶಾರೂಖ್ ಖಾನ್ ಚಿತ್ರ ಇರಿಸಲಾಗಿದ್ದು, ಕೆಳಭಾಗದಲ್ಲಿ ರಾಹುಲ್ ಅವರ ಚಿತ್ರ ಇದೆ. ರೀಲ್ ಲೈಫ್ ದೇವದಾಸ್ ಶಾರೂಖ್ ಖಾನ್, ರಿಯಲ್ ಲೈಫ್ ದೇವದಾಸ್ ರಾಹುಲ್ ಗಾಂಧಿ ಎಂದು ಬರೆಯಲಾಗಿದೆ.

Advertisements

“ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳವನ್ನು ತೊರೆಯಿರಿ ಎಂದು ಹೇಳಿದರು, ಕೇಜ್ರಿವಾಲ್ ದೆಹಲಿ ಹಾಗೂ ಪಂಜಾಬ್ ಬಿಡಿ ಎಂದು ಹೇಳಿದರು, ಲಾಲು, ನಿತೀಶ್ ಬಿಹಾರ, ಅಖಿಲೇಶ್ ಉತ್ತರ ಪ್ರದೇಶ, ಸ್ಟಾಲಿನ್ ತಮಿಳುನಾಡು ಬಿಡಿ ಎಂದರು. ಎಲ್ಲರೂ ಒಟ್ಟಾಗಿ ಕಾಂಗ್ರೆಸ್ ಹಾಗೂ ರಾಜಕೀಯ ಎರಡನ್ನೂ ಬಿಡಿ ಎಂದು ಹೇಳುವ ಸಮಯ ಸನ್ನಿಹಿತವಾಗಿದೆ” ಎಂದು ಬರೆಯುವ ಮೂಲಕ ಬಿಜೆಪಿ ರಾಹುಲ್‌ ಅವರನ್ನು ಕುಟುಕಿದೆ.

ರಾಹುಲ್‌ ಗಾಂಧಿ ಕುರಿತ ಬಿಜೆಪಿ ಪೋಸ್ಟರ್‌ ಅನ್ನು ಆರ್‌ಜೆಡಿ ಟೀಕಿಸಿದೆ. ಆರ್‌ಜೆಡಿ ಕಚೇರಿಯ ಹೊರಗೆ ವಿಷ್ಣುವಿನ ಪೋಸ್ಟರ್ ಹಾಕಲಾಗಿದೆ. ವಿಷ್ಣು ದೇವರ ಚಿತ್ರದ ಸುತ್ತ 18 ನಾಯಕರ ಚಿತ್ರವನ್ನು ಇರಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಆಂಧ್ರಪ್ರದೇಶ | ಬದಲಾದ ಬಿಜೆಪಿ ತಂತ್ರಗಾರಿಕೆ; ಜಗನ್‌ ಜೊತೆ ಕುಸ್ತಿ, ಚಂದ್ರಬಾಬು ಜೊತೆ ದೋಸ್ತಿ

ಆರ್‌ಜೆಡಿ ಪೋಸ್ಟರ್‌ನಲ್ಲಿ ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್, ಫಾರೂಕ್ ಅಬ್ದುಲ್ಲಾ, ಮಲ್ಲಿಕಾರ್ಜುನ ಖರ್ಗೆ, ದೀಪಾಂಕರ್ ಭಟ್ಟಾಚಾರ್ಯ, ಸೀತಾರಾಮ್ ಯೆಚೂರಿ, ಶರದ್ ಪವಾರ್ ಅವರ ಜೊತೆ ವಿಷ್ಣು ದೇವರ ಚಿತ್ರ ಹಾಕಲಾಗಿದೆ.

ಇನ್ನೊಂದು ಕಡೆ ವಿಷ್ಣು ದೇವರ ಪಕ್ಕದಲ್ಲಿ ರಾಹುಲ್ ಗಾಂಧಿ, ತೇಜಸ್ವಿ ಯಾದವ್, ಮಮತಾ ಬ್ಯಾನರ್ಜಿ, ಸ್ಟಾಲಿನ್, ಹೇಮಂತ್ ಸೊರೆನ್, ಉದ್ಧವ್ ಠಾಕ್ರೆ ಅವರ ಚಿತ್ರಗಳನ್ನು ಹಾಕಲಾಗಿದೆ.

5d4d09db59db7dd57fe9e8598de7b91a?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X