- ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಗಡಿಪಾರು ಪ್ರಕ್ರಿಯೆ
- ಕೊಲೆ, ಕೊಲೆ ಪ್ರಯತ್ನ ಸೇರಿದಂತೆ ಹಲವಾರು ಕೃತಗಳಲ್ಲಿ ಆರೋಪಿ
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ, ಅಪರಾಧಿ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಕುಖ್ಯಾತ ರೌಡಿ ನಾಗರಾಜ್ ಆಲಿಯಾಸ್ ವಿಲ್ಸನ್ ಗಾರ್ಡನ್ ಅವನನ್ನು ಬೆಂಗಳೂರು ಸೇರಿದಂತೆ ಆರು ನಗರಗಳಿಂದ ಗಡಿಪಾರು ಮಾಡಲಾಗಿದೆ. ಗಡಿಪಾರು ಅವಧಿ ಮುಗಿಯುವವರೆಗೂ ನಗರಕ್ಕೆ ಬರದಂತೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಎಚ್ಚರಿಕೆ ನೀಡಿದ್ದಾರೆ.
ವಿಲ್ಸನ್ ಗಾರ್ಡನ್ನ್ನು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರದಿಂದ ಗಡಿಪಾರು ಮಾಡಲಾಗಿದೆ.
ಸೆಕ್ಷನ್ 110ನಡಿ ಬಾಂಡ್ ಬರೆಸಿಕೊಂಡು ಗಡಿಪಾರಿನ ಪ್ರಕ್ರಿಯೆಯನ್ನು ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಮುಗಿಸಲಾಗಿದೆ. ಈತ ಆರು ತಿಂಗಳವರೆಗೆ ಬೆಂಗಳೂರಿಗೆ ಬರುವ ಹಾಗಿಲ್ಲ ಹಾಗೂ ಇನ್ನಿತರ ಯಾವುದೇ ಚಟುವಟಿಕೆಗಳಲ್ಲಿ ತೊಡಗುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಮಾರ್ಚ್ 31ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ
ವಿಲ್ಸನ್ ಗಾರ್ಡನ್ ಕೊಲೆ, ಕೊಲೆ ಪ್ರಯತ್ನ ಸೇರಿದಂತೆ ಹಲವಾರು ಕೃತಗಳಲ್ಲಿ ಆರೋಪಿಯಾಗಿದ್ದಾನೆ. ನಗರದಲ್ಲಿ ಸಕ್ರಿಯ ಆಗಿರುವ ಇತರ ರೌಡಿಗಳಿಗೂ ಸಿಸಿಬಿ ಹಾಗು ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.