ಕರ್ನಾಟಕ ವಿದಾನಸಭೆ ಚುನಾವಣೆ 2023ರ ಫಲಿತಾಂಶ ಆರಂಭಗೊಂಡಿದ್ದು, ರಾಜ್ಯದ 9 ಮುಖ್ಯಮಂತ್ರಿ ಪುತ್ರರು ಕಣದಲ್ಲಿರುವುದು ವಿಶೇಷ.
- ಹಾಲಿ ಸಿಎಂ ಬಸವರಾಜ ಬೊಮ್ಮಾಯಿ – ಶಿಗ್ಗಾಂವಿ ಕ್ಷೇತ್ರ – ಬಿಜೆಪಿ (ಹಾವೇರಿ ಜಿಲ್ಲೆ); ಇವರ ತಂದೆ ಎಸ್ ಆರ್ ಬೊಮ್ಮಾಯಿ 1989ರಲ್ಲಿ ಜನತಾ ಪರಿವಾರದಿಂದ ಮುಖ್ಯಮಂತ್ರಿಯಾಗಿದ್ದರು
- ಮಾಜಿ ಶಾಸಕ ಮಧು ಬಂಗಾರಪ್ಪ – ಸೊರಬ ಕ್ಷೇತ್ರ- ಕಾಂಗ್ರೆಸ್ (ಶಿವಮೊಗ್ಗ ಜಿಲ್ಲೆ); ಇವರ ತಂದೆ ಎಸ್ ಬಂಗಾರಪ್ಪ 1990 -92 ರವರೆಗೆ ಕಾಂಗ್ರೆಸ್ನಿಂದ ಮುಖ್ಯಮಂತ್ರಿಯಾಗಿದ್ದರು
- ಶಾಸಕ ಕುಮಾರ್ ಬಂಗಾರಪ್ಪ – ಸೊರಬ ಕ್ಷೇತ್ರ – ಬಿಜೆಪಿ (ಶಿವಮೊಗ್ಗ ಜಿಲ್ಲೆ); ಇವರ ತಂದೆ ಎಸ್ ಬಂಗಾರಪ್ಪ 1990 -92 ರವರೆಗೆ ಕಾಂಗ್ರೆಸ್ನಿಂದ ಮುಖ್ಯಮಂತ್ರಿಯಾಗಿದ್ದರು
- ದಿನೇಶ್ ಗುಂಡೂರಾವ್ – ಗಾಂಧಿ ನಗರ ಕ್ಷೇತ್ರ – ಕಾಂಗ್ರೆಸ್ (ಬೆಂಗಳೂರು ಕೇಂದ್ರ); ಇವರ ತಂದೆ ಆರ್ ಗುಂಡೂರಾವ್ 1980 -83 ರವರೆಗೆ ಕಾಂಗ್ರೆಸ್ನಿಂದ ಮುಖ್ಯಮಂತ್ರಿಯಾಗಿದ್ದರು
- ಹೆಚ್ ಡಿ ಕುಮಾರಸ್ವಾಮಿ – ಚನ್ನಪಟ್ಟಣ ಕ್ಷೇತ್ರ – ಜೆಡಿಎಸ್ (ಬೆಂಗಳೂರು ಗ್ರಾಮಾಂತರ); ಇವರ ತಂದೆ ಹೆಚ್ ಡಿ ದೇವೇಗೌಡ 1994 -96 ರವರೆಗೆ ಜನತಾ ಪರಿವಾರದಿಂದ ಮುಖ್ಯಮಂತ್ರಿಯಾಗಿದ್ದರು
- ಅಜಯ್ ಧರಂ ಸಿಂಗ್ – ಜೇವರ್ಗಿ ಕ್ಷೇತ್ರ – ಕಾಂಗ್ರೆಸ್ (ಕಲಬುರಗಿ); ಇವರ ತಂದೆ ಧರಂ ಸಿಂಗ್ 2004 -06 ರವರೆಗೆ ಕಾಂಗ್ರೆಸ್ -ಜನತಾ ಪರಿವಾರದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು
- ಬಿ ವೈ ರಾಘವೇಂದ್ರ – ಶಿಕಾರಿಪುರ ಕ್ಷೇತ್ರ – ಬಿಜೆಪಿ (ಶಿವಮೊಗ್ಗ); ಇವರ ತಂದೆ ಬಿ ಎಸ್ ಯಡಿಯೂರಪ್ಪ 2008 -11 ರವರೆಗೆ ಮುಖ್ಯಮಂತ್ರಿಯಾಗಿದ್ದರು
- ಹೆಚ್ ಡಿ ರೇವಣ್ಣ – ಹೊಳೆನರಸೀಪುರ ಕ್ಷೇತ್ರ –ಜೆಡಿಎಸ್ (ಹಾಸನ); ಇವರ ತಂದೆ ಹೆಚ್ ಡಿ ದೇವೇಗೌಡ 1994 -96 ರವರೆಗೆ ಜನತಾ ಪರಿವಾರದಿಂದ ಮುಖ್ಯಮಂತ್ರಿಯಾಗಿದ್ದರು
- ನಿಖಿಲ್ ಕುಮಾರಸ್ವಾಮಿ – ರಾಮನಗರ ಕ್ಷೇತ್ರ – ಜೆಡಿಎಸ್ (ಬೆಂಗಳೂರು ಗ್ರಾಮಾಂತರ); ಇವರ ತಂದೆ ಹೆಚ್ ಡಿ ಕುಮಾರಸ್ವಾಮಿ 2006 ಹಾಗೂ 2018ರಲ್ಲಿ ಎರಡು ಬಾರಿ ಜೆಡಿಎಸ್ನಿಂದ ಮುಖ್ಯಮಂತ್ರಿಯಾಗಿದ್ದರು