ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಟೌನ್ ವೇದಾವತಿ ನಗರದ 3ನೇ ವಾರ್ಡ್ ಚಂದ್ರಾ ಲೇಔಟ್ನಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ನಾಗರೀಕ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಎಸ್.ವಿ. ರಂಗನಾಥ್ ಒತ್ತಾಯ ಮಾಡಿದ್ದಾರೆ.
ಈಗಾಗಲೇ ಒತ್ತುವರಿಯಾಗಿದ್ದ ರಸ್ತೆ ತೆರವು ಮಾಡಿ ಬಾಕ್ಸ್ ಚರಂಡಿ ನಿರ್ಮಿಸಿದ್ದು, ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಮಾರ್ಗ ಮತ್ತು ಪರಿವರ್ತಕ ಸ್ಥಳಾಂತರ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿಕೊಡಲು ಸಂಬಂಧಿಸಿದ ನಗರಸಭೆ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಚಂದ್ರಾ ಲೇಔಟ್ ನಾಗರಿಕರಿಗೆ ಯಾವುದೇ ದಿಕ್ಕಿನಿಂದ ಸಮರ್ಪಕ ಶಾಶ್ವತ ರಸ್ತೆ ಇರುವುದಿಲ್ಲ, ಅರ್ಧ ಕಿಲೋ ಮೀಟರ್ನಲ್ಲಿ ಸಿಗುವ ಮುಖ್ಯರಸ್ತೆ ತಲುಪಲು ಸುತ್ತಿಕೊಂಡು ಬಳಸಿ 2ಕಿಲೋ ಮೀಟರ್ ಕ್ರಮಿಸಿ ಮುಖ್ಯ ರಸ್ತೆ ತಲುಪುವಂತಾಗಿದೆ. ಒಂದು ಬಡಾವಣೆ ಸಂಪರ್ಕ ರಸ್ತೆಗಾಗಿ ಇನ್ನೂ ಎಷ್ಟು ದಿನ ಹೋರಾಟ ಮಾಡಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಚಂದ್ರಾ ಲೇಔಟ್ನಲ್ಲಿರುವ ಉದ್ಯಾನವನ ಜಾಗವನ್ನು ನಗರಸಭೆ ದಾಖಲೆಗಳ ಪ್ರಕಾರ ಅಳತೆ ಮಾಡಿಸಿ ಗಡಿ ಗುರುತು ಮಾಡಿ, ಗಿಡ ನೆಡುವ ಮೂಲಕ ಉದ್ಯಾನವನ ಜಾಗ, ನರ್ಸರಿ ಶಾಲೆ, ಆಟದ ಮೈದಾನದ ಜಾಗವನ್ನು ನಾಗರೀಕರಿಗೆ ಉಳಿಸಿಕೊಡಬೇಕೆಂದು ನಗರಸಭೆ ಪೌರಾಯುಕ್ತರಾದ ಮಹಾಂತೇಶ್ಅವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಂತೋಷ ರಾಥೋಡ್, ಉಪಾಧ್ಯಕ್ಷ ಸ್ವಾಮಿ, ಕಾರ್ಯದರ್ಶಿ ಸಿ.ಜಿ. ಗೌಡ ಇತರರು ಉಪಸ್ಥಿತರಿದ್ದರು.