ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆಯವರು, ತನ್ನ ಚುನಾವಣೆ ಅಫಿಡವಿಟ್ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಭಗವಂತ ಖೂಬಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಇನ್ನು ವಕೀವ ವೃತ್ತಿ ಪೂರ್ಣಗೊಳಿಸಿಲ್ಲ, ಆದರೆ ನಾನೊಬ್ಬ ವಕೀಲನಿದ್ದೇನೆ, ಸುಪ್ರೀಂ ಕೊರ್ಟ್ ಜಡ್ಜ್ ಕೆಳಗಡೆ ಕೆಲಸ ಮಾಡುತ್ತಿರುವೆ ಎಂದೆಲ್ಲಾ ಸುಳ್ಳು ಹೇಳಿಕೊಂಡಿದ್ದಾರೆ. ಹೀಗಾಗಿ ಸಾಗರ ಖಂಡ್ರೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
“ಸಾಗರ ಖಂಡ್ರೆ ಕೇವಲ ಎಲ್ಎಲ್ಬಿ ಪಾಸ್ ಮಾಡಿದ್ದಾರೆ, ಆದರೆ ವಕೀಲ ವೃತ್ತಿ ಪ್ರಾರಂಭಿಸಬೇಕೆಂದರೆ, ಅಖಿಲ ಭಾರತ ಬಾರ್ ಅಸೋಶಿಯೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸ್ ಸರ್ಟಿಫಿಕೇಟ್ ಪಡೆದ ಮೇಲೆ ಇವರು ವಕೀಲರಾಗಬಹುದು. ಆದರೆ ಸಾಗರ್ ಖಂಡ್ರೆ ಇನ್ನು ಸದರಿ ಪರೀಕ್ಷೆ ಪಾಸಾಗಿರುವುದಿಲ್ಲ. ಹಾಗಾಗಿ ಇವರು ವಕೀಲರಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ತನ್ನ ಅಫೀಡಾವಿಟ್ನಲ್ಲಿ ಆದಾಯದ ಮೂಲ ವಕೀಲ ವೃತ್ತಿಯಿಂದ ಬಂದಿರುವುದು ಎಂದು ಹೇಳಿಕೊಂಡಿದ್ದಾರೆ, ಇದು ಸಂಪೂರ್ಣ ಸುಳ್ಳು ಹಾಗೂ ತಪ್ಪು ಮಾಹಿತಿ ನೀಡಿದ್ದಾರೆ” ಎಂದು ಪ್ರತಿಪಾದಿಸಿದರು.
ಸಾಗರ್ ಖಂಡ್ರೆ ಕೇವಲ 26 ವರ್ಷದವರಾಗಿದ್ದು, ಇವರಿಗೆ ಮೂವರು 1.50 ಕೋಟಿ ರೂ. ಕೈ ಸಾಲ ನೀಡಿದ್ದಾರೆ. ಸದರಿ ಮಾಹಿತಿಯೂ ಶುದ್ಧ ಸುಳ್ಳಾಗಿದ್ದು, ರಾಜಕೀಯಕ್ಕೆ ಬರುವ ಮುನ್ನವೆ ಇಷ್ಟೊಂದು ಸುಳ್ಳು ಹೇಳುವ ಸಾಗರ್ ಖಂಡ್ರೆ, ಜನರಿಗೆ ದಾರಿ ತಪ್ಪಿಸುವುದರಲ್ಲಿ ತಂದೆಗಿಂತ ಒಂದು ಹೆಜ್ಜೆ ಮುಂದೆ ಇದ್ದಾರೆ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಪ್ಪ ಮಕ್ಕಳ ಜೊತೆ ಯಾವುದೇ ರೀತಿ ವ್ಯವಹಾರ ಮಾಡುವ ಮುನ್ನ ಹತ್ತಾರು ಬಾರಿ ಯೋಚಿಸಿ ಎಂದು ಜನತೆಯಲ್ಲಿ ಭಗವಂತ ಖೂಬಾ ಮನವಿ ಮಾಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಜಿಲ್ಲೆಯ ರೈತರಿಗೆ 1,200 ಕೋಟಿ ರೂ. ಬೆಳೆ ವಿಮೆ ಪರಿಹಾರ ನೀಡಲಾಗಿದೆ ಎಂದು ಖೂಬಾ ಹೇಳಿದ್ದು ಸುಳ್ಳು : ಖಂಡ್ರೆ
ಪರಿಪೂರ್ಣ ವಕೀಲ ಆಗದೆ ಇದ್ದರೂ, ನಾನೊಬ್ಬ ವಕೀಲ ಇದ್ದೇನೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಸಾಗರ ಖಂಡ್ರೆ ಮೊದಲು ಕಾನೂನಿಗೆ ಗೌರವಿಸುವುದು ಕಲಿಯಲಿ, ಸರಿಯಾದ ಮಾಹಿತಿ
ನೀಡುವುದು ಕಲಿತುಕೊಳ್ಳಲಿ ಆಮೇಲೆ ನನ್ನ ಜೊತೆಗೆ ಚರ್ಚೆಗೆ ಬರಲಿ ಎಂದು ಭಗವಂತ ಖೂಬಾ ತಿಳಿಸಿದ್ದಾರೆ.