ಒಂದೇ ದಿನ 5 ಕೋಟಿ ದಾಟಿದ ಮೆಟಾದ ‘ಥ್ರೆಡ್ಸ್’ ಬಳಕೆದಾರರು | ಟ್ವಿಟರ್‌ನಿಂದ ಬೆದರಿಕೆ

Date:

Advertisements
  • ಜುಲೈ 6ರಂದು ಮೆಟಾದಿಂದ ಥ್ರೆಡ್ಸ್‌ ಅಪ್ಲಿಕೇಶನ್‌ ಬಿಡುಗಡೆ
  • ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ಗೆ ಟ್ವಿಟರ್‌ ಬೆದರಿಕೆ ಪತ್ರ

ಮೆಟಾ ಸಂಸ್ಥೆಯ ಥ್ರೆಡ್ಸ್ ಅಪ್ಲಿಕೇಶನ್‌ ಟ್ವಿಟರ್‌ ಸಂಸ್ಥೆಯ ಪ್ರತಿಸ್ಪರ್ಧಿ ಎಂತಲೇ ಬಿಂಬಿತವಾಗಿದ್ದು ಬಿಡುಗಡೆಯಾದ 24 ಗಂಟೆಗಳಲ್ಲಿ 5 ಕೋಟಿ ಬಳಕೆದಾರರನ್ನು ದಾಟಿದೆ. ಆದರೆ ಈ ಅಪ್ಲಿಕೇಶನ್‌ ಈಗ ಟ್ವಿಟರ್‌ನಿಂದ ಕಾನೂನು ಬೆದರಿಕೆ ಎದುರಿಸುವಂತಾಗಿದೆ.

ಗುರುವಾರ ಈ ಮೆಟಾದ ಥ್ರೆಡ್ಸ್‌ ಅಪ್ಲಿಕೇಶನ್‌ ಬಿಡುಗಡೆಯಾಗಿತ್ತು. ಇದು ತನ್ನ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಟ್ವಿಟರ್‌ ಮೊಕದ್ದಮೆ ಹೂಡುವ ಬೆದರಿಕೆ ಹಾಕಿದೆ.

ಥ್ರೆಡ್ಸ್‌ ಒಡೆತನ ಹೊಂದಿರುವ ಮೆಟಾದ ಸಿಇಒ ಮಾರ್ಕ್‌ ಜುಕರ್‌ಬರ್ಗ್ ಅವರು ಕಾನೂನುಬಾಹಿರವಾಗಿ ಟ್ವಿಟರ್‌ನ ವ್ಯಾಪಾರಿ ರಹಸ್ಯಗಳು ಮತ್ತು ಇತರ ಬೌದ್ಧಿಕ ಆಸ್ತಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಎಲಾನ್‌ ಮಸ್ಕ್‌ ಅವರ ವಕೀಲ ಅಲೆಕ್ಸ್‌ ಸುಪಿರೊ ಅವರು ಜುಕರ್‌ಬರ್ಗ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಸುದ್ದಿ ಪತ್ರಿಕೆ ಸಮಾಫೋರ್‌ ವರದಿ ಮಾಡಿದೆ.

Advertisements

“ಮೆಟಾ ಸಂಸ್ಥೆಯು ಅಪ್ಲಿಕೇಶನ್‌ನಲ್ಲಿ ಟ್ವಿಟರ್‌ನ ವ್ಯಾಪಾರಿ ರಹಸ್ಯಗಳು ಮತ್ತು ಇತರ ಗೋಪ್ಯ ಮಾಹಿತಿಗಳು ತಿಳಿದಿರುವ ಮಾಜಿ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ” ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

“ಥ್ರೆಡ್ಸ್‌ ಅಪ್ಲಿಕೇಶನ್‌ನಲ್ಲಿ ಟ್ವಿಟರ್‌ ವ್ಯಾಪಾರಿ ತಂತ್ರಗಳನ್ನು ಬಳಸುವುದನ್ನು ಮೆಟಾ ಸಂಸ್ಥೆ ಈ ಕೂಡಲೇ ನಿಲ್ಲಿಸಬೇಕು” ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಮೇಕೆದಾಟು ಯೋಜನೆಗೆ ಕರ್ನಾಟಕಕ್ಕೆ ಅವಕಾಶ ನೀಡುವುದಿಲ್ಲ: ತಮಿಳುನಾಡು ಸಚಿವ

ಮೆಟಾದ ಅಪ್ಲಿಕೇಶನ್‌ಗೆ ಸಂಬಂಧಿಸಿ ಎಲಾನ್‌ ಮಸ್ಕ್‌ ಪ್ರತಿಕ್ರಿಯಿಸಿದ್ದು, “ಸ್ಪರ್ಧೆ ಒಳ್ಳೆಯದು ಆದರೆ ಮೋಸ ಸಲ್ಲ” ಎಂದು ಹೇಳಿದ್ದಾರೆ.

“ಥ್ರೆಡ್ಸ್‌ ಅಪ್ಲಿಕೇಶನ್‌ ನಿರ್ವಹಿಸುವ ಎಂಜಿನಿಯರಿಂಗ್‌ ತಂಡದಲ್ಲಿ ಯಾರೊಬ್ಬರೂ ಟ್ವಿಟರ್‌ ಮಾಜಿ ಉದ್ಯೋಗಿಯಿಲ್ಲ” ಎಂದು ಟ್ವಿಟರ್‌ ಆರೋಪಕ್ಕೆ ಮೆಟಾ ವಕ್ತಾರ ಆಂಡಿ ಸ್ಟೋನ್ ಪ್ರತಿಕ್ರಿಯಿಸಿದ್ದಾರೆ.

ಥ್ರೆಡ್ಸ್‌ ಅಪ್ಲಿಕೇಶನ್‌ನಲ್ಲಿ ಟ್ವಿಟರ್‌ನಲ್ಲಿ ಇರುವಂತೆ ಸಂದೇಶ ಬರೆದು ಲಿಂಕ್‌ ಜೊತೆಗೆ ಹಂಚಿಕೊಳ್ಳಬಹುದು. ಅಲ್ಲದೆ ಇತರರ ಸಂದೇಶಗಳಿಗೆ ಇದರಲ್ಲಿ ಪ್ರತಿಕ್ರಿಯೆಗಳನ್ನು ನೀಡಬಹುದು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X