ಮಗ ಕ್ರಿಕೆಟಿಗನಾಗದೇ ಇದ್ದರೆ ಚೆನ್ನಾಗಿರುತ್ತಿತ್ತು: ಬೇಸರ ಹೊರಹಾಕಿದ ರವೀಂದ್ರ ಜಡೇಜಾ ತಂದೆ

Date:

Advertisements
  • ರಿವಾಬಾಳನ್ನು ಮಗ ಮದುವೆಯಾಗದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು: ಅನಿರುದ್ಧ್ ಸಿಂಗ್ ಜಡೇಜಾ
  • ‘ಪತ್ನಿಯ ಹೆಸರಿಗೆ ಮಸಿ ಬಳಿಯಲು ಯತ್ನ’ ಎಂದು ಟ್ವೀಟ್ ಮಾಡಿದ ಕ್ರಿಕೆಟಿಗ ಜಡೇಜಾ

ಟೀಮ್ ಇಂಡಿಯಾದ ಆಟಗಾರನಾಗಿರುವ ರವೀಂದ್ರ ಜಡೇಜಾ ಸದ್ಯ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

“ಮಗನನ್ನು ಕ್ರಿಕೆಟರ್ ಮಾಡದಿರುತ್ತಿದ್ದರೆ ಚೆನ್ನಾಗಿತ್ತು. ರವೀಂದ್ರ ಜಡೇಜಾಗೂ ನಮಗೂ ಈಗ ಯಾವುದೇ ಸಂಬಂಧವಿಲ್ಲ, ಮಾತು ಬಿಟ್ಟು ವರ್ಷಗಳೇ ಕಳೆದಿವೆ. ಇದಕ್ಕೆಲ್ಲ ಆತನ ಪತ್ನಿಯೇ ಕಾರಣ” ಎಂದು ಜಡೇಜಾ ತಂದೆ ಅನಿರುದ್ಧ್ ಸಿಂಗ್ ಜಡೇಜಾ, ಕುಟುಂಬದೊಳಗೆ ಸಂಘರ್ಷ ನಡೆದಿರುವ ಸಂಗತಿಗಳನ್ನು ಹೊರಹಾಕಿದ್ದಾರೆ.

ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಅವರ ತಂದೆಯನ್ನು ‘ದೈನಿಕ್ ಭಾಸ್ಕರ್’ ಸಂದರ್ಶನ ನಡೆಸಿದೆ.

Advertisements

ಈ ವೇಳೆ ತಮ್ಮ ಕುಟುಂಬದಲ್ಲಿ ನಡೆದಿರುವ ಸಂಗತಿಗಳನ್ನು ಹೊರಹಾಕಿರುವ ಅನಿರುದ್ಧ್ ಸಿಂಗ್, ‘ಕುಟುಂಬದೊಳಗಿನ ಈ ಸಂಘರ್ಷಕ್ಕೆ ಜಡೇಜಾ ಪತ್ನಿ, ಸದ್ಯ ಗುಜರಾತ್‌ನ ಬಿಜೆಪಿ ಶಾಸಕಿಯಾಗಿರುವ ರಿವಾಬಾ ಜಡೇಜಾ ಕಾರಣ’ ಎಂದು ಆರೋಪಿಸಿದ್ದಾರೆ.

ಜಡೇಜಾ ಪತ್ನಿ ರಿವಾಬಾ 2022ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಶಾಸಕಿಯಾಗಿ ಆಯ್ಕೆಯಾಗಿದ್ದರು.

Jadeja
ಪತ್ನಿ ರಿವಾಬಾರೊಂದಿಗೆ ರವೀಂದ್ರ ಜಡೇಜಾ

ಸಂದರ್ಶನದಲ್ಲಿ “ತಮ್ಮ ಮಗ ರವೀಂದ್ರ ಮತ್ತು ಸೊಸೆ ರಿವಾಬಾ ಅವರೊಂದಿಗೆ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.

“ಅವರು ನಮ್ಮನ್ನು ಕರೆಯುವುದಿಲ್ಲ, ನಾವು ಸಹ ಅವರನ್ನು ಕರೆಯುವುದಿಲ್ಲ. ನಮ್ಮ ನಡುವೆ ಯಾವುದೇ ಸಂಬಂಧವಿಲ್ಲ. ಕಳೆದ ಐದು ವರ್ಷಗಳಿಂದ ಮೊಮ್ಮಗಳ ಮುಖವನ್ನೇ ನೋಡಿಲ್ಲ” ಎಂದಿದ್ದಾರೆ.

Jadeja Father

“ಮದುವೆಯಾದ ಎರಡು-ಮೂರು ತಿಂಗಳ ನಂತರ ಕುಟುಂಬದೊಳಗೆ ವಿವಾದಗಳು ನಡೆಯಲಾರಂಭಿಸಿದವು. ಆಮೇಲೆ ರಿವಾಬಾ ಎಲ್ಲವೂ ತನ್ನದಾಗಬೇಕು ಎಂದು ಹೇಳಲು ಪ್ರಾರಂಭಿಸಿದಳು. ಅದರಲ್ಲೂ ರಿವಾಬಾ ಅವರ ತಾಯಿ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ನಮ್ಮ ಕುಟುಂಬದ ವಿಚಾರದಲ್ಲಿ ಅವರ ಹಸ್ತಕ್ಷೇಪ ಅತಿಯಾಗಿತ್ತು” ಎಂದಿದ್ದಾರೆ.

ರವೀಂದ್ರ ಜಡೇಜಾ ಅವರ ತಂದೆ ಹತ್ತು ವರ್ಷಗಳಿಂದ ಜಾಮ್‌ನಗರದ ಎರಡು ಬೆಡ್‌ರೂಮ್ ಇರುವ ಫ್ಲ್ಯಾಟ್‌ವೊಂದರಲ್ಲಿ ವಾಸಿಸುತ್ತಿದ್ದಾರೆ. 20 ಸಾವಿರ ಪಿಂಚಣಿಯ ನೆರವಿನಿಂದ ಜೀವನ ಸಾಗಿಸುತ್ತಿದ್ದಾರೆ.

“ರವೀಂದ್ರನನ್ನು ಕ್ರಿಕೆಟಿಗನನ್ನಾಗಿ ಮಾಡಲು ಶ್ರಮಿಸಿದ್ದೇವೆ. ಅವನ ಸಹೋದರಿ ರವೀಂದ್ರನನ್ನು ತಾಯಿಯಂತೆ ನೋಡಿಕೊಂಡಳು. ಆದರೆ ಇದೀಗ ಅವನಿಗೂ ನೈನಾಗೂ ಸಂಬಂಧವೇ ಇಲ್ಲದಂತಾಗಿದೆ. ಅವರನ್ನು ಕ್ರಿಕೆಟಿಗನನ್ನಾಗಿ ಮಾಡದೇ ಇದ್ದಿದ್ದರೆ ಚೆನ್ನಾಗಿತ್ತು. ಸೊಸೆ ರಿವಾಬಾ ಕೇವಲ ಹಣದ ಬಗ್ಗೆ ಕಾಳಜಿ ವಹಿಸುತ್ತಾಳೆ. ಆತನಿಗೆ ಮದುವೆಯಾಗದೇ ಇದ್ದಿದ್ದರೆ ಚೆನ್ನಾಗಿತ್ತು. ಆತನಿಗೆ ಏನು ಮಾಟಮಂತ್ರ ಹಾಕಿದ್ದಾಳೋ ದೇವನಿಗೇ ಗೊತ್ತು. ನಾವು ಈ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ” ಎಂದು ಬೇಸರ ಹೊರಹಾಕಿದ್ದಾರೆ.

‘ಪತ್ನಿಯ ಹೆಸರಿಗೆ ಮಸಿ ಬಳಿಯಲು ಯತ್ನ’ ಎಂದು ಟ್ವೀಟ್ ಮಾಡಿದ ಕ್ರಿಕೆಟಿಗ ಜಡೇಜಾ

ರವೀಂದ್ರ ಜಡೇಜಾ ತಂದೆ ನೀಡಿರುವ ಹೇಳಿಕೆಯು ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ. ಈ ಹಿನ್ನೆಲೆಯಲ್ಲಿ ಇದು ವಿವಾದಕ್ಕೂ ಕಾರಣವಾಗಿದೆ.

ಈ ಬಗ್ಗೆ ಗುಜರಾತ್ ಭಾಷೆಯಲ್ಲಿ ಟ್ವೀಟ್ ಮಾಡಿರುವ ಟೀಮ್ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ, “ಪತ್ನಿಯ ಹೆಸರಿಗೆ ಮಸಿ ಬಳಿಯುವ ಯತ್ನವಿದು. ದೈನಿಕ್ ಭಾಸ್ಕರ್‍‌ನ ಈ ಸಂದರ್ಶನವು ಪೂರ್ವಯೋಜಿತವಾದುದು. ಇದನ್ನು ನಿರ್ಲಕ್ಷ್ಯಿಸಿ” ಎಂದು ಬರೆದುಕೊಂಡಿದ್ದಾರೆ.

“ದೈನಿಕ್ ಭಾಸ್ಕರ್ ಸಂದರ್ಶನದಲ್ಲಿ ಹೇಳಿರುವ ಎಲ್ಲಾ ವಿಷಯಗಳು ಅಸಂಬದ್ಧ, ಇದು ಸಂಪೂರ್ಣವಾಗಿ ಅರ್ಥಹೀನ ಮತ್ತು ಅಸತ್ಯ. ಇದು ನಿಜವಾಗಿಯೂ ಖಂಡನೀಯ. ನನ್ನ ಹೆಂಡತಿಯ ಹೆಸರನ್ನು ಹಾಳುಮಾಡುವ ಪ್ರಯತ್ನ ಇದು. ನನಗೂ ಹೇಳಲು ಬಹಳಷ್ಟು ವಿಷಯಗಳಿವೆ. ಆದರೆ ಅದನ್ನು ಸಾರ್ವಜನಿಕವಾಗಿ ಹೇಳುವುದಿಲ್ಲ” ಎಂದು ಜಡೇಜಾ ಬರೆದಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸರ್ಕಾರಿ ಶಾಲೆ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆ ಸಿಕ್ಕರೆ ಅತ್ಯುನ್ನತ ಸಾಧನೆ, ಸಾಮರ್ಥ್ಯ ಅನಾವರಣ

"ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಯಾವುದರಲ್ಲಿಯೂ ಕಡಿಮೆ...

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

Download Eedina App Android / iOS

X