ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಿಂದ ತಮಿಳುನಾಡು ಕಡೆಗೆ ತೆರಳುವ ಮುಖ್ಯ ರಸ್ತೆಯು ಒಡೆಯರ ಪಾಳ್ಯದ ಟ್ರ್ಯಾಕ್ಟರ್ ಗ್ಯಾರೇಜ್ ಸಮೀಪದಲ್ಲಿ ಕುಸಿದು ಬಿದ್ದು ಹಾಳಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿ ಒಂದು ವರ್ಷ ಕಳೆದಿದೆ ರಸ್ತೆ ಬದಿಯಲ್ಲಿ ದೊಡ್ಡ ಗುಂಡಿ ಬಿದ್ದಿದ್ದು ಅನಾಹುತಕ್ಕೆ ಎಡೆ ಮಾಡಿ ಕೊಟ್ಟಿದೆ ಎಂದು ಸವಾರರು ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ಬಗ್ಗೆ ಸಂಬಂಧ ಪಟ್ಟ ಜನಪ್ರತಿನಿದಿಗಳು ಹಾಗು ಇಲಾಖೆಗೆ ದುರಸ್ಥಿಗೊಳಿಸುವಂತೆ ಮನವಿ ಮಾಡಿದ್ದರು ಗಣನೆಗೆ ತೆಗೆದುಕೊಳ್ಳದೆ, ಕೇವಲ ಬ್ಯಾರಿಕೆಡ್ಗಳನ್ನು ಇಟ್ಟು ಯತಾಸ್ಥಿತಿಯಲ್ಲಿಟ್ಟಿದೆ. ಇಲ್ಲಿ ಪ್ರಯಾಣಿಸುವ ವಾಹನ ಸವಾರರು ಪ್ರತೀ ದಿನ ಭಯದಲ್ಲೇ ಸಂಚಾರ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಈ ಸ್ಥಳದಲ್ಲೇ ವಾಹನಗಳು ಮುಖಾ ಮುಖಿ ಎದುರಾದರೆ ಅವಘಡವಂತೂ ಕಟ್ಟಿಟ್ಟ ಬುತ್ತಿ.
ಹಾಗಾಗಿ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಹನೂರು ತಾಲೂಕು ಅಧ್ಯಕ್ಷ ನೇಮತ್ ಪಾಷ ಮತ್ತು ಪದಾಧಿಕಾರಿಗಳು ಹಾಗು ಸ್ಥಳೀಯ ನಾಗರಿಕರು ಅಗ್ರಹಿಸಿದ್ದಾರೆ.