ಕೇಸರೀಕರಣಗೊಂಡ ಪಠ್ಯ ಬದಲಾಯಿಸುತ್ತಿದ್ದೇವೆ: ಸಚಿವ ಮಧು ಬಂಗಾರಪ್ಪ

Date:

  • ಇಡೀ ಪಠ್ಯಪುಸ್ತಕ ಪರಿಷ್ಕರಣೆ ಸದ್ಯ ಮಾಡುವುದಿಲ್ಲ
  • ‘ಒಂದು ತಿಂಗಳಲ್ಲೇ ಸಪ್ಲಿಮೆಂಟರಿ ಬುಕ್ ನೀಡುತ್ತೇವೆ’

ಕೇಸರೀಕರಣಗೊಂಡ ಪಠ್ಯದಲ್ಲಿ ಹಲವು ಬದಲಾವಣೆ ತರಲು ನಿರ್ಧರಿಸಲಾಗಿದೆ. ಹೆಡ್ಗೆವಾರ್ ಪಠ್ಯ ತೆಗೆದಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ವಿಧಾನಸೌದದಲ್ಲಿ ಗುರುವಾರ ಮಾತನಾಡಿದ ಅವರು, “ಇಡೀ ಪಠ್ಯಪುಸ್ತಕ ಪರಿಷ್ಕರಣೆ ಸದ್ಯ ಮಾಡುವುದಿಲ್ಲ. ಹೀಗಾಗಿ ಮಕ್ಕಳಿಗೆ ಏನನ್ನು ಹೇಳಿಕೊಡಬೇಕು? ಏನನ್ನು ತೆಗೆಯಬೇಕು? ಅದನ್ನು ತಿಳಿಸುತ್ತೇವೆ” ಎಂದಿದ್ದಾರೆ.

“ಸಿಎಂ ಮಾರ್ಗದರ್ಶನದ ಮೇಲೆ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಪ್ರಣಾಳಿಕೆಯಲ್ಲೂ ನಮ್ಮ‌ಕಮಿಟ್ ಮೆಂಟ್ ಇತ್ತು. ನಮ್ಮ ಸರ್ಕಾರ ಬರುವಾಗಲೇ ಪುಸ್ತಕ ಮಕ್ಕಳ‌ ಕೈ ಸೇರಿದೆ. ವಾಪಸ್ ತರಿಸೋಕೆ ಕಷ್ಟ. ಯಾವುದು ಬೇಕು, ಬೇಡ ಅಂತ ಸಪ್ಲಿಮೆಂಟರಿ ಬುಕ್ ಮಾಡುತ್ತೇವೆ. 12 ಲಕ್ಷ ಇದಕ್ಕೆ ಖರ್ಚು ಬರಬಹುದು. 75 ಸಾವಿರ ಶಾಲೆಗಳಿಗೆ ಇದನ್ನು ಕಳುಹಿಸಿಕೊಡಲಾಗುವುದು” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಸಾವಿತ್ರಿ ಫುಲೆ ವಿಚಾರ ತೆಗೆದಿದ್ದರು. ಅದನ್ನು ಸೇರಿಸುತ್ತಿದ್ದೇವೆ. ‘ನೀ ಹೋದ ಮರುದಿನ ಅಂಬೇಡ್ಕರ್’ ಕವನ ಬಿಟ್ಟಿದ್ದರು ಅದನ್ನ ನಾವು ‌ಮರು ಸೇರಿಸಿದ್ದೇವೆ. ಸಾವರ್ಕರ್, ಸೂಲಿಬೆಲೆ ಪಾಠಗಳನ್ನ ತೆಗೆದಿದ್ದೇವೆ. ಒಂದು ತಿಂಗಳಲ್ಲೇ ಸಪ್ಲಿಮೆಂಟರಿ ಬುಕ್ ನೀಡುತ್ತೇವೆ. 15 ಪೇಜುಗಳ ಪುಸ್ತಕ ಇರಬಹುದು. ಅದು ಸದ್ಯದಲ್ಲೇ ವಿದ್ಯಾರ್ಥಿಗಳ ಕೈ ಸೇರಲಿದೆ” ಎಂದರು.

ಐವರು ತಜ್ಞರ ಸಮಿತಿ ರಚಿಸಲಾಗಿದೆ. ಅದರಲ್ಲಿ ರಾಜಪ್ಪ ದಳವಾಯಿ, ಅಶ್ವಥ ನಾರಾಯಣ, ರಾಜೇಶ್ ಸೇರಿ ಐವರಿದ್ದಾರೆ. ಪದಗಳ ಬದಲಾವಣೆ, ವಾಕ್ಯ ಬದಲಾವಣೆ ಮಾಡಲಿದ್ದಾರೆ. 6 ರಿಂದ 10ನೇ ತರಗತಿ ವರೆಗೆ ಪಠ್ಯ ಬದಲಾವಣೆ ಮಾಡುತ್ತೇವೆ” ಎಂದು ಹೇಳಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ ಪೆನ್‌ಡ್ರೈವ್‌ | ಪ್ರಜ್ವಲ್ ರೇವಣ್ಣ ದೇಶಬಿಟ್ಟು ಓಡಿ ಹೋಗಲು ಮೋದಿ ಸಹಾಯ ಮಾಡಿದರಾ?; ರಾಷ್ಟ್ರಮಟ್ಟದಲ್ಲಿ ಆಕ್ರೋಶ

ಹಾಸನ ಪೆನ್‌ಡ್ರೈವ್‌ ಪ್ರಕರಣವು ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಪ್ರಕರಣವನ್ನು ಎಸ್‌ಐಟಿ ತನಿಖೆಗೆ...

ಮೋದಿ ಹೇಳಿಕೆ ಟೀಕಿಸಿದ ಬಿಜೆಪಿಯ ಬಿಕಾನೇರ್ ಅಲ್ಪಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷರ ಬಂಧನ!

ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಮರ...

ಮೀಸಲಾತಿ ರದ್ದು ಮಾಡುವುದೇ ಬಿಜೆಪಿ ಗುರಿ; ಅದರ ನಾಯಕರ ಹೇಳಿಕೆಗಳಿಂದಲೇ ಸ್ಪಷ್ಟ: ರಾಹುಲ್ ಗಾಂಧಿ

ಸಂವಿಧಾನವನ್ನು ಬದಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ನಾಶಪಡಿಸುವುದು ಮತ್ತು ದಲಿತರು, ಹಿಂದುಳಿದ ವರ್ಗಗಳು...

‘ಪ್ರಧಾನಿ ಮೋದಿಗೆ ಗುಜರಾತ್‌ನಲ್ಲಿ ಮುಸ್ಲಿಂ ಒಬಿಸಿ ಮೀಸಲಾತಿ ಓಕೆ, ಇತರೆಡೆ ಮಾತ್ರ ಬೇಡ’

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮುಸ್ಲಿಂ ಒಬಿಸಿ ಮೀಸಲಾತಿ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ....