ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕ ದಂಡಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸವಣೂರು ಉಪ ವಿಭಾಗಾಧಿಕಾರಿ ಎ.ಸಿ ಮತ್ತು ತಾಲೂಕ ದಂಡಾಧಿಕಾರಿಗಳು ತಾಲೂಕಿನ ಹಲವಾರು ಸಮಸ್ಯೆಗಳ ಕುರಿತು ಸಭೆ ನಡೆಸಿದರು,
ಈವೇಳೆ ಬರಗಾಲ ಬಂದು ಆರು ತಿಂಗಳು ಕಳೆದರೂ ಸರ್ಕಾರದಿಂದ ಬರುವಂತಹ ಬರ ಪರಿಹಾರದ ಹಣ ರೈತರ ಖಾತೆಗೆ ಜಮೆ ಆಗದ ಹಣವನ್ನು ಜಮಾ ಮಾಡಬೇಕು. ಪ್ರತೀ ಇಲಾಖೆಯಲ್ಲಿ ಬರಗಾಲದ ಪರಿಹಾರದಿಂದ ಬರುವಂತ ಕಾಮಗಾರಿಗಳನ್ನು ಆರಂಭಿಸಬೇಕು. ಈ ಕುರಿತು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂಬ ಅನೇಕ ವಿಷಯಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸಭೆಯಲ್ಲಿ ಭಾಗಿಯಾಗಿದ್ದ ರೈತ ಮುಖಂಡರು, ಚರ್ಚೆಯಲ್ಲಿ ನಾವು ಬೇಡಿಕೆ ಇಟ್ಟ ವಿಷಯಗಳನ್ನು ವಾರದೊಳಗೆ ಪರಿಹಾರವಾಗದಿದ್ದರೆ, ದೆಹಲಿ ಮಾದರಿಯಲ್ಲಿ ಶಿಗ್ಗಾಂವ ತಾಲೂಕು ತಹಸೀಲ್ದಾರ, ದಂಡಾಧಿಕಾರಿ ಅವರ ಕಚೇರಿ ಮುಂದೆ ನೂರಾರು ಟ್ರ್ಯಾಕ್ಟರ್ಗಳೊಂದಿಗೆ ಕಚೇರಿಗೆ ಬೀಗಹಾಕಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಾಮೂಹಿಕ ನಾಯಕತ್ವದಡಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಮುತ್ತಣ್ಣ ಗುಡಿಗೇರಿ, ಉಪಾಧ್ಯಕ್ಷ ಮಹಾಂತೇಶ್ ಬಾರ್ಕೆರ್, ತಾಲೂಕ ಗೌರವಾಧ್ಯಕ್ಷ ಪಂಚಾಕ್ಷರಿ ಹಿರೇಮಠ, ಮುಖಂಡರಾದ ನಿಂಗನಗೌಡ ರಾಯನಗೌಡ, ಈರಪ್ಪ ಸುಣಗಾರ, ನಾಗಪ್ಪ ಕೊಟ್ಟನದ, ಶೇಖಪ್ಪ ಇನ್ನೂ ಹತ್ತಾರು ರೈತ ಮುಖಂಡರು ಈ ಸಭೆಯಲ್ಲಿ ಭಾಗಿಯಾಗಿದ್ದರು.