ಕಾಂಗ್ರೆಸ್‌ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ; ಒಳಮೀಸಲಾತಿ ಮುಂಚೂಣಿ ಹೋರಾಟಗಾರ ಅಂಬಣ್ಣಗೆ ಸ್ಥಾನ

Date:

Advertisements

ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಕಾಂಗ್ರೆಸ್‌ ತನ್ನ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. 40 ಮಂದಿಯನ್ನು ಸ್ಟಾರ್ ಪ್ರಚಾರಕರೆಂದು ಕಾಂಗ್ರೆಸ್‌ ಪಟ್ಟಿಮಾಡಿದೆ. ಅದರಲ್ಲಿ, ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಜಾರಿಗೊಳಿಸಬೇಕೆಂದು ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅಂಬಣ್ಣ ಅರೋಲಿಕರ್‌ ಅವರನ್ನೂ ಸ್ಟಾರ್ ಪ್ರಚಾರಕರನ್ನಾಗಿ ಕಾಂಗ್ರೆಸ್‌ ನೇಮಿಸಿದೆ.

ಕಳೆದ ವರ್ಷ ಒಳಮೀಸಲಾತಿಗಾಗಿ ನಡೆದ ಬೃಹತ್ ಹೋರಾಟಗಳನ್ನು ಮುನ್ನಡೆಸಿದವರಲ್ಲಿ ಅಂಬಣ್ಣ ಅರೋಲಿಕರ್ ಅವರು ಕೂಡ ಒಬ್ಬರಾಗಿದ್ದರು. ಅವರು ಕಳೆದ ವರ್ಷ ಮಾರ್ಚ್‌ ತಿಂಗಳಿನಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಅಲ್ಲದೆ, “ಒಳಮೀಸಲಾತಿ ಹೋರಾಟದ ಭಾಗವಾಗಿಯೇ ನಾವು ಪಕ್ಷ ಸೇರಿದ್ದೇವೆ. ಕಾಂಗ್ರೆಸ್‌ ಪ್ರತಿನಿಧಿಯಾಗಿ ಅಥವಾ ಜನಪ್ರತಿನಿಧಿಯಾಗಿ ಹೋರಾಟವನ್ನು ಮುಂದುವರೆಸುತ್ತೇವೆ” ಎಂದು ಅವರು ಹೇಳಿದ್ದರು.

ಅಲ್ಲದೆ, ಕಾಂಗ್ರೆಸ್‌ ಇತ್ತೀಚೆಗೆ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ‘ಐಕ್ಯತಾ ಸಮಾವೇಶ’ದಲ್ಲಿಯೂ ಮುಂಚೂಣಿಯಲ್ಲಿದ್ದರು. ಸಮಾವೇಶದಲ್ಲಿ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಕಾಂಗ್ರೆಸ್‌ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Advertisements

ಕರ್ನಾಟಕ ಕಾಂಗ್ರೆಸ್‌ ಸ್ಟಾರ್ ಪ್ರಚಾರಕರ ಪಟ್ಟಿ
1. ಮಲ್ಲಿಕಾರ್ಜುನ ಖರ್ಗೆ
2. ಸೋನಿಯಾ ಗಾಂಧಿ
3. ರಾಹುಲ್ ಗಾಂಧಿ
4. ಕೆ.ಸಿ ವೇಣುಗೋಪಾಲ್
5. ಡಿ.ಕೆ ಶಿವಕುಮಾರ್
6. ಸಿದ್ದರಾಮಯ್ಯ
7. ಪ್ರಿಯಾಂಕಾ ಗಾಂಧಿ
8. ರಣದೀಪ್ ಸಿಂಗ್ ಸುರ್ಜೇವಾಲಾ
9. ಜೈರಾಮ್ ರಮೇಶ್
10. ಡಾ. ಎ.ಎಸ್.ಎಂ ವೀರಪ್ಪ ಮೊಯ್ಲಿ
11. ಲಕ್ಷ್ಮಣ ಸವದಿ
12. ಬಿ.ವಿ. ಶ್ರೀನಿವಾಸ್
13. ಕೆ.ಜೆ ಜಾರ್ಜ್
14. ವಿನಯ್ ಕುಮಾರ್ ಸೊರಕೆ
15. ಬಿ.ಕೆ ಹರಿಪ್ರಸಾದ್
16. ಆರ್.ವಿ ದೇಶಪಾಂಡೆ
17. ಡಾ. ಜಿ ಪರಮೇಶ್ವರ್
18. ಎಚ್.ಕೆ ಪಾಟೀಲ್
19. ಎಂ.ಬಿ ಪಾಟೀಲ್
20. ದಿನೇಶ್ ಗುಂಡೂರಾವ್
21. ಕೃಷ್ಣಬೈರೇಗೌಡ
22. ಎಚ್.ಎಂ. ರೇವಣ್ಣ
23. ಪಿ.ಜಿ.ಆರ್ ಸಿಂಧ್ಯಾ
24.ಬಿ ಸೋಮಶೇಖರ್
25. ಡಾ. ಎಲ್ ಹನುಮಂತಯ್ಯ
26. ಜಿ.ಸಿ. ಚಂದ್ರಶೇಖರ್
27. ಡಾ. ಎ.ಎಸ್. ಸೈಯದ್ ನಸೀರ್ ಹುಸೇನ್
28. ಅಭಿಷೇಕ್ ದತ್
29. ರೋಜಿ ಜಾನ್
30. ಮೇಜರ್ ಜಯಕುಮಾರ್
31. ಬಿ.ಝಡ್. ಜಮೀರ್ ಅಹಮದ್ ಖಾನ್
32. ಎಸ್.ಮಧು ಬಂಗಾರಪ್ಪ
33. ವಿ.ಎಸ್ ಉಗ್ರಪ್ಪ
34. ಪಿಟಿ ಪರಮೇಶ್ವರ್ ನಾಯ್ಕ್
35. ಈಶ್ವರ ಖಂಡ್ರೆ
36. ಸತೀಶ್ ಜಾರಕಿಹೊಳಿ
37. ಎ ತನ್ವೀರ್ ಸೇಠ್
38. ಡಾ. ಬಿ ಪುಷ್ಪಾ ಅಮರನಾಥ್
39. ಉಮಾಶ್ರೀ
40. ಅಂಬಣ್ಣ ಅರೋಲಿಕರ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

Download Eedina App Android / iOS

X