ಒಂದು ವರ್ಗದ ಮಾಧ್ಯಮಗಳ ಪಕ್ಷಪಾತಿ, ಕೋಮುವಾದಿ ಮನಸ್ಥಿತಿಯ ವಿರುದ್ಧ ಧ್ವನಿ ಎತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಎಂ ಜಿ ಹೆಗ್ಡೆಯವರಿಗೆ ಸಮಾನ ಮನಸ್ಕ ಸಂಘಟನೆಯ ನಾಯಕರು ಭೇಟಿ ಮಾಡಿ ಬೆಂಬಲ ಸೂಚಿಸಿದರು.
ಎಂ ಜಿ ಹೆಗ್ಡೆ ಅವರನ್ನು ಗುರಿಯಾಗಿಸಿ ಬಲಪಂಥೀಯ ಕೋಮು ಶಕ್ತಿಗಳು ದ್ವೇಷ ಸಾಧನೆಯ ದಾಳಿಯನ್ನು ಸಂಘಟಿಸಿವೆ. ಉಡುಪಿಯಲ್ಲಿ ಶಾಸಕ ಯಶ್ಪಾಲ್ ಸುವರ್ಣರ ನೇತೃತ್ವದಲ್ಲಿ ಎಂ ಜಿ ಹೆಗ್ಡೆಯವರ ವಿರುದ್ಧ ಅಸಭ್ಯ ರೀತಿಯ ಪ್ರತಿಭಟನೆಯನ್ನು ನಡೆಸಿ ದೈಹಿಕ ದಾಳಿಗೆ ಪ್ರಚೋದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳ ಪ್ರತಿನಿಧಿಗಳು ಎಂ ಜಿ ಹೆಗ್ಡೆಯವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ನೈತಿಕ ಬೆಂಬಲ ವ್ಯಕ್ತಪಡಿಸಿದರು.
“ಎಂ ಜಿ ಹೆಗ್ಡೆಯವರನ್ನು ಬೆದರಿಸುತ್ತಿರುವ ಶಕ್ತಿಗಳ ಮೇಲೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು. ಎಂ ಜಿ ಹೆಗ್ಡೆಯವರಿಗೆ ರಕ್ಷಣೆ ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಅನರ್ಹತೆ ಹಿನ್ನೆಲೆ ನಗರಸಭೆ ಆಯುಕ್ತ ಮಂಜುನಾಥ್ ನೇಮಕಾತಿ ರದ್ದು; ವಾರ್ಡ್ ಸದಸ್ಯರ ಅಸಮಾಧಾನ
ಸಮಾನ ಮನಸ್ಕರ ವೇದಿಕೆಯ ಮುನೀರ್ ಕಾಟಿಪಳ್ಳ, ಕರ್ನಾಟಕ ಪ್ರಾಂತ ರೈತ ಸಂಘದ ಕೆ ಯಾದವ ಶೆಟ್ಟಿ, ದಲಿತ ನಾಯಕ ಎಂ ದೇವದಾಸ್, ಹಿರಿಯ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್, ಸಾಮರಸ್ಯದ ಮಂಜುಳಾ ನಾಯಕ್, ಡಿವೈಎಫ್ಐ ನಾಯಕ ಸಂತೋಷ್ ಬಜಾಲ್, ಸಮುದಾಯದ ಮನೋಜ್ ವಾಮಂಜೂರು, ಸಾಮಾಜಿಕ ಕಾರ್ಯಕರ್ತರಾದ ಸ್ಟಾನಿ ಆಳ್ವಾರಿಸ್, ನಿತಿನ್ ಬಂಗೇರ, ಸಮರ್ಥ್ ಭಟ್ ಇದ್ದರು.