ರೋಡ್ನಿಂದ ಪಕ್ಕಕ್ಕೆ ಹೋಗು ಎಂದ ಬೆಂಗಳೂರು ಸಂಚಾರ ಪೊಲೀಸ್ ಕಾನ್ಸ್ಟೆಬಲ್ ಗೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜು ಬಂಧಿತ ಆರೋಪಿ. ನಗರದ ಕೆ.ಎಸ್.ಲೇಔಟ್ ಸಂಚಾರ ಠಾಣೆ ಕಾನ್ಸ್ಟೆಬಲ್ ಕರಿಬಸವಯ್ಯ ಅವರು ಉತ್ತರಹಳ್ಳಿ ಬಳಿಯ ಹರೇಹಳ್ಳಿ ಸಮೀಪ ಡಿಸೆಂಬರ್ 23ರಂದು ಎಂದಿನಂತೆ ಟ್ರಾಫಿಕ್ ನಿರ್ವಹಣೆ ಕೆಲಸ ಮಾಡುತ್ತಿದ್ದರು. ಈ ವೇಳೆ, ಬಂಧಿತ ಆರೋಪಿ ರಾಜುಗೆ ಕಾನ್ಸ್ಟೆಬಲ್ ರೋಡ್ನಿಂದ ಪಕ್ಕಕ್ಕೆ ತೆರಳುವಂತೆ ಹೇಳಿದ್ದರು.
ಇದಕ್ಕೆ ಕೋಪಗೊಂಡ ರಾಜು ಕಾನ್ಸ್ಟೆಬಲ್ ಕರಿಬಸಯ್ಯ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಬಳಿಕ ರಾಜು ಕಾನ್ಸ್ಟೆಬಲ್ ಕರಿಬಸಯ್ಯ ಅವರಿಗೆ ಹಲ್ಲೆ ಮಾಡಿದ್ದಾರೆ. ಈ ವೇಳೆ, ಇಬ್ಬರು ಕೈ ಕೈ ಮಿಲಾಯಿಸಿದ್ದಾರೆ. ಬಳಿಕ, ಆರೋಪಿ ಪರಾರಿಯಾಗುವುದನ್ನು ಗಮನಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಳೆ ವೈಷಮ್ಯ: ಸಚಿವರ ಮನೆ ಸಮೀಪ ರೌಡಿಶೀಟರ್ ಬರ್ಬರ ಹತ್ಯೆ
ಸದ್ಯ ಆರೋಪಿ ವಿರುದ್ಧ ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.