20 ವರ್ಷಗಳಾದರೂ ಸೇನೆಗೆ ಸಿಗದ ಬಂದೂಕು; ಸಿಎಜಿ ವರದಿಯಲ್ಲಿ ಮಹತ್ವದ ಅಂಶ ಬಹಿರಂಗ

Date:

Advertisements

ಮಾರ್ಚ್ 2022ರ ವೇಳೆಗೆ ಶೇ 8ರಷ್ಟು ಆಧುನಿಕ ಫಿರಂಗಿ ಬಂದೂಕುಗಳನ್ನು (ಹೊವಿಟ್ಜರ್‌) ಮಾತ್ರ ಭೂಸೇನೆಗೆ ಒದಗಿಸಲಾಗಿದೆ ಎಂಬ ಮಹತ್ವದ ಮಾಹಿತಿಯು ಸಿಎಜಿ ವರದಿಯಲ್ಲಿ ಹೊರಬಿದ್ದಿದೆ.

ಭಾರತೀಯ ಸೇನೆಯಲ್ಲಿರುವ ಹಳೆಯ ತಲೆಮಾರಿನ ಫಿರಂಗಿ ಬಂದೂಕುಗಳನ್ನು ಬದಲಾಯಿಸುವ ಪ್ರಸ್ತಾವನೆಗೆ 20 ವರ್ಷ ಕಳೆದರೂ ಮುಕ್ತಿ ಸಿಕ್ಕಿಲ್ಲ. ಉದ್ದೇಶಿತ ಸ್ವಾಧೀನದ ಶೇ 77ರಲ್ಲಿ ಯಾವುದೇ ಪ್ರಗತಿ ಆಗಿಲ್ಲ ಎಂದು ಲೆಕ್ಕಪರಿಶೋಧನೆ ಮತ್ತು ನಿಯಂತ್ರಕ (ಸಿಎಜಿ) ವರದಿ ಹೇಳಿದೆ.

ಮಾರ್ಚ್ 2022ರ ವೇಳೆಗೆ ಶೇ 8ರಷ್ಟು ಆಧುನಿಕ ಫಿರಂಗಿ ಬಂದೂಕುಗಳನ್ನು (ಹೊವಿಟ್ಜರ್‌) ಮಾತ್ರ ಭೂಸೇನೆಗೆ ಒದಗಿಸಲಾಗಿದೆ ಎಂಬ ಮಹತ್ವದ ಮಾಹಿತಿಯು ಸಿಎಜಿ ವರದಿಯಲ್ಲಿ ಹೊರಬಿದ್ದಿದೆ.

Advertisements

ಭಾರತೀಯ ಸೇನೆಗೆ ವಿವಿಧ ಶ್ರೇಣಿಯ ಆಧುನಿಕ ಫಿರಂಗಿಗಳನ್ನು ಖರೀದಿಸುವ ಐದು ಯೋಜನೆಗಳಲ್ಲಿ, ಕೇವಲ ಎರಡು ಮಾತ್ರ ಇಲ್ಲಿಯವರೆಗೆ ಸಾಕಾರಗೊಂಡಿದೆ. ಇದರಲ್ಲಿ ಕೆ-9 ವಜ್ರ ಮತ್ತು ಎಂ-777 ಹಗುರ ಫಿರಂಗಿ ಬಂದೂಕುಗಳ (ಅಲ್ಟ್ರಾ ಲೈಟ್ ಹೊವಿಟ್ಜರ್‌) ಪೈಕಿ ಕೇವಲ 9 ಪ್ರತಿಶತದಷ್ಟು ಮಾತ್ರ ಸೇನೆಯ ಬಳಕೆಗೆ ಲಭ್ಯವಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ.

ಹಳೆಯ ತಲೆಮಾರಿನ 130 ಎಂಎಂ ಬಂದೂಕುಗಳನ್ನು ಬದಲಾಯಿಸುವ ಆರನೇ ಯೋಜನೆಯಡಿ ಮಾರ್ಚ್ 2022ರ ವೇಳೆಗೆ ಶೇ 16ರಷ್ಟು ಮಾತ್ರ ಸೇನೆಗೆ ಪೂರೈಕೆಯಾಗಿದೆ ಎಂದು ಸಿಎಜಿ ಹೇಳಿದೆ.

155mm/52-ಕ್ಯಾಲಿಬರ್ ಟೋವ್ಡ್ ಮತ್ತು ಕ್ಯಾಲಿಬರ್ ಮೌಂಟೆಡ್ ಬಂದೂಕುಗಳ ಪೂರೈಕೆಗೆ 2007 ಮತ್ತು 2009ರಲ್ಲೇ ರಕ್ಷಣಾ ಸಚಿವಾಲಯದ ಅನುಮೋದನೆ ದೊರಕಿತ್ತಾದರೂ ಈವರೆಗೂ ಸೇನೆಯ ಬಳಕೆಗೆ ಲಭ್ಯವಾಗಿಲ್ಲ. 155mm/52 ಒಳಗೊಂಡಿರುವ ಪ್ರಸ್ತಾವಿತ ಹೊವಿಟ್ಜರ್ ಸ್ವಾಧೀನದ ಶೇ 77ರಷ್ಟು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಈ ಸುದ್ದಿ ಓದಿದ್ದೀರಾ?: ಐಪಿಎಲ್ 2023 | ಶುಭಮನ್‌ ಅಮೋಘ ಆಟ; ಗುಜರಾತ್‌ಗೆ ರೋಚಕ ಜಯ

“ಹಳೆಯ ತಲೆಮಾರಿನ ಫಿರಂಗಿ, ಬಂದೂಕುಗಳನ್ನು ಬದಲಾಯಿಸಿ ಆಧುನೀಕರಣಗೊಳಿಸುವ  ಕುರಿತಾದ ಆರು ಯೋಜನೆಗಳಲ್ಲಿ ಮೂರು ಮಾತ್ರ ಒಪ್ಪಂದಗಳಾಗಿ ಬದಲಾಗಿದೆ. ಇದರಲ್ಲೂ ಕೇವಲ ಶೇ 17ರಷ್ಟು ಶಸ್ತ್ರಾಸ್ತ್ರಗಳು ಮಾತ್ರ ಈವರೆಗೂ ಪೂರೈಕೆಯಾಗಿದೆ ಎಂದು ಕಳೆದ ವಾರ ಸಂಸತ್‌ಗೆ ಸಲ್ಲಿಸಲಾದ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಸೇನೆಯಲ್ಲಿರುವ ಶಸ್ತ್ರಾಸ್ತ್ರಗಳನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯು ಕಳೆದ ಎರಡು ದಶಕಗಳಿಂದ ಅತ್ಯಂತ ನಿಧಾನಗತಿಯ ಪ್ರಗತಿಯನ್ನಷ್ಟೇ ಸಾಧಿಸಿದೆ ಎಂದು ಸಿಎಜಿ ವರದಿ ಹೇಳಿದೆ.

ಒಟ್ಟು145 ಎಂ-777 ಹಗುರ ಫಿರಂಗಿ ಬಂದೂಕುಗಳ ಪೂರೈಕೆ ಕುರಿತಂತೆ ಅಮೆರಿಕದ  ಬಿಎಇ ಸಿಸ್ಟಮ್ಸ್ ಸಂಸ್ಥೆ ಜೊತೆ ಭಾರತ 2016ರಲ್ಲಿ ಸುಮಾರು 737 ಶತಕೋಟಿ ಡಾಲರ್ ಮೊತ್ತದ (5,000 ಕೋಟಿ ರೂ) ಒಪ್ಪಂದ ಮಾಡಿಕೊಂಡಿದೆ. ಎಂ-777 ಫಿರಂಗಿಗಳ ತಯಾರಿಕೆಗೆ ಪ್ರಮುಖವಾಗಿ ಟೈಟಾನಿಯಂ ಅನ್ನು ಉಪಯೋಗಿಸಲಾಗುತ್ತದೆ, ಪ್ರತಿ ಬಂದೂಕು ಗನ್‌ 4000 ಕೆಜಿ (4 ಟನ್‌) ತೂಕವಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X