ತಾಯಿ, ಮಗು ಸಾವು ಸೂಚ್ಯಂಕ; 10 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ

Date:

  • 2020ರಲ್ಲಿ ಭಾರತದಲ್ಲಿ ಗರ್ಭಾವಸ್ಥೆ ಮತ್ತಿತ್ತರ ಕಾರಣದಿಂದ 7,88,000 ಸಾವು
  • ತಾಯಂದಿರ ಮತ್ತು ನವಜಾತ ಶಿಶುಗಳ ಬಗ್ಗೆ ಕಾಳಜಿ ಇಲ್ಲದಿರುವುದು ಸಾವಿಗೆ ಕಾರಣ

ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿ ಆಧುನಿಕ ತಂತ್ರಜ್ಞಾನಗಳ ಅಭಿವೃದ್ಧಿಯಾಗಿದೆ. ಆದರೂ, ಗರ್ಭಾವಸ್ಥೆ ಸಮಯದಲ್ಲೇ ತಾಯಿ, ಶಿಶುಗಳ ನಿಧನ ಪ್ರಕರಣಗಳಲ್ಲಿ ಭಾರತ ಅಗ್ರಸ್ಥಾನ ಪಡೆದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಹೊಸ ವರದಿ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆ, “ಗರ್ಭಾವಸ್ಥೆ, ಪ್ರಸವ ಅಥವಾ ಮಗುವಿನ ಜನಿಸಿದ ಒಂದು ವಾರದೊಳಗೆ ತಾಯಂದಿರು ಮತ್ತು ಮಕ್ಕಳು ಸಾವನ್ನಪ್ಪಿರುವ ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನ ಪಡೆದಿದೆ. ಒಟ್ಟು ಸಾವುಗಳಲ್ಲಿ ಶೇ.60ರಷ್ಟು ಸಾವುಗಳು 10 ದೇಶಗಳಲ್ಲಿಯೇ ಸಂಭವಿಸುತ್ತಿವೆ. ನೈಜೀರಿಯಾ, ಪಾಕಿಸ್ತಾನ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಇಥಿಯೋಪಿಯಾ, ಬಾಂಗ್ಲಾದೇಶ ಮತ್ತು ಚೀನಾ ದೇಶಗಳು ಭಾರತದ ನಂತರದ ಸ್ಥಾನದಲ್ಲಿವೆ.

ವಿಶ್ವದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಏಳು ನಿಮಿಷಕ್ಕೊಬ್ಬರು ಮೃತಪಡುತ್ತಿದ್ದಾರೆ. ವರ್ಷಕ್ಕೆ 4.5 ದಶಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ.  

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2020-21 ಸಾಲಿನ ವರದಿಯ ಪ್ರಕಾರ ಗರ್ಭಾವಸ್ಥೆಯಲ್ಲಿ ಮೃತಪಟ್ಟ ತಾಯಂದಿರ ಸಂಖ್ಯೆ 0.29 ಲಕ್ಷ ಮತ್ತು ಹುಟ್ಟಬೇಕಿದ್ದ ಶಿಶುಗಳು ಮೃತಪಟ್ಟಿದ್ದು 1.9 ಲಕ್ಷ, ನವಜಾತ ಶಿಶುಗಳು ಮೃತಪಟ್ಟ ಸಂಖ್ಯೆ 2.3 ಲಕ್ಷವಿದೆ. ಒಟ್ಟಾರೆಯಾಗಿ 4.5 ದಶ ಲಕ್ಷ ಗರ್ಭಾವಸ್ಥೆ, ಪ್ರಸವ ಅಥವಾ ಮಗುವಿನ ಜನನದ ವಾರದ ಬಳಿಕ ಮೃತಪಟ್ಟಿರುವ ಪ್ರಕರಣಗಳು ವರದಿಯಾಗಿದೆ. 2020ರಲ್ಲಿ ಗರ್ಭಾವಸ್ಥೆ ಸೇರಿದಂತೆ ಮತ್ತಿತ್ತರ ನ್ಯೂನತೆಗಳಿಂದ ಭಾರತದಲ್ಲಿ 7,88,000 ಮಂದಿ ಮೃತಪಟ್ಟಿದ್ದಾರೆ.

ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಮರಣದ ಸಂಖ್ಯೆ ಪ್ರಪಂಚದಾದ್ಯಂತ ಅನಿರೀಕ್ಷಿತವಾಗಿ ಏರಿಕೆಯಾಗುತ್ತಿದೆ. ಕೋವಿಡ್​ ಸಾಂಕ್ರಾಮಿಕ ಕೂಡ ಆರೋಗ್ಯ ವ್ಯವಸ್ಥೆಯ ಮೇಲೆ ದೊಡ್ಡ ಹೊಡೆತ ನೀಡಿತ್ತು ಎಂದು ವಿಶ್ವಸಂಸ್ಥೆಯ ಮಕ್ಕಳ ಮತ್ತು ಹರೆಯದವರ ಆರೋಗ್ಯ ತಜ್ಞರಾಗಿರುವ ಡಾ.ಅಂಶು ಬ್ಯಾನರ್ಜಿ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಚುನಾವಣೆ ಕರ್ತವ್ಯ | ಆಶಾ ಕಾರ್ಯಕರ್ತೆಯರಿಗೆ ಸಿಗದ ಗೌರವಧನ

ತಾಯಂದಿರು ಅಥವಾ ಶಿಶುಗಳು ಮೃತಪಡದಂತೆ ಜಾಗೃತಿವಹಿಸಬೇಕೆಂದರೆ, ಅದಕ್ಕೆ ತಕ್ಕ ಕಾರ್ಯ ನಿರ್ವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಮತ್ತು ಕೌಶಲ್ಯಯುತ ಹೂಡಿಕೆ ಮಾಡಬೇಕು. ಗರ್ಭಾವಸ್ಥೆಯಲ್ಲಿರುವ ಮಹಿಳೆಗೆ ಎಲ್ಲ ರೀತಿಯ ಆರೋಗ್ಯ ವ್ಯವಸ್ಥೆ, ಆಕೆ ಎಲ್ಲಿದ್ದರೂ ಲಭ್ಯವಿರುವಂತೆ ಮಾಡಿದರೆ ಮಾತ್ರ ತಾಯಿ ಮಗು ಸುರಕ್ಷಿತಾರಾಗಿರಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಕೋವಿಡ್​ ಬಡತನವನ್ನು ಹೆಚ್ಚಿಸಿದ್ದು, ಬಿಕ್ಕಟ್ಟು ಎದುರಿಸುವಂತೆ ಮಾಡಿದೆ. ಇದರಿಂದ ಆರೋಗ್ಯ ವ್ಯವಸ್ಥೆಯಲ್ಲಿ ಒತ್ತಡವೂ ಹೆಚ್ಚಾಗಿದೆ. 10ರಲ್ಲಿ ಒಂದು ದೇಶ ಮಾತ್ರ ಪ್ರಸ್ತುತ ಯೋಜನೆಗಳ ಜಾರಿಗೆ ಸಾಕಷ್ಟು ಧನಸಹಾಯ ಹೊಂದಿದೆ ಎಂದು ಇದೇ ವೇಳೆ ವರದಿ ವಿವರಿಸಿದೆ.

ಕೋವಿಡ್‌ನಿಂದಾಗಿ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಜಗತ್ತಿನ ಕಾಲುಭಾಗದಷ್ಟು ದೇಶಗಳು ಗರ್ಭವಸ್ಥೆ ಮತ್ತು ಪ್ರಸವಪೂರ್ವ ಆರೈಕೆ ಮತ್ತು ಅನಾರೋಗ್ಯದ ಮಕ್ಕಳಿಗೆ ಸೇವೆ ನೀಡಲು ತೊಂದರೆ ಎದುರಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರೋನಾ | ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಅಗತ್ಯವಿಲ್ಲ: ಡಾ.ಶರಣ್ ಪ್ರಕಾಶ್ ಪಾಟೀಲ್

ಹೊಸದಾಗಿ ಕಾಣಿಸಿಕೊಂಡಿರುವ ರೂಪಾಂತರ ಜೆಎನ್- 1 ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡಿದ್ದರೂ ಜನತೆ...

ಕೋವಿಡ್‌ | ಹೊಸ ವರ್ಷಾಚರಣೆಗೆ ನಿರ್ಬಂಧ ಹೇರುತ್ತಿಲ್ಲ, ಭಯ ಬೇಡ: ದಿನೇಶ್‌ ಗುಂಡೂರಾವ್‌

ಇಂದಿನ ಸಭೆಯಲ್ಲಿ ಸಮಿತಿಯ ತಜ್ಞರೊಂದಿಗೂ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ...

ಡಿ.25ರಂದು 125 ಮಂದಿಗೆ ಕೊರೋನಾ ಸೋಂಕು ದೃಢ : ಮೂವರು ಸಾವು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಡಿ.25 ರಂದು...

ಕರ್ನಾಟಕಕ್ಕೆ ಲಗ್ಗೆಯಿಟ್ಟ ಜೆಎನ್‌ 1 : ಎಂಟು ಜನರಲ್ಲಿ ಪಾಸಿಟಿವ್

ಮಾರಿ ಕೊರೋನಾ ವೈರಸ್​ನ ರೂಪಾಂತರಿ ಜೆಎನ್‌ 1 ಮೊದಲ ಪ್ರಕರಣ ಕೇರಳದಲ್ಲಿ...