‘ಸ್ವಾತಂತ್ರ ಹೋರಾಟದಲ್ಲಿ ಬ್ಯಾರಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬದಲಾದ ಕಾಲಘಟ್ಟದಲ್ಲಿ ಅದನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ’ ಎಂದು ಅಲ್ ಉಮರ್ ಮಸ್ಜಿದ್ನ ಅಧ್ಯಕ್ಷ ನಾಸಿರ್ ಎನ್ ಎಸ್ ಹೇಳಿದರು.
ಬ್ಯಾರಿ ಲೇಖಕರು ಮತ್ತು ಕಲಾವಿದರನ್ನು ಒಳಗೊಂಡ ‘ಮೇಲ್ತೆನೆ’ ಸಂಘಟನೆ ಕಾರ್ಯಕರ್ತರು ಕೊಣಾಜೆ ಸಮೀಪದ ನಡುಪದವಿನ ಹಯಾತುಲ್ ಇಸ್ಲಾಂ ಮದ್ರಸದ ಹಾಲ್ನಲ್ಲಿ ಹಮ್ಮಿಕೊಂಡಿದ್ದ ‘ಸ್ವಾತಂತ್ರ ಹೋರಾಟದಲ್ಲಿ ಉಳ್ಳಾಲ ತಾಲೂಕಿನ ಬ್ಯಾರಿ ಮುಸ್ಲಿಮರ ಪಾತ್ರ’ದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮೇಲ್ತೆನೆ’ ಸಂಘಟನೆಯು ವಾಸ್ತವ ಸಂಗತಿಯನ್ನು ಯುವ ಪೀಳಿಗೆಯ ಮುಂದಿಡಲು ನಡೆಸುತ್ತಿರುವ ಕೆಲಸ ಶ್ಲಾಘನೀಯ. ಬ್ಯಾರಿ ಮುಸ್ಲಿಮರಲ್ಲಿ ನಾಯಕತ್ವದ ಗುಣವಿದೆ. ಹಾಗಾಗಿ ಯಾರೂ ಕೂಡ ಹಿಂಬಾಲಕರಾಗದೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಶಾಸಕ ಪ್ರಭು ಚವ್ಹಾಣ ಮಾಡಿದ ಕೊಲೆ ಆರೋಪದಿಂದ ಶಾಕ್ ಆಗಿದ್ದೇನೆ: ಕೇಂದ್ರ ಸಚಿವ ಖೂಬಾ
ಕೊಣಾಜೆ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಮಸೀದಿಯ ಖತೀಬ್ ಅಬ್ದುಲ್ ಮಜೀದ್ ನಿಝಾಮಿ, ಮೇಲ್ತೆನೆಯ ಅಧ್ಯಕ್ಷ ಬಶೀರ್ ಕಲ್ಕಟ್ಟ, ಮಾಜಿ ಅಧ್ಯಕ್ಷ ಹಂಝ ಮಲಾರ್, ಮುಹಮ್ಮದ್ ಬಾಷಾ ನಾಟೆಕಲ್, ಕಾರ್ಯದರ್ಶಿ ಬಿ ಎಂ ಕಿನ್ಯ, ಸದಸ್ಯ ಆಸೀಫ್ ಬಬ್ಬುಕಟ್ಟೆ, ಬಾಳೆಪುಣಿ ಗ್ರಾಪಂ ಸದಸ್ಯ ಸಿ ಎಂ ಶರೀಫ್, ಪುತ್ತು ಉಸ್ತಾದ್, ಮಸೀದಿಯ ಆಡಳಿತ ಕಮಿಟಿಯ ಸದಸ್ಯರುಗಳಾದ ಎಸ್ ಎ ಉಸ್ಮಾನ್, ಬಾವಾ ಕಟೊಡಿ, ಇಸ್ಮಾಯಿಲ್ ಸಿ ಎಚ್, ಅಬೂಬಕರ್ ಇದ್ದರು.