ಸಿಂಹಳೀಯರು ಬಿಹಾರ ಮೂಲದವರು; ತಮಿಳುನಾಡು ನಮ್ಮ ಸಮಸ್ಯೆ ಅರ್ಥ ಮಾಡಿಕೊಂಡಿಲ್ಲ: ಮುತ್ತಯ್ಯ ಮುರಳೀಧರನ್

Date:

Advertisements

ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ತಮ್ಮ ಜೀವನಗಾಥೆ ಕುರಿತ ‘800’ ಸಿನಿಮಾ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ದಂತಕತೆ ಮತ್ತಯ್ಯ ಮುರಳೀಧರನ್,  ಶ್ರೀಲಂಕಾದಲ್ಲಿ ನಡೆಯುತ್ತಿರುವ ಸಿಂಹಳೀಯರು ಹಾಗೂ ತಮಿಳರ ಸಂಘರ್ಷದ ಬಗ್ಗೆ ಮಾತನಾಡಿದರು.

“ಭಾರತ ಹಾಗೂ ನಿರ್ದಿಷ್ಟವಾಗಿ ತಮಿಳುನಾಡಿನ ಸರ್ಕಾರಗಳು ಶ್ರೀಲಂಕಾದ ಅಂತರ್ಯುದ್ಧದ ಸಮಯದಲ್ಲಿ ಜನಾಂಗೀಯ ಸಂಘರ್ಷವನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿವೆ. ಶ್ರೀಲಂಕಾದಲ್ಲಿನ ಸಮಸ್ಯೆ ಭಾರತಕ್ಕೆ ಅರ್ಥವಾಗಲೇ ಇಲ್ಲ. ಇದು ನನ್ನ ಪ್ರಾಮಾಣಿಕ ಉತ್ತರ. ನಾನು ಇದನ್ನು ಹೇಳಲು ಹೆದರುವುದಿಲ್ಲ. ಭಾರತ ಎಂದರೆ ನಾನು ಕೇಂದ್ರ ಸರ್ಕಾರಕ್ಕೆ ಹೇಳುತ್ತಿಲ್ಲ, ತಮಿಳುನಾಡು ಸರ್ಕಾರಕ್ಕೆ ಅಲ್ಲಿನ ನಿಜವಾದ ಸಮಸ್ಯೆ ಏನೆಂದು ಅರ್ಥವಾಗಲಿಲ್ಲ. ಏಕೆಂದರೆ, ಶ್ರೀಲಂಕಾದಲ್ಲಿನ ತಮಿಳು ಸಮುದಾಯವು ತುಂಬಾ ವಿಭಿನ್ನವಾಗಿದೆ. ಅಲ್ಲಿನ ತಮಿಳು ಸಮುದಾಯದಲ್ಲಿ ಹಲವಾರು ಉಪಗುಂಪುಗಳಿವೆ” ಎಂದು ಮತ್ತಯ್ಯ ಮುರಳೀಧರನ್ ಹೇಳಿದರು.

ಇದೇ ಸಂದರ್ಭದಲ್ಲಿ ತಮ್ಮ ಪೂರ್ವಜರು ಶ್ರೀಲಂಕಾಕ್ಕೆ ವಲಸೆ ಹೋದ ಬಗ್ಗೆಯೂ ಮಾತನಾಡಿದರು. “ನನ್ನ ಅಜ್ಜ ಭಾರತದ ತಮಿಳುನಾಡು ಮೂಲದವರು. 1920 ರ ದಶಕದಲ್ಲಿ ಅವರು ಚಹಾ ತೋಟಗಳಿಗೆ ಕೆಲಸ ಮಾಡಲು ಹೋದರು. ಬ್ರಿಟಿಷರು ನಮ್ಮನ್ನು ಬಲವಂತವಾಗಿ ಅಲ್ಲಿಗೆ ಕರೆದೊಯ್ದರು. ಆದ್ದರಿಂದಲೇ ನಮ್ಮ ಕುಟುಂಬ ಹಾಗೂ ಸಮುದಾಯದವರು ಮಧ್ಯ ಶ್ರೀಲಂಕಾದಲ್ಲಿ ನೆಲೆ ಕಂಡುಕೊಂಡರು. ಅಲ್ಲಿನವರು ನಮ್ಮನ್ನು ಭಾರತೀಯ ಮೂಲದ ತಮಿಳರು ಎನ್ನುತ್ತಾರೆ. ಭಾರತೀಯರು ನಮ್ಮನ್ನು ಶ್ರೀಲಂಕಾ ತಮಿಳರು ಎಂದು ಸಂಬೋಧಿಸುತ್ತಾರೆ. ನಮ್ಮ ಭಾಷೆಯಲ್ಲಿಯೂ ಸ್ವಲ್ಪ ವ್ಯತ್ಯಾಸವಿದೆ. ಆದರು ನಮ್ಮ ಭಾಷೆ ತಮಿಳು” ಎಂದು ತಿಳಿಸಿದರು.

Advertisements

ಸಿಂಹಳೀಯರ ಮೂಲ ಬಿಹಾರ

“ಕೆಲವರು ಶ್ರೀಲಂಕಾದಲ್ಲಿ ಒಂದು ಭಾಗವನ್ನು ಪ್ರತ್ಯೇಕಿಸಿ ಪ್ರತ್ಯೇಕ ದೇಶವನ್ನುಕಟ್ಟಲು ಬಯಸಿದ್ದರು. ಆದರೆ ನಮಗೆ ಪ್ರತ್ಯೇಕ ದೇಶ ಬೇಕಾಗಿಲ್ಲ. ನಾವು ಎಲ್ಲರೊಂದಿಗೆ ಸೌಹಾರ್ದಯುತವಾಗಿ ಬಾಳಲು ಬಯಸಿದ್ದೇವೆ. ಭಾರತದಲ್ಲಿನ ಕೆಲವು ರಾಜಕಾರಣಿಗಳು ತಮ್ಮ ದೇಶದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲಿಲ್ಲ. ನನ್ನನ್ನು ಒಳಗೊಂಡು ಹಲವರನ್ನು ‘ಜನಾಂಗದ ದ್ರೋಹಿ’ ಎಂದು ತೆಗಳಿದರು. ಅಲ್ಲದೆ ಕೆಲವು ಪ್ರಮುಖರು ನಾನು ತಮಿಳರ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲವೆಂದು ನಾನು ಸರ್ಕಾರದ ಪರವೆಂದು ನನ್ನನ್ನು ದ್ವೇಷಿಸಿದರು” ಎಂದು ಸ್ಪಿನ್‌ ಮಾಂತ್ರಿಕ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ರೋಹಿತ್ ಶರ್ಮಾ ನಂತರ ಟೀಮ್ ಇಂಡಿಯಾದ ಕ್ಯಾಪ್ಟನ್ ಯಾರು?

“ಹಾಗೆ ನೋಡಿದರೆ ಶ್ರೀಲಂಕಾದ ಸಿಂಹಳೀಯರೂ ಭಾರತದ ಬಿಹಾರದವರು. ತಮಿಳುನಾಡಿನಲ್ಲಿ ನಮ್ಮ ಪೂರ್ವಜರು ಸಾಕಷ್ಟಿದ್ದಾರೆ. ಆದರೆ ಸುನಾಮಿ ಸಂದರ್ಭದಲ್ಲಿ ಕ್ರಿಕೆಟ್ ತಾರೆಯರಾದ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಸೇರಿದಂತೆ ಹಲವರು ನಮಗೆ ಮಾಡಿದ ಸಹಾಯವನ್ನು ಮರೆಯಲಾರೆ. ಎಲ್ಲ ಮಹನೀಯರ ನೆರವಿನಿಂದ ನಾನು ಟ್ರಸ್ಟ್ ಸ್ಥಾಪಿಸಿದ್ದು, ಪ್ರತೀ ವರ್ಷವೂ ಸಾವಿರಾರು ಜನರಿಗೆ ಸಹಾಯ ಮಾಡುತ್ತಿದ್ದೇನೆ” ಎಂದರು.

1995ರಲ್ಲಿ ಆಸ್ಟ್ರೇಲಿಯ ವಿರುದ್ಧದ ಪಂದ್ಯದ ವೇಳೆ ಅಂಪೈರ್‌ನಿಂದ ಚಕಿಂಗ್‌ ವಿವಾದ ಎದುರಿಸಿದ ಸಮಸ್ಯೆಯನ್ನು ನೆನಪಿಸಿಕೊಂಡ ಮುರಳೀಧರನ್, “ಆಗ ಶ್ರೀಲಂಕಾ, ಭಾರತ ಸೇರಿ ಹಲವು ರಾಷ್ಟ್ರಗಳ ಅಭಿಮಾನಿಗಳು, ಕ್ರಿಕೆಟ್ ದಿಗ್ಗಜರು ನನ್ನ ಬೆಂಬಲಕ್ಕೆ ನಿಂತಿದ್ದರು. ಈ ಸಹಾಯ ಎಂದಿಗೂ ಮರೆಯಲಾರೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸರ್ಕಾರಿ ಶಾಲೆ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆ ಸಿಕ್ಕರೆ ಅತ್ಯುನ್ನತ ಸಾಧನೆ, ಸಾಮರ್ಥ್ಯ ಅನಾವರಣ

"ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಯಾವುದರಲ್ಲಿಯೂ ಕಡಿಮೆ...

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

Download Eedina App Android / iOS

X