- ಸಹಾಯ ಮಾಡಲು ಇಚ್ಛಿಸುವವರು 9353419036 ಸಂಪರ್ಕಿಸಿ
- ಮೊಮ್ಮಗಳನ್ನು ಓದಿಸುವ ಆಶಯ ಆದರೆ ಆರ್ಥಿಕವಾಗಿ ದುರ್ಬಲರು
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಿದ ವಿದ್ಯಾರ್ಥಿಯೊಬ್ಬರು ಪದವಿ ಸೇರಲು ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ ಎದುರಾಗಿದ್ದು, ಶಿಕ್ಷಣ ಅರ್ಧಕ್ಕೆ ಕೈ ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೀದರ್ ಜಿಲ್ಲೆಯ ಔರಾದ ತಾಲೂಕಿನ ಯನಗುಂದಾ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿ, ಬಸವಜ್ಯೋತಿ ಬಾಬುಗೊಂಡ ಎಂಬುವವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.92.48ರಷ್ಟು ಅಂಕ ಗಳಿಸಿದ್ದಾರೆ. ಆದರೆ, ಪದವಿ ಸೇರಲು ಆಕೆಯ ಬಳಿ ಹಣವಿಲ್ಲ. ಪ್ರವೇಶಾತಿ ಮಾಡಿಸಲು ಆಕೆಯ ಪೋಷಕರಿಲ್ಲ.
ಹುಟ್ಟುವ ಮುನ್ನವೇ ತಂದೆಯನ್ನು ಕಳೆದುಕೊಂಡ ಬಸವಜ್ಯೋತಿ ಬಾಬುಗೊಂಡ ಅಜ್ಜಿ ಮತ್ತು ತಾತನೊಡನೆ ಬೆಳೆದರು. ವಯಸ್ಸಾದ ಜೀವಕ್ಕೆ ಮೊಮ್ಮಗಳನ್ನು ಓದಿಸುವ ಆಶಯವಿದೆ. ಆದರೆ, ದುಡಿದು ಪದವಿಗೆ ಸೇರಿಸಲು ತ್ರಾಣವಿಲ್ಲ. ಪ್ರತಿಭಾವಂತೆ ಆಗಿದ್ದರೂ ಮುಂದೆ ವಿದ್ಯಾಭ್ಯಾಸ ಮಾಡಿಸಲಾಗದ ಅಸಹಾಯಕ ಪರಿಸ್ಥಿತಿ. ಹೊಟ್ಟೆ ತುಂಬಿದರೆ ಸಾಕು ಎನ್ನುವ ಬಡತನ ಅವರಲ್ಲಿ ಮನೆ ಮಾಡಿದೆ.
ಈ ಸುದ್ದಿ ಓದಿದ್ದೀರಾ?: ಕಲಬುರಗಿ | ಕಾಂಗ್ರೆಸ್ ಗ್ಯಾರಂಟಿಗಳ ಜಾರಿಗೆ ಮೊದಲ ಆದ್ಯತೆ: ಪ್ರಿಯಾಂಕ್ ಖರ್ಗೆ
ಚೆನ್ನಾಗಿ ಓದಬೇಕು, ಉನ್ನತ ಹುದ್ದೆ ಪಡೆದು ಸಮಾಜ ಸೇವೆ ಸಲ್ಲಿಸಬೇಕು ಎಂದು ಕನಸಿನ ಮೂಟೆ ಹೊತ್ತ ವಿದ್ಯಾರ್ಥಿಗೆ ವಿದ್ಯಾಭ್ಯಾಸ ಮುಂದುವರೆಸುವುದು ಹೇಗೆ ಎಂಬುದೇ ಜಟಿಲವಾದ ಪ್ರಶ್ನೆಯಾಗಿದೆ. ಪ್ರತಿಭೆವುಳ್ಳ ಬಸವಜ್ಯೋತಿ ಬಾಬುಗೊಂಡ ಅವರಿಗೆ ಮುಂದಿನ ಶಿಕ್ಷಣ ಜೀವನಕ್ಕೆ ಸಹಾಯ ಮಾಡಲು ಇಚ್ಛಿಸುವವರು ಅವರ ದೂರವಾಣಿಗೆ 9353419036 ಕರೆ ಮಾಡಿ ಮಾಹಿತಿ ಪಡೆಯಬಹುದು.