ಸ್ನೇಹಿತರ ಜೊತೆಗೆ ತಲಕಾಡಿಗೆ ತೆರಳಿದ್ದಂತ ಇಬ್ಬರು ಬಾಲಕರು ಕಾವೇರಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ತಲಕಾಡಿಗೆ ಬೆಂಗಳೂರಿನಿಂದ ಸ್ನೇಹಿತರ ಮಕ್ಕಳೊಂದಿಗೆ ಲೋಹಿತ್(13) ಮತ್ತು ಯತೀಶ್ (15) ತೆರಳಿದ್ದರು. ಕಾವೇರಿ ನದಿ ನೀರಿನಲ್ಲಿ ಆಟವಾಡುವಾಗ ನದಿಯಲ್ಲಿ ಮುಳುಗಿ ಇಬ್ಬರೂ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ ರವಿಗೌಡ ಎಂಬುವರ ಪುತ್ರರಾಗಿದ್ದರು. ತಲಕಾಡಿಗೆ ಪ್ರವಾಸಕ್ಕೆಂದು ಸ್ನೇಹಿತರ ಜೊತೆ ತೆರಳಿದ್ದರು. ಕಾವೇರಿ ನಿಸರ್ಗಧಾಮದ ಬಳಿಯ ನದಿಯಲ್ಲಿ ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿ ಮೃತ ಬಾಲಕರ ದೇಹವನ್ನು ಕಾವೇರಿ ನದಿ ನೀರಿನಿಂದ ಹೊರಕ್ಕೆ ತೆಗೆದಿದ್ದಾರೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | 24 ಮಂದಿ ಕೈದಿಗಳ ಬಿಡುಗಡೆ