ಕಲಬುರಗಿ | ಅಂಗನವಾಡಿ ಕೇಂದ್ರಗಳ ಆಹಾರ ಸಾಮಾಗ್ರಿ ವರದಿ ನೀಡುವಂತೆ ಒತ್ತಾಯ

Date:

Advertisements

ಸೇಡಂ ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳ ಮೂರು ತಿಂಗಳ ಆಹಾರ ಸಾಮಾಗ್ರಿ ಮತ್ತು ಅಡುಗೆ ಅನಿಲದ ವರದಿ ನೀಡುವಂತೆ ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮನವಿ ಪತ್ರ ಸಲ್ಲಿಸಿದೆ.

“ಕೆಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ಕೇಂದ್ರದ ಸಿಬ್ಬಂದಿಯು ಮೂರು ತಿಂಗಳಿಂದ ಸರಿಯಾಗಿ ನಮಗೆ ಆಹಾರ ಸಾಮಾಗ್ರಿ ಮತ್ತು ಅಡಿಗೆ ಅನೀಲವನ್ನು ನೀಡುತ್ತಿಲ್ಲ ಎಂದು ಭಯದಿಂದ ತಿಳಿಸಿದರು. ತದನಂತರ ನಾವು ಸುತ್ತಲಿನ ಗ್ರಾಮಸ್ತರಿಗೆ ವಿಚಾರಿಸಿದಾಗ, ಪ್ರತಿ ತಿಂಗಳು ಆಹಾರ ಸರಬರಾಜು ವಾಹನನ್ನು ಕೇಂದ್ರಕ್ಕೆ ನೀಡಬೇಕಾಗಿದ್ದ ಪದಾರ್ಥನ್ನು ನೀಡದೆ, ಅಲ್ಪ ಪದಾರ್ಥ ನೀಡಿ ಪೂನಃ ಅದೆ ವಾಹನದ ಮುಖಾಂತರ ಮಾರಾಟವಾಗುತ್ತದೆ” ಎಂದು ಬಿಎಸ್‌ಪಿ ಮುಖಂಡರು ತಿಳಿಸಿದ್ದಾರೆ.

ಈ ದಂಧೆಯು ಅಧಿಕಾರಿಗಳ ಮಖಾಂತರವೇ ನಡೆಯುತ್ತಿದೆ ಎಂದು ಕೆಲವು ಮೂಲಗಳಿಂದ ಕಂಡುಬಂದಿರುತ್ತದೆ. ಅಡಿಗೆ ಅನೀಲವನ್ನು ಪ್ರತಿ ತಿಂಗಳು ನೀಡದೆ ಬೋಕಾಸು ಬಿಲ್ಲುಗಳು ಪಡೆದಿರುತ್ತಾರೆ. ಅಂಗನವಾಡಿ ಸಿಬ್ಬಂದಿಗಳ ಸಂಬಳಕ್ಕೆ ಪ್ರತಿ ತಿಂಗಳಿಗೆ ರೂ.200ನ್ನು ಮೇಲ್ವವಿಚಾರಕರು ಲಂಚವನ್ನು ಪಡೆಯುತ್ತಿದ್ದರೆ.

Advertisements

ಅದ್ದರಿಂದ ಬಡ ಮಕ್ಕಳಿಗೆ ನೀಡಬೇಕಿದ್ದ ಆಹಾರ ಸಾಮಾಗ್ರಿಗೆ ಕನ್ನ ಹಾಕಿ ಬಡವರ ಹೊಟ್ಟೆಯ ಮೇಲೆ ಹೊಡೆದು ನೀವು ಸಂಪಾದಿಸುತ್ತಿರುವುದನ್ನು ಬಹುಜನ ಸಮಾಜ ಪಕ್ಷವು ಸಹಿಸುವುದಿಲ್ಲ. ನಾವು ಇದನ್ನು ಉಗ್ರವಾಗಿ ಖಂಡಿಸುತ್ತೇವೆ.

ಶೀಘ್ರವಾಗಿ ತಾವೂ ಇದನ್ನು ಸರಿಪಡಿಸಿ ಕೇಂದ್ರಗಳಿಗೆ ನೀಡಬೇಕಿದ್ದ ಆಹಾರ ಸಾಮಾಗ್ರಿಗಳು ನೀಡದಿದ್ದಲ್ಲಿ ತಮ್ಮ ವಿರುದ್ಧ ಬಹುಜನ ಸಮಾಜ ಪಕ್ಷವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ. ಈ ವೇಳೆ ರೇವಣಸಿದ್ಧಪ್ಪ ಎಸ್. ಸಿಂಧೆ, ಸುನಿಲ್ ಹಳ್ಳಿ ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X