ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರದ ಪ್ರಮುಖ ವ್ಯಕ್ತಿಗಳ ಅಭಿಪ್ರಾಯ ಪ್ರಕಟವಾಗಲಿದೆ. ಇಲ್ಲಿದೆ ಹಿರಿಯ ಸಾಹಿತಿ, ಸಾಮಾಜಿಕ ಚಿಂತಕಿ ಕೆ ಷರೀಫಾ ಅವರ ಅಭಿಪ್ರಾಯ
ಮತ ಚಲಾವಣೆ ಎಷ್ಟು ಮುಖ್ಯ?
ಸಂವಿಧಾನದ ಉಳಿವಿಗೆ, ಪ್ರಜಾಸತ್ತೆಯ ರಕ್ಷಣೆಗೆ ನಮ್ಮ ಪವಿತ್ರ ಮತದಾನದ ಹಕ್ಕುನ್ನು ತಪ್ಪದೇ ಚಲಾಯಿಸೋಣ.
ಈ ಬಾರಿಯ ಚುನಾವಣೆ ಯಾಕೆ ಮುಖ್ಯ?
ಕೋಮುವಾದಿಗಳನ್ನು ಸೋಲಿಸಲೇ ಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಭಯಂಕರ ಕಷ್ಟಕರ ದಿನಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಬಾರಿಯ ಚುನಾವಣೆ ಬಹಳ ಮುಖ್ಯ
ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ನಿರುದ್ಯೋಗ ನಿವಾರಣೆ, ಲಿಂಗ ಸಮಾನತೆ, ಸಾಮಾಜಿಕ ನ್ಯಾಯಕ್ಕೆ ಪೂರಕ ಕಾರ್ಯಕ್ರಮಗಳನ್ನು ರೂಪಿಸುವ ಬದ್ಧತೆಯ ಸರ್ಕಾರ ಬರಬೇಕು