ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಅಭಿಪ್ರಾಯ ಪ್ರಕಟವಾಗುತ್ತದೆ. ಇಲ್ಲಿದೆ ಹಿರಿಯ ಲೇಖಕಿ, ಕವಿ ರೇಣುಕಾ ನಿಡಗುಂದಿ ಅವರ ಅಭಿಪ್ರಾಯ
ಮತ ಚಲಾವಣೆ ಎಷ್ಟು ಮುಖ್ಯ?
ಈ ನಾಡಿಗೆ ಎಂತಹ ನಾಯಕ ಬೇಕು, ಎಂಥವರನ್ನು ಆರಿಸಿದ್ದೇವೆ ಎನ್ನುವುದನ್ನು ನಮ್ಮ ಮತದಾನ ತೀರ್ಮಾನಿಸುತ್ತದಾದ್ದರಿಂದ ಪ್ರತಿಯೊಬ್ಬರೂ ಮತ ಚಲಾವಣೆ ಮಾಡಲೇಬೇಕು.
ಈ ಬಾರಿಯ ಚುನಾವಣೆ ಏಕೆ ಮುಖ್ಯ?
ದೇಶದಾದ್ಯಂತ ಭ್ರಷ್ಟಾಚಾರ, ಬೆಲೆ ಏರಿಕೆ, ಕೋಮುವಾದ ತಾಂಡವವಾಡುತ್ತಿದೆ. ನಿರುದ್ಯೋಗಿ ಯುವಕರ ಕೈಗೆ ಕತ್ತಿ, ತಲವಾರು, ಬಂದೂಕು ನೀಡಿ ಅವರನ್ನು ಅಂಧಭಕ್ತ ಅಪರಾಧಿಗಳನ್ನಾಗಿಸುತ್ತಿದ್ದಾರೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕರ್ನಾಟಕದ ಚುನಾವಣೆ ಒಂದು ನಿರ್ಣಾಯಕ ಪಾತ್ರವನ್ನು ವಹಿಸಬಹುದು.
ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ನಮ್ಮನ್ನು ಆರಿಸಿ ಕಳಿಸಿದ ಜನ ನಮ್ಮವರು, ಈ ನಾಡು ನನ್ನದು ಎಂಬ ಅಂತಃಕರಣವುಳ್ಳ. ಇದು ಸರ್ವಜನಾಂಗದ ಶಾಂತಿಯ ತೋಟ, ಬಹುತ್ವವೇ ನಮ್ಮ ಅಸ್ಮಿತೆ ಎಂದು ನಂಬುವವರು, ಅದರಂತೆ ನಡೆದುಕೊಳ್ಳುವವರು ನಮ್ಮ ಜನಪ್ರತಿನಿಧಿಯಾಗಿರಬೇಕು.