ಹುಬ್ಬಳ್ಳಿ | ಜಾತಿ ಭೇದವ ಮೀರಿ ಸಮಾನತೆ ಸಾರುವ ಸಾರ್ವಕಾಲಿಕ ಸತ್ಯ ವಚನಗಳಲ್ಲಿ ಅಡಗಿದೆ: ಮೂರುಸಾವಿರ ಮಠ ಸ್ವಾಮೀಜಿ

Date:

Advertisements

ಜಾತಿ ಭೇದವ ಮೀರಿ ಸಮಾನತೆ ಸಾರುವ ಸಾರ್ವಕಾಲಿಕ ಸತ್ಯ ವಚನಗಳಲ್ಲಿ ಅಡಗಿದೆ ಎಂದು ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಿಸಿದರು.

ಹುಬ್ಬಳ್ಳಿ ನಗರದ ಮೂರುಸಾವಿರ ಮಠದಲ್ಲಿ ಮಹಾಶರಣೆ ಗಂಗಾಂಬಿಕ ಬಳಗದ ನೇತೃತ್ವದಲ್ಲಿ, ಬಸವ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ 18 ವಿವಿಧ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಶರಣ ನುಲಿಯ ಚಂದಯ್ಯ ಜಯಂತಿ ಪ್ರಯುಕ್ತ ಬಸವಾದಿ ಶರಣರ 108 ವಚನಗಳ ಸಾಮೂಹಿಕ ಪಾರಾಯಣ ಕಾರ್ಯಕ್ರಮದಲ್ಲಿ ವಚನ ಪಾರಾಯಣ ಮಾಲಿಕೆ-1 ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

WhatsApp Image 2024 08 20 at 1.18.22 PM

“ವಚನಗಳು ವಿಶ್ವದ ಶ್ರೇಷ್ಠ ಮೌಲ್ಯ ಸಾರುವ ತತ್ವಗಳಾಗಿವೆ. ಜಾತಿ, ಮತ, ಪಂಥ ಭೇದವನ್ನು ಮೀರಿ ಸಮಾನತೆ ಸಾರುವ ಸಾರ್ವಕಾಲಿಕ ಸತ್ಯ ವಚನಗಳಲ್ಲಿ ಅಡಗಿದೆ. ನಾನು ವಚನ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ತಲೆಯ ಮೇಲೆ ಎತ್ತಿ ಹಿಡಿದು ಗೌರವಿಸಿದ್ದೇನೆ” ಎಂದರು.

Advertisements

ಅಥಣಿ ಶಿವಯೋಗಿಗಳು, ಇಳಕಲ್ಲಿನ ವಿಜಯಮಹಾಂತಪ್ಪಗಳು, ಘನಮಠ ಶಿವಯೋಗಿಗಳು ವಚನ ಗ್ರಂಥಗಳನ್ನು ಬೆನ್ನಿಗೆ ಕಟ್ಟಿಕೊಂಡು ನಾಡಿನಾದ್ಯಂತ ಸಂಚರಿಸಿ ವಚನಗಳ ಪ್ರಸಾರ ಮಾಡಿದ್ದು ಈ ನಾಡಿನ ಇತಿಹಾಸದಲ್ಲಿ ಇರುವುದನ್ನು ಸ್ಮರಿಸಿದರು. ಲಿಂಗಾಯತ ಧರ್ಮಿಯರು ವಚನಗಳನ್ನೇ ನಿತ್ಯ ಪಾರಾಯಣ ಮಾಡಿ ಬದುಕನ್ನು ಹಸನುಗೊಳಿಸಿಕೊಳ್ಳುವ ಸಂದೇಶ ನೀಡಿದರು.

ಹಿರಿಯ ಅನುಭಾವಿ ಪ್ರೊ. ಸಿದ್ದಣ್ಣ ಲಂಗೋಟಿ ಸಭೆಯಲ್ಲಿ ತಮ್ಮ ಅನುಭವ ನೀಡಿದರು. ಡಾ. ಸ್ನೇಹಾ ಭೂಸನೂರ ಹಾಗೂ ಸುಮಾರು 200 ಕ್ಕೂ ಅಧಿಕ ಶರಣೆಯರು ಏಕಕಾಲಕ್ಕೆ ಬಸವಾದಿ ಶರಣರ 108 ವಚನಗಳನ್ನು ಪಾರಾಯಣ ಮಾಡಿದರು.

WhatsApp Image 2024 08 20 at 1.18.23 PM
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X