ಚಿತ್ರದುರ್ಗ | ಮನರೇಗಾ ಯೋಜನೆಯಡಿ ಕೆಲಸಕ್ಕಾಗಿ ಆಗ್ರಹ

Date:

Advertisements

ಬರಗಾಲದಲ್ಲಿ ನೆಪ ಹೇಳುವುದು ಬಿಟ್ಟು ಕೆಲಸ ಮಾಡಲು ಹೇಳುವಲ್ಲಿ ತಾಲೂಕು ಪಂಚಾಯತಿ ಮನರೇಗಾ ವಿಭಾಗದವರು ವಿಫಲರಾಗಿದ್ದಾರೆ ಎಂದು ಗ್ರಾಕೂಸ್‌ (ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಚಿತ್ರದುರ್ಗಾ) ಸಂಘಟನೆಯ ಜಿಲ್ಲಾ ಸಂಚಾಲಕಿ ತೇಜೇಶ್ವರಿ ಆರೋಪಿಸಿದರು.

ಚಿತ್ರದುರ್ಗ ಗ್ರಾಮೀಣ ಕೂಲಿ ಕಾರ್ಮಿಕರು ಸಂಘಟನೆಯ ವತಿಯಿಂದ, ಮನರೇಗಾ ಯೋಜನೆಯಡಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಬಡವರಿಗೆ ಕೂಲಿ ಕೆಲಸ ನೀಡುವಲ್ಲಿ ವಿಫಲವಾಗಿರುವ ಗ್ರಾಮ ಪಂಚಾಯಿತಿ ಮತ್ತು ಇಲಾಖೆಗೆ ಕೆಲಸ ನೀಡಲು ಆದೇಶಿಸಲು ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾ ಅಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿದರು.

ಕಳೆದ 4 ತಿಂಗಳಿಂದ ದುಡಿಯುವ ಕೈಗಳಿಗೆ ಕೆಲಸ ಸಿಗದೇ ಕಾರ್ಮಿಕ ಕುಟುಂಬಗಳು ಗುಳೆ ಹೋಗಿದ್ದು, ನರೇಗಾ ಯೋಜನೆ ಇದ್ದು ಗ್ರಾಮೀಣ ಕಾರ್ಮಿಕರಿಗೆ ಮಾಹಿತಿಲ್ಲದೇ ಸರಿಯಾಗಿ ಅನುಷ್ಠಾನವಾಗದೆ ಮರೀಚಿಕೆ ಆಗಿದೆ.‌ 5 ತಿಂಗಳಿಂದಲೂ ಹಳ್ಳಿ ಹಳ್ಳಿಗೆ ಹೋಗಿ ಕಾರ್ಮಿಕರ ಗುಂಪುಗಳನ್ನು ಮಾಡಿ ಧೈರ್ಯ ತುಂಬಿ ಕೆಲಸ ಕೇಳಿದರೆ ಪಿಡಿಪಿಗಳೂ ನಿರ್ಲಕ್ಷ ಮಾಡಿ ಕೆಲಸ ಕೊಡುತ್ತಿಲ್ಲ ಜಾಬ್ ಕಾರ್ಡ್ ಮಾಡಿಕೊಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ ಎಂದರು.

Advertisements

ಕೆಲವು ಪಂಚಾಯತಿಗಳು ಮಾತ್ರ ಕಡಿಮೆ ಜನರಿಗೆ ಕೆಲಸ ಕೊಟ್ಟು ಕೈತೋಳೆದುಕೊಳ್ಳುತ್ತಿದ್ದೂ ಬೇಸರ ತಂದಿದೆ. ಕೆಲವು ತಾಂತ್ರಿಕ ಸಹಾಯಕರು ಕೆಲಸ ಮಾಡಿದ ಕಾರ್ಮಿಕರಿಗೆ ಕಡಿಮೆ ಕೂಲಿ ಹಾಕುವುದು, ಕೆಲಸ ಮಾಡಲು ಸಾಧ್ಯವಿಲ್ಲದ ಸ್ಥಳದಲ್ಲಿ ಕೆಲಸ ಕೊಟ್ಟು ಸಮಸ್ಯೆ ಮಾಡುತ್ತಿದ್ದಾರೆ. ಒಟ್ಟಾರೆ ನರೇಗಾ ಯೋಜನೆ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ ಎಂದರು.

ಕೊಳಾಳು, ಯಳಗೋಡು, ಚಿಕ್ಕಗೊಂಡನಹಳ್ಳಿ, ಗುಡ್ಡದರಂಗವ್ವನಹಳ್ಳಿ, ಐನಹಳ್ಳಿ-ಕುರುಬರಹಳ್ಳಿ ಹಾಗೂ ಇತರ ಗ್ರಾಮ ಪಂಚಾಯಿತಿಗಳಲ್ಲಿ ಕೆಲವು ಕಡೆ ಕೆಲಸ ಕೊಟ್ಟಿಲ್ಲ, ಕೆಲವೆಡೆ ನಮೂನೆ-6 ಕೊಟ್ಟರೂ ಕೆಲಸ ನೀಡಿಲ್ಲ, ಇದರಿಂದ ದುಡಿದು ತಿನ್ನುವ ಕೂಲಿ ಕಾರ್ಮಿಕರ ಜೀವನ ನಿರ್ವಹಣೆ ಕಷ್ಟವಾಗಿದೆ. ಇದನ್ನು ನಿವಾರಿಸಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ನರೇಗದಡಿ ಕೆಲಸ ನೀಡಲು ಮನವಿ ಎಂದು ಮನವಿ ಮಾಡಿದರು.

ಶೀಘ್ರ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ಸೋಮವಾರ ನೂರಾರು ಮನರೇಗಾ ಕಾರ್ಮಿಕರು ತಾಲೂಕು ಪಂಚಾಯತ್ ಮುಂದೆ ಅನಿರ್ದಿಷ್ಟ ಹೋರಾಟ ಮಾಡಲಿದ್ದಾರೆ ಎಂದು ಎಚ್ಚರಿಸಿದರು.

ಈ ವೇಳೆ ಗ್ರಾಕೂಸ ಸಂಘಟನೆಯ ರಾಮಪ್ಪ, ನಾಗರತ್ನಮ್ಮ, ರೇಖಾ, ಶಾಮರಾಜು, ಮಲ್ಲೇಶ್ ಇತರ ಕಾರ್ಮಿಕರು ಹಾಜರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮನೋರೋಗಿ ಸಹಜ ಸ್ಥಿತಿಯತ್ತ, ಹನ್ನೆರಡು ವರ್ಷಗಳ ಬಳಿಕ ಕುಟುಂಬದ ಜೊತೆ ಸೇರಿದ ಯುವಕ

ಕಳೆದ ಕೆಲವು ದಿನಗಳ ಹಿಂದೆ ಉಡುಪಿಯ ಮಿತ್ರ ಆಸ್ಪತ್ರೆ ಬಳಿ ಸಾರ್ವಜನಿಕರ...

ತುಮಕೂರು | 500 ಕೋಟಿ ಉಚಿತ ಪ್ರಯಾಣ : ಡಿ. ದೇವರಾಜ ಅರಸು ಬಸ್ ನಿಲ್ದಾಣದಲ್ಲಿ ಸಂಭ್ರಮೋತ್ಸವ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿಗಳ ಪೈಕಿ ಅತಿ ಹೆಚ್ಚು ಜನಪ್ರಿಯ...

ಮಂಗಳೂರು | ಕಟ್ಟಡ ನಿರ್ಮಾಣಕ್ಕೆ ಪೂರಕವಾಗಿ ಕರಾವಳಿ ಮರಳು ನೀತಿ ಜಾರಿಗೆ ಬರಲಿ: ವಸಂತ ಆಚಾರಿ

ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕಳೆದ ಒಂದು ತಿಂಗಳಿಂದ ಕೆಂಪು ಕಲ್ಲು ಮತ್ತು...

ಕೊರಟಗೆರೆ | ಮಹಿಳಾ ಸಬಲೀಕರಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ : ತಹಶೀಲ್ದಾರ್ ಮಂಜುನಾಥ್

 ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ತುಮಕೂರು ಜಿಲ್ಲೆಯಲ್ಲಿ 15ಕೋಟಿ ಮತ್ತು ಕೊರಟಗೆರೆ...

Download Eedina App Android / iOS

X