- ಟ್ಯಾಕ್ಸಿ ಚಾಲಕರಿಗೆ ಮತದಾನ ವ್ಯವಸ್ಥೆ ಕಲ್ಪಿಸುವಂತೆ ಕರೆ
- ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಮನವಿ
“ದೇಶದ ಪ್ರತಿ ವಯಸ್ಕ ನಾಗರೀಕರು ಮತ ಚಲಾಯಿಸಬೇಕು, ಪ್ರತಿಯೊಬ್ಬರಿಗೆ ಮತದಾನ ಹಕ್ಕು ಇದೆ, ಚಾಲಕರು ಕೂಡ ಎಷ್ಟೇ ಒತ್ತಡವಿದ್ದರೂ ಮತದಾನ ಮಾಡಿ ಕೆಲಸಕ್ಕೆ ಹೋಗಬೇಕು” ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಸಲಹೆ ನೀಡಿದರು.
‘ಗಿರಿನಾಡು ಕಾರು ಮತ್ತು ಟ್ಯಾಕ್ಸಿ ಚಾಲಕರ ಸಂಘ’ದ ವತಿಯಿಂದ ಯಾದಗಿರಿ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಬಳಿಯ ನಗರಸಭೆ ವಾಣಿಜ್ಯ ಸಂಕೀರ್ಣದ ಆವರಣದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುದ್ನಾಳ ಮಾತನಾಡಿದರು.
“ಸ್ವಾತಂತ್ರ್ಯ ಸಿಕ್ಕಂದಿನಿಂದ ಇಲ್ಲಿಯವರೆಗೆ ಚಾಲಕರು ಪ್ರತಿ ಚುನಾವಣೆ ವೇಳೆ ವಾಹನದ ಬಾಡಿಗೆಗೆ ತೆರಳಿದ ಸಂದರ್ಭದಲ್ಲಿ ಮತದಾನದಿಂದ ವಂಚಿತರಾಗುವ ಸಂಭವ ಹೆಚ್ಚಿದೆ. ಆದ್ದರಿಂದ ಟ್ಯಾಕ್ಸಿ ಚಾಲಕರಿಗೆ ವಿಶೇಷ ಮತದಾನ ವ್ಯವಸ್ಥೆಗೆ ಮುಂದಾಗಬೇಕು” ಎಂದು ಚುನವಣೆ ಆಯೋಗವನ್ನು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? : ಆಪರೇಷನ್ ಕಮಲ ಮಾಡಿದಾಗಲೇ ಬಿಜೆಪಿಯ ತತ್ವ ಸಿದ್ಧಾಂತ ಮಣ್ಣು ಪಾಲಾದವು : ಜಗದೀಶ್ ಶೆಟ್ಟರ್
“ಕಾರು ಮತ್ತು ಟ್ಯಾಕ್ಸಿ ಚಾಲಕರಿಗೆ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಟ್ಯಾಕ್ಸಿ ಸ್ಟ್ಯಾಂಡ್ಗೆ ಸ್ಥಳ, ಮೂಲಭೂತ ಸೌಕರ್ಯ ನೀಡದೇ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ನಿರ್ಲಕ್ಷ ವಹಿಸಿರುವುದು ದೃರದೃಷ್ಟಕರ ಸಂಗತಿ. ಚಾಲಕರು ಹೊಟ್ಟೆಪಾಡಿಗಾಗಿ ಬಾಡಿಗೆಗೆ ಹೋಗುತ್ತಾರೆ. ಅವರು ಹೋಗಿ ಬರುವವರೆಗೆ ಅವರ ಬಗ್ಗೆ ಕುಟುಂಬದವರು ಎದುರು ನೋಡುವ ಪರಿಸ್ಥಿತಿ ಇದೆ. ಹೀಗಾಗಿ ಇವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು” ಎಂದು ಒತ್ತಾಯಿಸಿದರು.
ಗಿರಿನಾಡು ಚಾಲಕರ ಸಂಘದ ಅದ್ಯಕ್ಷ ಬಸವರಾಜ ಇಟಗಿ, ಶರಣು ನಾರಾಯಣಪೇಟೆ, ಶರಣು ಜೋತಾ, ಸಾಬಯ್ಯ ಗುತ್ತೇದಾರ, ಅಪಸರ ಬಾಯಿ, ಮಹೇಬೂಬ ಪಾಟೀಲ್, ಬೀರೇಶ ಪೂಜಾರಿ, ಮಹೇಶ ಹೊಸಮಿ, ಭೀಮು ಪುಜಾರಿ, ವೀರೇಶ, ರವಿ, ಶರಣು, ಹೊಸಳ್ಳಿ, ತಾಯಪ್ಪ, ಬನ್ನಪ್ಪ, ಕಾಡಪ್ಪ ಸಿದ್ದು ಮಾನಗನಾಳ, ಅಶೋಕ ಸಜ್ಜನ್, ವಿಜಯಕುಮಾರ, ವಿಶ್ವನಾಥ ಎಂ.ಡಿ. ನಾಯಕ, ನವೀನ ನಾಯ್ಕಲ್, ರಫೀಕ್, ರಫೀಕ್, ರಶೀದ, ಸುಭಾಷ, ಪ್ರಕಾಶ, ಗಂಗು ಮುತ್ಯಾ, ಉಮೇಶ, ಜಮೀರ, ರಿಯಾಜ್, ಸಿರಿ, ನಯಿಮ್, ಅಜಿಮ್, ಸಾಬು, ಮರೆಪ್ಪ, ಗೌಸ್, ಶರಣು ಸ್ವಾಮಿ, ಮಹೇಶ, ನಬಿ, ಗಣೇಶ, ಜಮಾಲ್, ಭೀಮು, ಅಸೀಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.