ಮಂತ್ರಿ ಸ್ಥಾನ ಬೇಕೆಂದು ಸಭಾಧ್ಯಕ್ಷ ಸ್ಥಾನ ನೀರಾಕರಿಸಬೇಡಿ ಎಂದು ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್ ನಗೆ ಚಟಾಕಿ ಹಾರಿಸಿದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆದ ಎಚ್ ಕೆ ಪಾಟೀಲ್ ಐದು ಸಂಪುಟಗಳ ಗ್ರಂಥ ಲೋಕಾರ್ಪಣೆ ಮಾಡಿ, ಮಾತನಾಡಿದರು.
“ಸಭಾಧ್ಯಕ್ಷ ಸ್ಥಾನ ಬಹಳಷ್ಟು ಪ್ರಾಮುಖ್ಯತೆ ಹೊಂದಿರುವ ಸ್ಥಾನ. ಆ ಸ್ಥಾನ ಸಿಕ್ಕಾಗ ತೆಗೆದುಕೊಳ್ಳುವುದು ಒಳ್ಳೆಯದು. ಪುಸ್ತಕ ಲೋಕಾರ್ಪಣೆ ಅಷ್ಟೇ ಅಲ್ಲದೆ ಎಲ್ಲ ರೀತಿಯ ಗೌರವಯುತ ಜವಾಬ್ದಾರಿಗಳು ಸಭಾಧ್ಯಕ್ಷ ಸ್ಥಾನಕ್ಕೆ ಇವೆ. ಯುವ ಶಾಸಕರು ಇತ್ತಿಚೆಗೆ ಸಭಾಪತಿ ಸ್ಥಾನ ಬೇಡವೆಂದು ನಿರಾಕರಿಸಬೇಡಿ” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದ.ಕ | ಹಿಂದೂ ಸಮಾಜದ ಉಳಿವಿಗೆ ಮದ್ಯ ನಿಷೇಧಿಸಿ ರಾಮ ರಾಜ್ಯ ಮಾಡಿ: ಜೆಡಿಯು ಮುಖಂಡ
“ಹಿರಿಯ ಮುತ್ಸದ್ಧಿ ರಾಜಕಾರಣಿ ಎಚ್ ಕೆ ಪಾಟೀಲ್ ಐದು ಸಂಪುಟಗಳ ಗ್ರಂಥ ಲೋಕಾರ್ಪಣೆ ಮಾಡುವ ಸದಾವಕಾಶ ನನಗೆ ಸಿಕ್ಕಿದ್ದು ಖುಷಿ ತಂದಿದೆ. ಈ ಕೃತಿ ಯುವ ರಾಜಕಾರಣಿಗಳು ಹಾಗೂ ಶಾಸಕರಿಗೆ ಸೂಕ್ತ ಮಾರ್ಗದರ್ಶನ ಮಾಡಲಿದೆ” ಎಂದು ತಿಳಿಸಿದರು.