ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮಹಿಳಾ ಟೆಲಿಕಾಲರ್ಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಿಂಡಸಗೇರೆ ಗ್ರಾಮದ ನಿವಾಸಿ ಶಿವರಾಮ್ ಲೈಂಗಿಕ ಕಿರುಕುಳ ನೀಡಿರುವ ಆರೋಪಿ. ಶಿವರಾಮ್ ಟೆಲಿಕಾಲರ್ ಜ್ಯೋತಿ ಅವರಿಗೆ ʼನನ್ನ ಜೋತೆ ಸಹಕರಿಸದಿದ್ದರೆ ನಿನ್ನ ಪತಿಯನ್ನು ಕೊಲ್ಲುವೆ. ನನ್ನ ಜೋತೆ ಚೆನ್ನಾಗಿರು, ನಿನ್ನ ಪತಿಯನ್ನು ಕೊಲೆ ಮಾಡುವೆ. ನಿನ್ನ ಪತಿಯನ್ನು ಕೊಂದ ಮೇಲೆ ಸೂಸೈಡ್ ಮಾಡಿಕೊಳ್ಳಬೇಡ,ʼ ಎಂದು ಸಂದೇಶ ಕಳುಹಿಸಿದ್ದಾನೆ.
ಅಲ್ಲದೇ ಜ್ಯೋತಿ ಅವರ ಮನೆಗೆ ನುಗ್ಗಿ ʼನೀನು ನನಗೆ ಬೇಕು ಅಷ್ಟೇ, ನಿನ್ನನ್ನು ನಾನು ಇಷ್ಟ ಪಡುತ್ತಿದ್ದೇನೆ,ʼ ನೀನು ಬರಬೇಕು ಎಂದು ಆರೋಪಿ ಶಿವರಾಮ್ ದಾಂದಲೆ ಮಾಡಿದ್ದಾನೆ. ಇದರಿಂದ ಬೇಸತ್ತ ಟೆಲಿಕಾಲರ್ ಜ್ಯೋತಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಐಪಿಸಿ ಸೆಕ್ಷನ್ 354(ಎ), 354(ಬಿ), 354(ಸಿ), 323, 324, 448, 504, 506 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.