ಯೇಸುಕ್ರಿಸ್ತ ಶಿಲುಬೆಯಲ್ಲಿ ಮರಣ ಹೊಂದಿದ ದಿನವಾದ ‘ಶುಭ ಶುಕ್ರವಾರ’ವನ್ನು ಕ್ರೈಸ್ತ ಬಾಂಧವರು ಅತ್ಯಂತ ಶ್ರದ್ಧಾಭಕ್ತಿಯಿಂದ ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಚರಿಸಿದರು.
ಕೈಸ್ತ ಬಾಂಧವರು ಅತ್ಯಂತ ಶ್ರದ್ಧೆಯಿಂದ ಉಪವಾಸ ವ್ರತ ಮಾಡಿ ಮಧ್ಯಾಹ್ನದವರೆಗೂ ಚರ್ಚ್ಗಳಲ್ಲಿ ಸೇರಿ ಯೇಸುಕ್ರಿಸ್ತನ ಆರಾಧನೆ, ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಶುಭ ಶುಕ್ರವಾರವನ್ನು ಆಚರಣೆ ಮಾಡಿದರು.
ಚರ್ಚ್ಗಳಲ್ಲಿ ಶುಭ ಶುಕ್ರವಾರದ ಪ್ರಯುಕ್ತ ಯೇಸುಕ್ರಿಸ್ತನ ಉಪದೇಶಗಳು, ಗುಣಗಳು ಹಾಗೂ ಅವರು ಜೀವಿಸಿದ ರೀತಿಯನ್ನು ತಿಳಿಸಿದರು.
ಶುಭ ಶುಕ್ರವಾರಕ್ಕಿಂತ 40 ದಿನ ಮುನ್ನ ಕ್ರೈಸ್ತ ಸಮುದಾಯದಲ್ಲಿ ಉಪವಾಸ ಶುರುವಾಗುತ್ತದೆ. 39ನೇ ದಿನವನ್ನು ಶುಭ ಶುಕ್ರವಾರ ಎಂದು ಆಚರಿಸಲಾಗುತ್ತದೆ. ನಗರದ ಹೊರಪೇಟೆಯಲ್ಲಿರುವ ಲೂರ್ದುಮಾತೆ ದೇವಾಲಯ ಸೇರಿದಂತೆ ವಿವಿಧ ಚರ್ಚ್ಗಳಲ್ಲಿ ಶುಭ ಶುಕ್ರವಾರದ ಅಂಗವಾಗಿ ಯೇಸುಕ್ರಿಸ್ತನ ಶಿಲುಬೆಯನ್ನು ಚರ್ಚ್ ಸುತ್ತ ಕೊಂಡೊಯ್ದು ಪೂಜೆ ನೆರವೇರಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನೀರಾವರಿ ಸಂಪರ್ಕ ಕಲ್ಪಿಸದಿದ್ದರೆ ಚುನಾವಣೆ ಬಹಿಷ್ಕಾರ; ಭರಮಗಿರಿ ಕೆರೆಯಾಶ್ರಿತ ಜನರ ಎಚ್ಚರಿಕೆ
ನಗರದ ವಿವಿಧೆಡೆ ಇರುವ ಚರ್ಚ್ಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದಲೇ ಗುಡ್ ಫ್ರೈಡೇ ಆಚರಿಸಲಾಗುತ್ತಿದ್ದು, ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಯೇಸುಕ್ರಿಸ್ತನಿಗೆ ಗೌರವ ನಮನ ಸಲ್ಲಿಸಿದರು.