ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದಲ್ಲಿ ಬುಧವಾರ (ಫೆಬ್ರವರಿ 7) ಎಸ್ಆರ್ಎಸ್ ಹೆರಿಟೇಜ್ ಶಾಲೆಯ ಪುಟಾಣಿಗಳು ‘ವಾರದ ಸಂತೆ ನಮ್ಮ ಜೊತೆ’ ಎನ್ನುವ ವಿಶೇಷ ತರಕಾರಿ ಸಂತೆ ನಡೆಸಿದರು.
ನಗರಸಭೆ ಪೌರಾಯುಕ್ತೆ ಎಂ ರೇಣುಕಾ ತರಕಾರಿ ಖರೀದಿಸುವ ಮೂಲಕ ಸಂತೆಗೆ ಚಾಲನೆ ನೀಡಿದರು. ಶಾಲೆಯ 5ನೇ ತರಗತಿಯ 150 ಮಂದಿ ವಿದ್ಯಾರ್ಥಿಗಳು ಹಿರಿಯರು ನಾಚುವಂತೆ ಸಂತೆ ನಡೆಸಿದರು.
ಮಾತ್ರವಲ್ಲದೆ, ಈರುಳ್ಳಿ, ಬೆಳ್ಳುಳ್ಳಿ, ನುಗ್ಗೆಕಾಯಿ, ಹೀರೆಕಾಯಿ, ಬದನೆಕಾಯಿ, ಬೆಂಡೆಕಾಯಿ, ಕ್ಯಾರೆಟ್, ಬೀನ್ಸ್, ಆಲೂಗಡ್ಡೆ, ಸೌತೆಕಾಯಿ, ಎಲೆಕೋಸು, ಮೂಲಂಗಿ, ಬಟಾಣಿ, ಜವಳಿಕಾಯಿ, ಮೆಣಸಿನಕಾಯಿ, ಸೊಪ್ಪು- ಮೆಂತ್ಯ, ಪುದೀನ, ಕೊತ್ತುಂಬರಿ, ಸಬ್ಸಿಗೆ, ಅರಿವೆ, ಕರಿಬೇವು, ಪಾಲಕ್, ನಿಂಬೆಹಣ್ಣು ಹೀಗೆ ಬಗೆ ಬಗೆಯ ಮತ್ತು ತಾಜಾ ತರಕಾರಿಗಳನ್ನು ಮಾರಾಟ ಮಾಡಿದರು.
ಈ ಮೇಳದಲ್ಲಿ ಪೋಷಕರು ಶಿಕ್ಷಕರು, ಸಾರ್ವಜನಿಕರು, ಗ್ರಾಹಕರು ಉತ್ಸಾಹದಿಂದ ತಮಗಿಷ್ಟವಾದ ತರಕಾರಿಗಳನ್ನು ವಿದ್ಯಾರ್ಥಿಗಳೊಂದಿಗೆ ಚೌಕಾಸಿ ಮಾಡಿ ಖರೀದಿಸಿದರು.
ಈ ಸುದ್ದಿ ಓದಿದ್ದೀರಾ? ವಿಧಾನ ಪರಿಷತ್ ಉಪಚುನಾವಣೆ; ಮತದಾನ ಕೇಂದ್ರಗಳ ಅಂತಿಮ ಪಟ್ಟಿ ಪ್ರಕಟ
ಎಸ್ಆರ್ಎಸ್ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಬಿ ಎ ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ ಎಲ್ ಅಮೋಘ, ಸಂಸ್ಥೆ ಆಡಳಿತಾಧಿಕಾರಿ ಡಾ ಟಿ ಎಸ್ ರವಿ, ಶೈಕ್ಷಣಿಕ ಸಂಯೋಜಕ ಡಿ ಎಂ ಜಗದೀಶ್, ಸಹ ಪಠ್ಯೇತರ ವಿಭಾಗ ಸಂಯೋಜಕ ಸುನೀಲ್ ಭಟ್, ಪ್ರಾಂಶುಪಾಲ ಎಂ ಎಸ್ ಪ್ರಭಾಕರ್ ಇದ್ದರು.