ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಜರ್ಗ್ರಾಮ್ ಕುನಾರ್ ಹೆಬ್ರಾಮ್ ಇಂದು ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ರಾಮ್ ಅವರು, ತಾವು ವೈಯಕ್ತಿಕ ಕಾರಣಗಳಿಂದ ರಾಜನಾಮೆ ನೀಡಿರುವುದಾಗಿ ತಿಳಿಸಿದರು.
ರಾಜ್ಯ ಬಿಜೆಪಿ ವಕ್ತಾರ ಸಮಿಕ್ ಬಟ್ಟಾಚಾರ್ಯ ಮಾತನಾಡಿ, “ಹೆಬ್ರಾಮ್ ಅವರು ಕೆಲವು ದಿನಗಳ ಹಿಂದೆ ತಮ್ಮ ನಿರ್ಧಾರದ ಬಗ್ಗೆ ಪಕ್ಷಕ್ಕೆ ತಿಳಿಸಿದ್ದರು ಎಂದು ಹೇಳಿದ್ದಾರೆ.
ಜರ್ಗ್ರಾಮ್ ಕುನಾರ್ ಹೆಬ್ರಾಮ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ವಕ್ತಾರ ಸಮಿಕ್ ಬಟ್ಟಾಚಾರ್ಯ, ಸೋಲಿನ ಸುಳಿವು ಕಾಣುತ್ತಿದ್ದು, ಇವರಿಗೆ ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತೇನೆಂದು ತಿಳಿದಿದೆ. ಈ ಕಾರಣದಿಂದ ಪಕ್ಷವನ್ನು ತ್ಯಜಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರದ್ದಾದ ಖಾತೆಗಳಿಗೆ ತಡೆ ನೀಡುವ ಕಾಂಗ್ರೆಸ್ ಮನವಿ ನಿರಾಕರಿಸಿದ ಐಟಿ ಮೇಲ್ಮನವಿ ನ್ಯಾಯಮಂಡಳಿ