ಉತ್ತರ ಕನ್ನಡ | ದಾಸ್ತಾನು ಆಗಿದ್ದ 18 ರಾಶಿ ಅದಿರಿಗೆ ಮುಕ್ತಿ

Date:

  • ದಾಸ್ತಾನಾಗಿದ್ದ ಅದಿರನ್ನು ಹರಾಜು ಮೂಲಕ ವಿಲೇವಾರಿಗೆ ಕೋರ್ಟ್ ಸೂಚಿಸಿತ್ತು
  • ದಾಸ್ತಾನು ಆಗಿದ್ದ ಅದಿರು ಧೂಳು ಮುಕ್ತವಾಗುವುದು ಖಚಿತವಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿನ ವಾಣಿಜ್ಯ ಬಂದರಿನಲ್ಲಿ ಕಳೆದ 13 ವರ್ಷಗಳಿಂದ ದಾಸ್ತಾನು ಆಗಿದ್ದ ಕಬ್ಬಿಣದ ಅದಿರು ಅಂಶವನ್ನು ಒಳಗೊಂಡ ಮಣ್ಣಿನ ರಾಶಿಯ ಮಾರಾಟಕ್ಕೆ ಆರನೇ ಬಾರಿಗೆ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಬಂದರು ಪ್ರದೇಶದಲ್ಲಿರುವ 18 ರಾಶಿಗಳ 30 ಸಾವಿರ ಟನ್ ಅದಿರು ಖರೀದಿ ಪ್ರಕ್ರಿಯೆಗಳು ಪೂರ್ಣಗೊಳ್ಳುವ ಹಂತಕ್ಕೆ ತಲುಪಿವೆ.

ಇ–ಹರಾಜು ಪ್ರಕ್ರಿಯೆಯಲ್ಲಿ ಹೊರರಾಜ್ಯದ ಕಂಪನಿಯೊಂದು ಅದಿರು ಖರೀದಿಸಲು ಮುಂದಾಗಿದ್ದು, ಅದಿರನ್ನು ಹರಾಜು ಪ್ರಕ್ರಿಯೆ ನಡೆಸಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಆರಂಭಿಕ ಹಣವನ್ನೂ ಭರಣ ಮಾಡಿದೆ. ಕಂಪನಿಗೆ ಗುರುವಾರ ಕಾರ್ಯಾದೇಶ ದೊರೆಯುವ ಸಾಧ್ಯತೆ ಇದ್ದು, ದಶಕದ ಬಳಿಕ ಬಂದರು ಅದಿರು ಧೂಳು ಮುಕ್ತವಾಗುವುದು ಖಚಿತವಾಗಿದೆ.

2010ರ ಮಾರ್ಚ್ 20ರಂದು ಅದಿರು ದಾಸ್ತಾನನ್ನು ಸಿಬಿಐ ವಶಕ್ಕೆ ಪಡೆದಿತ್ತು. ಬಂದರು ಇಲಾಖೆಯ ಸಂರಕ್ಷಣೆಯಲ್ಲಿದ್ದ ಅದಿರಿನಲ್ಲಿ ಒಂದಷ್ಟು ಪ್ರಮಾಣ ನಾಪತ್ತೆಯಾಗಿದೆಯೆಂದು ಅದೇ ವರ್ಷ ಜೂನ್ 8ರಂದು ಕಾರವಾರ ಪೊಲೀಸ್ ಠಾಣೆಗಳಲ್ಲಿ ಅರಣ್ಯ ಇಲಾಖೆ ದೂರು ದಾಖಲಿಸಿತ್ತು. ಅಕ್ರಮ ಅದಿರು ಸಾಗಣೆ ಹಾಗೂ ವಶಪಡಿಸಿಕೊಂಡ ಅದಿರು ಕಳ್ಳಸಾಗಣೆ ಸಂಬಂಧ ಸಿಐಡಿ, ಸಿಬಿಐಗಳು ವಿಚಾರಣೆ ನಡೆಸಿದ್ದವು. ಆದರೂ, ಹಲವು ನ್ಯಾಯಾಲಯಗಳಲ್ಲಿ ಪ್ರಕರಣಗಳು ಇನ್ನೂ ಬಾಕಿ ಇವೆ. ಈ ಸಂಬಂಧ ಈವರೆಗೂ ಯಾವುದೇ ಅಂತಿಮ ತೀರ್ಪು ಹೊರ ಬಿದ್ದಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಂದರು ಪ್ರದೇಶದಲ್ಲಿ ದಾಸ್ತಾನಾಗಿದ್ದ ಅದಿರು ಸಹಿತ ಮಣ್ಣಿನ ರಾಶಿ ಮಳೆಗೆ ಸಿಲುಕಿ ಸಾಕಷ್ಟು ಪ್ರಮಾಣದಲ್ಲಿ ಕೊಚ್ಚಿ ಹೋಗಿದೆ. ಮಣ್ಣಿನಲ್ಲಿರುವ ಅದಿರು ಅಂಶ ಮಳೆ ನೀರಿಗೆ ಕರಗಿ ಪೋಲಾಗುತ್ತಿದೆ ಎಂಬ ಕಾರಣಕ್ಕೆ ಅದರ ರಕ್ಷಣೆಯ ಹೊಣೆ ಹೊತ್ತಿದ್ದ ಅರಣ್ಯ ಇಲಾಖೆ ಅದಿರು ವಿಲೇವಾರಿಗೆ ಹಲವು ಬಾರಿ ನ್ಯಾಯಾಲಯದ ಅನುಮತಿ ಕೇಳಿತ್ತು.

ಈ ಸುದ್ದಿ ಓದಿದ್ದೀರಾ? ಚುನಾವಣೆ ನೀತಿ ಸಂಹಿತೆ ಜಾರಿ; ಅಂಬೇಡ್ಕರ್‌ ಜಯಂತಿ ಕೈಬಿಟ್ಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಅದಿರು ದಾಸ್ತಾನನ್ನು ಹರಾಜು ನಡೆಸಿ ವಿಲೇವಾರಿ ಮಾಡಲು ಕೋರ್ಟ್ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಅದಿರು ಕಂಪನಿಗಳು ಮತ್ತೆ ಕೋರ್ಟ್ ಮೊರೆ ಹೋಗಿದ್ದವು. ನಿರಂತರ ಆಕ್ಷೇಪಣೆಯ ಕಾರಣಕ್ಕೆ ದಾಸ್ತಾನು ವಿಲೇವಾರಿ ಪ್ರಕ್ರಿಯೆ ಅಧಿಕಾರಿಗಳಿಗೆ ಸಮಸ್ಯೆ ಆಗಿತ್ತು. ಈ ಹಿಂದೆ ಐದು ಬಾರಿ ಹರಾಜು ಪ್ರಕ್ರಿಯೆ ನಡೆದರೂ ಯಾರೊಬ್ಬರೂ ಖರೀದಿಗೆ ಆಸಕ್ತಿ ತೋರಿರಲಿಲ್ಲ.

ಬಳ್ಳಾರಿಯಿಂದ ಕಾರವಾರ ಮತ್ತು ಬೇಲೆಕೇರಿ ಬಂದರಿನ ಮೂಲಕ ವಿದೇಶಕ್ಕೆ ರಫ್ತಾಗುತ್ತಿದ್ದ ಮ್ಯಾಂಗನೀಸ್, ಕಬ್ಬಿಣದ ಅದಿರನ್ನು 2010ರಲ್ಲಿ ಸಿಬಿಐ ಮುಟ್ಟುಗೋಲು ಹಾಕಿಕೊಂಡ ಬಳಿಕ ದೊಡ್ಡ ಪ್ರಮಾಣದ ದಾಸ್ತಾನು, ಬಂದರು ಪ್ರದೇಶದಲ್ಲೇ ಉಳಿಯುವಂತಾಗಿತ್ತು. ಸದ್ಯ ಕಾರವಾರದಲ್ಲಿರುವ 30 ಸಾವಿರ ಟನ್ ಅದಿರು ಮಾತ್ರ ವಿಲೇವಾರಿಯಾಗಲಿದೆ. ಆದರೆ, ಅಂಕೋಲಾದ ಬೇಲೆಕೇರಿ ಬಂದರಿನಲ್ಲಿ ಇನ್ನೂ ಸುಮಾರು 3 ಲಕ್ಷ ಟನ್ ಅದಿರು ದಾಸ್ತಾನು ಉಳಿದುಕೊಂಡಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಅರೆಬೆಂದ ಊಟ ಸೇವಿಸಿ ವಸತಿ ನಿಲಯದ ವಿದ್ಯಾರ್ಥಿನಿಯರು ಅಸ್ವಸ್ಥ

ಅಂಬೇಡ್ಕರ್ ವಸತಿ ನಿಲಯವೊಂದರಲ್ಲಿ ಅರೆಬೆಂದ ಊಟ ಸೇವಿಸಿ 24 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ...

ಲೋಕಸಭಾ ಚುನಾವಣೆ | ಮೊದಲ ಹಂತದ ಮತದಾನ ದಿನ 2,172 ಪ್ರಕರಣ ದಾಖಲು

ಲೋಕಸಭಾ ಚುನಾವಣೆ ಹಿನ್ನೆಲೆ, ಏ.26 ರಂದು ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ...

ಚಿಕ್ಕಮಗಳೂರು | ಹಿಂದು ಕಾರ್ಯಕರ್ತನ ಮೇಲೆ ಬಿಜೆಪಿಗರ ಹಲ್ಲೆ

ಹಿಂದುತ್ವವಾದಿ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿ, ಥಳಿಸಿರುವ ಘಟನೆ...

ಮಂಡ್ಯ | 8,000 ಕಿ.ಮೀ ದೂರದಿಂದ ಬಂದು ಮತದಾನ ಮಾಡಿದ ಯುವತಿ!

ಯುವತಿಯೊಬ್ಬರು ಬರೋಬರಿ 8,000 ಕಿ.ಮೀ ದೂರದ ಲಂಡನ್‌ನಿಂದ ಮಂಡ್ಯಕ್ಕೆ ಬಂದು ಮತದಾನ...