- ಕಾಂಗ್ರೆಸ್ ಸರ್ಕಾರ ರಾಜ್ಯದ ವಿದ್ಯಾರ್ಥಿಗಳ ಪಾಲಿಗೆ ಮರಣಶಾಸನವಾಗಿದೆ
- ಆರು ತಿಂಗಳಿಗೆ ಇಷ್ಟೆಲ್ಲಾ ಆದರೆ, ಒಂದು ವರ್ಷಕ್ಕೆ ಪರಿಸ್ಥಿತಿ ಹೇಗಿರಬೇಡ?
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಪೂರೈಸಿದ್ದು, ತನ್ನ ಸಾಧನೆಗಳನ್ನು ಸರ್ಕಾರ ಒಂದು ಕಡೆ ಪಟ್ಟಿ ಮಾಡುತ್ತಿದ್ದರೆ, ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಕೂಡ ಸರ್ಕಾರದ ಸಾಧನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಟೀಕಿಸಿದೆ.
ಮೈಕ್ರೋ ಬ್ಲಾಗಿಂಗ್ ಎಕ್ಸ್ನಲ್ಲಿ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ, “ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಕೇವಲ ಆರೇ ತಿಂಗಳಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಬರಗಾಲ ನಿರ್ವಹಣೆ ವೈಫಲ್ಯ, ಕಲುಷಿತ ನೀರಿನಿಂದ ಅಪಾರ ಸಾವು-ನೋವು, ರೈತರ ಸರಣಿ ಆತ್ಮಹತ್ಯೆ” ಎಂದು ಕುಟುಕಿದೆ.
ಸರ್ಕಾರ ಮಾಡಿದ ಸಾಧನೆಗಳ ಪಟ್ಟಿ
▪️ಶ್ಯಾಡೋ ಸಿಎಂ ಪ್ರಭಾವ
▪️ವರ್ಗಾವಣೆ ದಂಧೆ
▪️ಗುತ್ತಿಗೆದಾರರಿಂದ ಕಲೆಕ್ಷನ್
▪️₹100 ಕೋಟಿ ಅಕ್ರಮ ಹಣ ಮಂಚದಡಿ ಪತ್ತೆ
▪️ಹಿಂದೂಗಳ ಮೇಲೆ ಹಲ್ಲೆ -ಹತ್ಯೆ
▪️ಪಂಚ ರಾಜ್ಯ ಚುನಾವಣೆಗೆ ಹಣ ಸಾಗಾಟ
▪️ಕಾಸಿಗಾಗಿ ಪೋಸ್ಟಿಂಗ್
▪️ಅಕ್ರಮ ನೇಮಕಾತಿ ಪರೀಕ್ಷೆ
▪️ಶಾಸಕರಿಗಿಲ್ಲ ಅನುದಾನ
▪️ಕುರ್ಚಿಗಾಗಿ ಕಾದಾಟ
▪️ಸಿಎಂ ಡಿನ್ನರ್, ಬ್ರೇಕ್ಫಾಸ್ಟ್ ಪಾರ್ಟಿ
▪️ಕಳ್ಳತನದಿಂದ ಕಾವೇರಿ ಪೂರೈಕೆ
▪️ಕಲೆಕ್ಷನ್ ಏಜೆಂಟ್ ಸುರ್ಜೇವಾಲ ಅಧಿಕಾರ
“ಆರು ತಿಂಗಳಿಗೆ ಇಷ್ಟೆಲ್ಲಾ ಹಳವಂಡಗಳಾದರೆ, ಒಂದು ವರ್ಷಕ್ಕೆ ಕರ್ನಾಟಕದ ಪರಿಸ್ಥಿತಿ ಹೇಗಿರಬೇಡ ಯೋಚಿಸಿ!” ಎಂದು ಹೇಳಿದೆ.
ವಿದ್ಯಾರ್ಥಿಗಳ ಪಾಲಿಗೆ ಮರಣಶಾಸನ
ರಾಜ್ಯದ ಕಾಂಗ್ರೆಸ್ ಸರ್ಕಾರ ರಾಜ್ಯದ ವಿದ್ಯಾರ್ಥಿಗಳ ಪಾಲಿಗೆ ಮರಣಶಾಸನವಾಗಿದೆ. ಅರ್ಧ ಶೈಕ್ಷಣಿಕ ವರ್ಷ ಮುಗಿದರೂ, ಪಠ್ಯಪುಸ್ತಕ, ಶೂ, ಸಮವಸ್ತ್ರ ವಿತರಿಸಿಲ್ಲ, ಈಗ ಮಕ್ಕಳ ಶೈಕ್ಷಣಿಕ ಪ್ರವಾಸವನ್ನೂ ಸಹ ಮೊಟಕುಗೊಳಿಸಿದೆ ಎಂದು ವಾಗ್ದಾಳಿ ನಡೆಸಿದೆ.
“ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ, ಎನ್ಇಪಿ ಬದಲು ಎಸ್ಇಪಿ ಅಳವಡಿಸಿಕೊಳ್ಳುತ್ತೆವೆಂಬ ವಿತಂಡವಾದವನ್ನು ದೂರವಿಟ್ಟು, ಮೊದಲು ಇತ್ತ ಕಡೆ ಗಮನಹರಿಸಿ” ಎಂದು ಛೇಡಿಸಿದೆ.