- ರಾಜ್ಯ ಕಾಂಗ್ರೆಸ್ನೊಳಗೆ ತಲ್ಲಣ ಹುಟ್ಟಿಸಿರುವ ಸಿಎಂ ಅಧಿಕಾರಾವಧಿ ವಿಚಾರ
- ಹೈ ಕಮಾಂಡ್ ನಿರ್ಧರಿತ ವಿಚಾರದ ಬಗ್ಗೆ ಹೇಳಿಕೆ ನೀಡದಂತೆ ಎಚ್ಚರಿಕೆ
ಮಂದಿನ 5 ವರ್ಷ ಅವಧಿಗೂ ಸಿದ್ದರಾಮಯ್ಯನವರೇ ಸಿಎಂ ಎಂದು ಹೇಳಿದ್ದ ಸಚಿವ ಎಂಬಿ ಪಾಟೀಲ್ ಹೇಳಿಕೆ ವಿಚಾರವೀಗ ಪಕ್ಷದೊಳಗೆ ಅಸಮಾಧಾನದ ಕಿಡಿ ಹೊತ್ತಿಸಿದೆ. ಈ ವಿಚಾರದ ಮೇಲೆ ಪರ ವಿರೋಧದ ಚರ್ಚೆಗಳು ಆರಂಭವಾಗಿದೆ.
ಇತ್ತ ಈ ಬೆಳವಣಿಗೆ ಗಮನಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಚಿವರು, ಶಾಸಕರುಗಳು ಯಾರೂ ಈ ವಿಚಾರದಲ್ಲಿ ಅನಗತ್ಯ ಹೇಳಿಕೆ ನೀಡಬಾರದು ಎಂದು ಹೇಳಿದ್ದಾರೆ.
ಈ ಕುರಿತು ಪಕ್ಷದ ಸರ್ವ ಸದಸ್ಯರಿಗೂ ಸುರ್ಜೇವಾಲ ಸೂಚನೆ ಹೊರಡಿಸಿದ್ದಾರೆ. ಜೊತೆಗೆ ಸಿಎಂ, ಡಿಸಿಎಂ ಬಗ್ಗೆ 4 ಗೋಡೆಯ ಮಧ್ಯೆ ಮಾತುಕತೆ ನಡೆದಿರುವುದು. ಇದರ ಬಗ್ಗೆ ಯಾರೂ ಕೂಡ ಗೊಂದಲ ಮೂಡಿಸುವ ಹೇಳಿಕೆಯನ್ನು ನೀಡಬೇಡಿ. ಯಾವುದೇ ತೀರ್ಮಾನಗಳಿದ್ದರೂ ಎಐಸಿಸಿ ನಾಯಕರೇ ನಿರ್ಧರಿಸುತ್ತಾರೆ ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?;ಸಿಎಂ ಅಧಿಕಾರಾವಧಿ ವಿಚಾರ | ಎಂಬಿ ಪಾಟೀಲ್ಗೆ ಎಚ್ಚರಿಕೆ ನೀಡಿದ ಸಂಸದ ಡಿಕೆ ಸುರೇಶ್
ಇದೇ ವಿಚಾರದ ಹಿನ್ನೆಲೆಯಲ್ಲಿ ಸಂಸದ ಡಿಕೆ ಸುರೇಶ್ ಹಾಗೂ ಸಚಿವ ಎಂಬಿ ಪಾಟೀಲ್ ನಡುವೆ ಪರೋಕ್ಷ ವಾಕ್ಸಮರ ಏರ್ಪಟ್ಟಿತು. ಈ ವಿಚಾರ ವಿಪಕ್ಷಗಳ ಗಮನಕ್ಕೆ ಬಂದಿತ್ತು. ವಿರೋಧ ಪಕ್ಷ ಇದನ್ನೇ ಟೀಕಾಸ್ತ್ರವನ್ನಾಗಿ ಮಾಡಿಕೊಂಡಿತೆಂಬ ಆತಂಕದ ಕಾರಣ ಸುರ್ಜೇವಾಲ ಈ ಪಕ್ಷದ ಸರ್ವ ಸದಸ್ಯರಿಗೂ ಈ ಸೂಚನೆ ಜಾರಿ ಮಾಡಿದ್ದಾರೆ.