ಮಂಡ್ಯ | ವಾಹನ ವ್ಯವಸ್ಥೆ ಇಲ್ಲದೇ ಮತದಾರರ ಪರದಾಟ

Date:

Advertisements

ಕೃಷ್ಣರಾಜಪೇಟೆ ಮತ ಹಾಕಿ ಎಂದು ಮನೆ ಮನೆ ಸುತ್ತುತ್ತಾರೆ. ನಾವು ಮತ ಹಾಕುತ್ತೇವೆಂದರೆ, ದೂರದಿಂದ ಬರುವವರಿಗೆ ಸರಿಯಾಗಿ ವಾಹನದ ವ್ಯವಸ್ಥೆಯೇ ಇಲ್ಲದಾಗಿದೆ. ಅಭ್ಯರ್ಥಿಗಳು ಅಬ್ಬರದ ಪ್ರಚಾರಗಳು, ಭಾಷಣಗಳು ಅವರವರ ಪಕ್ಷದ ಕರಪತ್ರಗಳು ಹಾಗೂ ಪ್ರಣಾಳಿಕೆಯನ್ನು ಹಂಚುತ್ತಾರೆ. ಮತ ಚಲಾಯಿಸಲು ಮತದಾರರಿಗೆ ಬೇಕಾಗುವ ಸವಲತ್ತುಗಳನ್ನು ಮಾಡಿ ಕೊಡುತ್ತಾರೆ. ಆದರೆ, ಆದರೆ, ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್ ಪೇಟೆ ತಾಲೂಕಿಗೆ ಸೇರುವ ರಾಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆಯಲ್ಲಿ ಮತ ಚಲಾಯಿಸಲು ಬರುಲು ಬೇರೆ ಬೇರೆ ಜಿಲ್ಲೆಗೆ ಕೆಲಸಕ್ಕೆಂದು ಹೋಗಿರುವ ಮತದಾರರಿಗೆ ಕಷ್ಟವಾಗುತ್ತಿದೆ.

ಇಂದು ಮತ ಚಲಾಯಿಸಲು ಬರುವವರಿಗೆ ಬಸ್ ಸಂಖ್ಯೆ ಕಡಿಮೆ ಇರುವುದರಿಂದ ಸಮಸ್ಯೆ ಉಂಟಾಗಿದೆ. ಈ ಮತಗಟ್ಟೆಯಲ್ಲಿ ಯಾವುದೇ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿಯಿಂದ ಯಾವುದೇ ಮಾಹಿತಿ ನೀಡಿಲ್ಲ ಹಾಗೂ ವ್ಯವಸ್ಥೆ ಕೂಡ ಸರಿಯಾಗಿ ನಿರ್ವಹಿಸಿಲ್ಲ ಎಂದು ಮತದಾರರು ಆರೋಪಿಸುತ್ತಿದ್ದಾರೆ.

ಕಳೆದ ಸಲ ವಿಧಾನಸಭಾ ಕ್ಷೇತ್ರದಲ್ಲಿ ಮತದಾನವಿದ್ದಾಗ ಆ ಸಮಯದಲ್ಲಿ ಕೂಡ ಒಂದು ಕುಟುಂಬದಲ್ಲಿ 3 ಜನ ಸದಸ್ಯರು ಮತ ಚಲಾಯಿಸಲು ಕಿಕ್ಕೇರಿಯಿಂದ ರಾಮನಹಳ್ಳಿ ಗ್ರಾಮ ಪಂಚಾಯಿತಿ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಲೆಂದು 14-15 ಕಿ.ಮೀ ಕಾಲುನಡಿಗೆಯಲ್ಲಿ ಹೋಗಿ ಮತ ಹಾಕಿದ್ದೇವೆ ಎಂದು ಹೇಳುತ್ತಿದ್ದಾರೆ ಗ್ರಾಮಸ್ಥರು.

ಯಾವುದೇ ವಾಹನದ ವ್ಯವಸ್ಥೆ ಮಾಡಿ ಕೊಟ್ಟಿರದ ಕಾರಣ ಅನಾರೋಗ್ಯ ಇದ್ದ ನನ್ನ ಗಂಡ ಬಿಸಿನಲ್ಲಿಯೇ ನಡೆದುಕೊಂಡು ಹೋಗಿ ಮತ ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡರು.

Advertisements
Bose Military School

ಪಕ್ಷದ ಕಾರ್ಯಕರ್ತರು ಹಾಗೂ ಜವಾಬ್ದಾರಿ ತೆಗೆದುಕೊಂಡಿರುವವರಿಗೆ ನೆನ್ನೆ ರಾತ್ರಿ ಗಮನಕ್ಕೆ ತಂದರೂ ಯಾವುದೇ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ನಾವು ಯಾವುದೇ ಪಕ್ಷದಿಂದ ಮತ ಹಾಕಲು ಹಣ ಹಾಗೂ ಆಮಿಷಗಳಿಗೆ ಆಸೆ ಪಡುವುದಿಲ್ಲ ಈ ಸಲ ಮತ ಹಾಕುವುದಕ್ಕೆ ಹೋಗುವುದೇ ಬೇಡ ಅಂದುಕೊಂಡಿದ್ದೆವು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಮತ ಹಾಕುವುದು ನಮ್ಮ ಹಕ್ಕು ಹಾಗೂ ನಾವು ಪ್ರಜಾಪ್ರಭುತ್ವದಲ್ಲಿದ್ದೇವೆಂದರೆ ನಾವು ನಮ್ಮ ಮತ ಹಾಕುವುದು ನಮ್ಮ ಹಕ್ಕು ಎಂದು ತಿಳಿದುಕೊಂಡಿದ್ದೇವೆ ಎಂದು ಗ್ರಾಮಸ್ಥರು ಈ ದಿನ.ಕಾಮ್‌ಗೆ ಹೇಳಿಕೊಂಡಿದ್ದಾರೆ.

ದೊರೆನಹಳ್ಳಿ ಗ್ರಾಮದ ಲಕ್ಷ್ಮಮ್ಮನವರು ಹಾಗೂ ಕುಟುಂಬದವರು  ಈದಿನ.ಕಾಮ್ ಜೊತೆ ಮಾತಾಡಿ, ಬೂತ್‌ಗಳಲ್ಲಿ ಕೆಲಸ ಮಾಡುವ ಪಕ್ಷದ ಅಧ್ಯಕ್ಷರು ಹಾಗೂ ಕಾರ್ಯಕರ್ತರಿಗೆ ಹಣ ಹಚ್ಚುವ ಬದಲು ಮತದಾರರಿಗೆ ಮತ ಹಾಕುವ ಅರಿವು ಹಾಗೂ ವಯಸ್ಸಾದ ವೃದ್ಧರಿಗೆ ಹಾಗೂ ಬಸ್ ವ್ಯವಸ್ಥೆ ಕಡಿಮೆ ಇರುವುದರಿಂದ ವಾಹನದ ವ್ಯವಸ್ಥೆ ಮಾಡಿ ಕೊಡಿ. ನಮ್ಮ ಹಾಗೆ ಬೇರೆ ಭಾಗದಿಂದ ಮತ ಹಾಕಲು ಬರುವವರಿಗೆ ಇಂತಹ ಪರಿಸ್ಥಿತಿ ಎದುರಾಗಬಾರದು ಎಂದರು.

ಇಂದು ಬೆಳಗ್ಗೆ ಗಾಡಿ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದರು. ಅವರಿಗೆ ಕರೆ ಮಾಡುವಂತೆ ಸ್ಥಳೀಯ ಮುಖಂಡರು ಹೇಳಿದ್ದರು. ಅವರಿಗೆ ಫೊನ್ ಮೂಲಕ ಮಾತಾಡಿ, ಪೆಟ್ರೋಲ್ ಬಂಕ್ ಸೂರಿ ಅಥವಾ ಸುರೇಶ್ ಅವರೆ ನೀವು ಗಾಡಿ ವ್ಯವಸ್ಥೆ ಮಾಡುತ್ತೇವೆಂದು ಹೇಳಿದ್ರಿ ಎಂದು ವಿಚಾರಿಸಿದಾಗ ʼmide ur tongueʼ ಎಂದು ಕೇಳಿ ಯಾವನು ಕೊಟ್ಟವನು ನಂಬರ್ ಎಂದು ಅವಾಚ್ಯವಾಗಿ ನಿಂದಿಸಿ ಫೋನ್ ಕಟ್ ಮಾಡಿದರು ಎಂದು ಕಿಕ್ಕೇರಿ ಹೋಬಳಿ ಮತದಾರರು ಈದಿನ.ಕಾಮ್‌ಗೆ ತಿಳಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಗಿರಿಜಾ ಎಸ್‌ ಜಿ
ಗಿರಿಜಾ ಎಸ್‌ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements
Advertisements
Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇವನಹಳ್ಳಿ ರೈತ ಹೋರಾಟ: ಹತ್ತು ದಿನಗಳ ಗಡುವು ಪಡೆಯುವುದೇ ಸರ್ಕಾರ?

ದೇವನಹಳ್ಳಿ ಭೂಸ್ವಾಧೀನ ಕುರಿತು ಚನ್ನರಾಯಪಟ್ಟಣ ರೈತರ ಹೋರಾಟ ಮತ್ತು ಬೇಡಿಕೆಗಳ ಕುರಿತಂತೆ...

ಉಡುಪಿ | “ಸರ್ವರಿಗೂ ಸೂರು” ಮನೆ ನಿರ್ಮಾಣಕ್ಕೆ ಸಹಾಯಧನ – ಅರ್ಜಿ ಆಹ್ವಾನ

ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 ಯೋಜನೆಯಡಿ “ಸರ್ವರಿಗೂ...

ಉಡುಪಿ | ಮಹಿಳೆಯರನ್ನು ಮಾತೆ ಎಂದು ಸಂಭೋಧಿಸುವ ಬಿಜೆಪಿಗರ ನಿಜ ಬಣ್ಣ ಪದೇ ಪದೇ ಬಯಲಾಗುತ್ತಿದೆ

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ...

ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿ ಆಗ್ರಹಿಸಿ ಕಲಬುರಗಿ, ಯಾದಗಿರಿಯಲ್ಲಿ ಪ್ರತಿಭಟನೆ

ಸರ್ಕಾರಿ ಶಾಲೆಗಳಿಗೆ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿ, ಮೂಲಸೌಕರ್ಯ ಸೇರಿದಂತೆ...

Download Eedina App Android / iOS

X