ಕ್ರೈಸ್ಟ್ ಯುನಿವರ್ಸಿಟಿ ‘ಕನ್ನಡ ಸಂಘ’ದ ಸಾರಥಿ ಎಂ ಟಿ ರತಿ ಸಂದರ್ಶನ | ‘ನನ್ಜೊತೆ ವಾಗ್ವಾದ ಮಾಡಿದ್ದ ಆ ವಿದ್ಯಾರ್ಥಿ, ಧಮನಿ ಅನ್ನೋ ಕ್ರಾಂತಿಕಾರಿ ತಂಡ ಕಟ್ಟಿದ’

Date:

Advertisements

ಬೆಂಗಳೂರಿನ ಕ್ರೈಸ್ಟ್ ಕಾಲೇಜು (ಈಗ ಯುನಿವರ್ಸಿಟಿ) ಅಂದಾಕ್ಷಣ ನೆನಪಾಗೋದು ಅಲ್ಲಿನ ಕನ್ನಡ ಸಂಘ. ಈ ಕನ್ನಡ ಸಂಘದ ಹೆಗ್ಗಳಿಕೆ ಏನಂದ್ರೆ, ಇಡೀ ರಾಜ್ಯಕ್ಕೆ ಕ್ರೈಸ್ಟ್ ಕಾಲೇಜನ್ನು ಪರಿಚಯಿಸಿದ್ದು. ಈಗಲೂ ಬಹಳಷ್ಟು ಜನಕ್ಕೆ ಕ್ರೈಸ್ಟ್ ಕಾಲೇಜು ಅಥವಾ ಯುನಿವರ್ಸಿಟಿ ಗೊತ್ತಿರೋದೇ ಕನ್ನಡ ಸಂಘದ ಮೂಲಕ. ಇದಕ್ಕೆ ಬಹಳ ದೊಡ್ಡ ಅಡಿಪಾಯ ಹಾಕಿದವರು ಮೇಷ್ಟ್ರು ಚಿ ಶ್ರೀನಿವಾಸರಾಜು.

ಕನ್ನಡ ಸಂಘವು ಪ್ರತೀ ವರ್ಷ ನಡೆಸುವ ಕವಿತೆ ಮತ್ತು ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದ ಬಹುತೇಕ ವಿದ್ಯಾರ್ಥಿಗಳು ಈಗ ಚಿರಪರಿಚಿತ ಬರಹಗಾರರಾಗಿದ್ದಾರೆ. ಆ ಸ್ಪರ್ಧೆಗಳ ಪ್ರಾಮಾಣಿಕತೆ, ಅಚ್ಚುಕಟ್ಟುತನ, ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಿಗುವ ಪ್ರೀತಿ ಮತ್ತು ಪ್ರೋತ್ಸಾಹ ನಿಜಕ್ಕೂ ಬೆಲೆ ಕಟ್ಟಲಾಗದ್ದು.

ಇಂತಹ ಅತ್ಯಪರೂಪದ ಸಂಘವನ್ನು ಕಳೆದ ಹದಿನೈದು ವರ್ಷದಿಂದ ಮುನ್ನಡೆಸುತ್ತ ಬರುತ್ತಿರುವವರು ಕನ್ನಡ ಪ್ರಾಧ್ಯಾಪಕರಾದ ಎಂ ಟಿ ರತಿ. ಕೊಡಗಿನ ಗ್ರಾಮೀಣ ಪ್ರದೇಶವರಾದ ಇವರು, ಬೆಂಗಳೂರನ್ನು ತಮ್ಮದಾಗಿಸಿಕೊಂಡ ಬಗೆ ಮತ್ತು ಅದೇ ಹೊತ್ತಿಗೆ ಕನ್ನಡ ಸಂಘದ ಹಿರಿಮೆಯನ್ನು ಕಾಪಾಡಿದ ರೀತಿ ಮೆಚ್ಚುವಂಥದ್ದು.

Advertisements

ಈ ಆಡಿಯೊ ಸಂದರ್ಶನದಲ್ಲಿ ಅವರು, ಶ್ರೀನಿವಾಸರಾಜು ಅವರ ನಂತರ ಕನ್ನಡ ಸಂಘ ಮುನ್ನಡೆಸುವಾಗ ಎದುರಾದ ಸವಾಲುಗಳು, ತಮ್ಮ ನೆಚ್ಚಿನ ನೆಲವಾದ ಕೊಡಗಿನ ಜನಜೀವನವು ಸಹಜ ಬದುಕನ್ನು ಕಳೆದುಕೊಂಡ ಸ್ಥಿತ್ಯಂತರ, ಬೆಂಗಳೂರು ವಿವಿಯ ಕನ್ನಡ ವಿಭಾಗದ ಗತವೈಭವ, ತಮ್ಮ ಜೊತೆ ವಾಗ್ವಾದ ಮಾಡಿಕೊಂಡ ವಿದ್ಯಾರ್ಥಿಯೊಬ್ಬ ಕಟ್ಟಿದ ಕ್ರಾಂತಿಕಾರಿ ತಂಡ… ಮತ್ತಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಟ್ರಾವೆಲ್ ಏಜೆಂಟ್‌ಗಳಿಗೆ ಟ್ರಂಪ್‌ ಸರ್ಕಾರದ ವಿಸಾ ನಿರ್ಬಂಧ; ಇನ್ನು ಮುಂದೆ ಅಮೆರಿಕ ಪ್ರವಾಸ ಕಷ್ಟವೆ?

ಡಿಎಸ್-160 ಅರ್ಜಿ ತುಂಬುವುದು, ಪಾಸ್‌ಪೋರ್ಟ್ ವಿವರಗಳ ನಿರ್ವಹಣೆ, ದಾಖಲೆಗಳ ಸಕಾಲಿಕ ಅಪ್ಲೋಡ್‌...

ವಿದೇಶಿ ಮಾಧ್ಯಮಗಳು ಕಂಡಂತೆ ಭಾರತ – ಪಾಕ್‌ ಸಂಘರ್ಷ

ಭಾರತ - ಪಾಕ್‌ ಸಂಘರ್ಷದ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಲವು ಮಾಧ್ಯಮಗಳು...

ನಾವು ಪಾಕಿಸ್ತಾನಿಯರಲ್ಲ ಎಂದ ಬಲೂಚಿಗಳು; ಏನಿದು ನೆರೆಯ ದೇಶದ ಬಲೂಚಿಸ್ತಾನ ಹೋರಾಟ?

ಬಲೂಚಿಸ್ತಾನವು ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದ್ದರೂ, ಆರ್ಥಿಕ ಮತ್ತು ಸಾಮಾಜಿಕವಾಗಿ ದೇಶದ ಇತರ...

Download Eedina App Android / iOS

X