ಲೋಕಸಭಾ ಚುನಾವಣೇ ಕೆಲವೇ ದಿನಗಳು ಇರುವ ಮುನ್ನವೇ ಆದಾಯ ತೆರಿಗೆ ಇಲಾಖೆಯು 1800 ಕೋಟಿ ರೂ. ಪಾವತಿಸುವ ಡಿಮ್ಯಾಂಡ್ ನೋಟಿಸ್ಅನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದೆ.
ನೂತನ ಡಿಮ್ಯಾಂಡ್ ನೋಟಿಸ್ನಲ್ಲಿ 2017-18 ರಿಂದ 2020-21ರವರೆಗಿನ ಮೌಲ್ಯಮಾಪನ ವರ್ಷಗಳಲ್ಲಿ ದಂಡ ಹಾಗೂ ಬಡ್ಡಿ ಒಳಗೊಂಡ ಹಣ ಒಳಗೊಂಡಿದೆ.
ಈ ನಡುವೆ ಆದಾಯ ತೆರಿಗೆ ಇಲಾಖೆಯ ಮರು ಮೌಲ್ಯಮಾಪನ ಅರ್ಜಿಯ ವಿರುದ್ಧ ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ಮಾ.28(ನಿನ್ನೆ) ರಂದು ವಜಾಗೊಂಡಿತ್ತು.
ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಹಾಗೂ ಪುರುಶೈಂದ್ರ ಕುಮಾರ್ ಕೌರವ್ ಅವರಿದ್ದ ಪೀಠ ಐಟಿ ಇಲಾಖೆ ಮತ್ತೊಂದು ಅವಧಿಗೆ ಮೌಲ್ಯಮಾಪನಗೊಳಿರುವ ಆದೇಶದ ವಿರುದ್ಧ ಮಧ್ಯಪ್ರವೇಶಿಸಲು ನಿರಾಕರಿಸಿ ಕಾಂಗ್ರೆಸ್ ಅರ್ಜಿಯನ್ನು ವಜಾಗೊಳಿಸಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪೌರತ್ವ ಪ್ರಮಾಣಪತ್ರ ಪೂಜಾರಿ ಕೊಡುವುದಾದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿದೆಯೇ?
ಸಾಮಾನ್ಯವಾಗಿ ಡಿಮ್ಯಾಂಡ್ ನೋಟಿಸ್ಅನ್ನು ಸಾಲ ಮರುಪಾವತಿ ಮಾಡದ ಅರ್ಜಿದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುತ್ತದೆ. ಪ್ರಕರಣವು 2017ರಿಂದ 2021ರವರೆಗೆ ಒಳಗೊಂಡಿದೆ. 2014-15 ರಿಂದ 2016-17ರವರೆಗಿನ ಮರುಮೌಲ್ಯಮಾಪನಗೊಳಿಸಿರುವುದರ ವಿರುದ್ಧ ಕಾಂಗ್ರೆಸ್ನಿಂದ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಈ ಹಿಂದೆ ವಜಾಗೊಳಿಸಿತ್ತು.
ಇನ್ನು ಐಟಿ ಇಲಾಖೆ ನೀಡಿರುವ ನೋಟಿಸ್ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷವು ಐಟಿ ಕ್ರಮವನ್ನು ಅಪ್ರಜಾಸತ್ತಾತ್ಮಕ ಮತ್ತು ಅಸಮಂಜಸ ಎಂದು ಕರೆದಿದ್ದು, ಕಾನೂನು ಹೋರಾಟ ಮುಂದುವರೆಸುವುದಾಗಿ ತಿಳಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಇದು ಐ-ಟಿ ಪ್ರಕರಣಗಳ 2 ನೇ ಮಹತ್ವದ ಪ್ರಕರಣವಾಗಿದೆ