ಮಕ್ಕಳ ಸಾಹಿತ್ಯ, ಹಾಸ್ಯ, ವಿಡಂಬನೆ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಕವಿ ಎಂ.ಡಿ ಗೋಗೇರಿ ಅವರು ಮುಸ್ಲಿಂ ದೇಹ – ಕನ್ನಡ ಮನಸ್ಸು ಹೊಂದಿದವರಾಗಿದ್ದರು ಎಂದು ಪ್ರಾಧ್ಯಾಪಕ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗೋಗೇರಿ ಗಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಸಾಪ ಆಯೋಜಿಸಿದ್ದ ಎಂ.ಡಿ ಗೋಗೇರಿ ಅವರ ಬದುಕು-ಬರಹ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಶಿಕ್ಷಣ ಕ್ಷೇತ್ರದಲ್ಲಿ ಹಗಲಿರುಳು ಕೆಲಸ ಮಾಡುತ್ತಾ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ ಗೋಗೇರಿ ಅವರು ಇಂದಿನ ಪೀಳಿಗೆಯವರಿಗೆ ಮಾದರಿಯಾಗಿದ್ದಾರೆ. ಕನ್ನಡ ಭಾಷಾ ಸಂಸ್ಕೃತಿಯ ಜೊತೆಗೆ ಸೌಹಾರ್ದ ಸಂಸ್ಕೃತಿಗೂ ಆದ್ಯತೆ ನೀಡಿದ್ದರು. ಇಂದಿಗೂ ಮಕ್ಕಳ ಸಾಹಿತ್ಯದ ರತ್ನತ್ರಯರ ಸಾಲಿನಲ್ಲಿ ಗೋಗೇರಿ ಅವರು ಇರುವುದು ಕನ್ನಡ ಸಾಹಿತ್ಯಕ್ಕೆ ಹೆಮ್ಮೆಯ ಗರಿ” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, “ಗದಗ ಜಿಲ್ಲೆಯ ಸಮನ್ವಯ ಕವಿ ಎಂ.ಡಿ ಗೋಗೇರಿ ಅವರ ಎಲ್ಲ ಕೃತಿಗಳನ್ನು ಮರು ಮುದ್ರಣ ಮಾಡಿ ಮಕ್ಕಳಿಗೆ ಓದುವ ಸದಾವಕಾಶ ಮಾಡಬೇಕು. ಅವರ ಕೃತಿಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಅವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಿ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಜಿಲ್ಲೆಯ ಸಾಹಿತಿಗಳನ್ನು ಗುರುತುಸಿ ಪ್ರಶಸ್ತಿ ನೀಡುವ ಕೆಲಸವಾಗಬೇಕು” ಎಂದರು.
ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಅಮರೇಶ ಗಾಣಗೇರ, ಕವಿ ರಂಜಾನ ಹೆಬಸೂರ, ಗ್ರಾಮದ ಹಿರಿಯರಾದ ಬಸವರಾಜ ಮೂಲಿಮನಿ, ಹೇಮಾಪತಿ ಭೋಸಲೆ, ಕೆ ಎಂ ಅಡವಿ ಕೆ ಎಸ್ ಕೋಡತಗೇರಿ
ಮಲ್ಲಿಕಾರ್ಜುನ ಗಾರಗಿ, ಶಿಕ್ಷಕ ಆರ್ ಕೆ ಬಾಗವಾನ ಇದ್ದರು. ಸಮಾರರಂಭದಲ್ಲಿ ಮುಖ್ಯೋಪಾಧ್ಯರಾದ ಕೆ ಎಸ್ ರಾಜೂರ, ಆರ್ ಆಯ್ ಬಾಗವಾನ, ಕ.ಸಾ.ಪ ಸದಸ್ಯರಾದ ಗಂಗಪ್ಪ ಗುಂಡೆ, ಎಂ ಡಿ ಬಾಗವಾನ, ಕೆ ಕೆ ಬಾಗವಾನ ಬಸವರಾಜ ಮಾದರ ವಜೀರ ನಧಾಪ್ ಇದ್ದರು. ಶಿಕ್ಷಕರಾದ ಪರಶು ಹೋರಪೇಟಿ ನಿರೂಪಿಸಿದು, ಬಿ ಎಸ್ ಬಳಿಗೇರ ವಂದಿಸಿದರು.