ರಾಜಸ್ಥಾನದ ಜೈಪುರ ವಿದ್ಯುತ್ ವಿತ್ರನ್ ನಿಗಮ ನಿಯಮಿತ ಕಂಪನಿಯಿಂದ ಹೆಚ್ಚುವರಿ 1300 ಕೋಟಿ ರೂ. ವಿಳಂಬ ಶುಲ್ಕ ಕೇಳಿದ್ದ ಅದಾನಿ ವಿದ್ಯುತ್ ರಾಜಸ್ಥಾನ ಸಂಸ್ಥೆಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಇತರ ಅರ್ಜಿಗಳ ವಿಚಾರಣೆ ನಡೆಸಿದ ಅನಿರುದ್ಧ ಬೋಸ್ ಮತ್ತು ಪಿ ವಿ ಸಂಜಯ್ ಕುಮಾರ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ವಿಳಂಬ ಹೆಚ್ಚುವರಿ ಶುಲ್ಕ ವಿಧಿಸುವುದಕ್ಕೆ ಅದಾನಿ ಸಂಸ್ಥೆಯು ಸರಿಯಾದ ಕಾನೂನು ನೆರವನ್ನು ಪಡೆದುಕೊಂಡಿಲ್ಲ ಎಂದು ಹೆಚ್ಚುವರಿ ಶುಲ್ಕದ ಅರ್ಜಿಯನ್ನು ವಜಾಗೊಳಿಸಿತು.
“ಈ ರೀತಿಯ ಪರಿಹಾರವನ್ನು ಇತರ ಅರ್ಜಿಯಲ್ಲಿ ಕೇಳುವಂತಿಲ್ಲ. ಇದನ್ನು ವಿಚಾರಣೆಯ ಸಂದರ್ಭದಲ್ಲಿ ಸ್ಪಷ್ಟೀಕರಣದ ಅರ್ಜಿ ಎಂದು ವಿವರಿಸಲಾಗಿದೆ” ಎಂದು ಪೀಠ ಹೇಳಿತು.
ಸುಪ್ರೀಂ ಕೋರ್ಟ್ನ ಕಾನೂನು ನೆರವು ಸಮಿತಿಗೆ ಅದಾನಿ ವಿದ್ಯುತ್ ರಾಜಸ್ಥಾನ ಲಿಮಿಟೆಡ್ಗೆ ವಿಧಿಸಲಾಗಿರುವ 50 ಸಾವಿರ ರೂ ಮೊತ್ತವನ್ನು ಠೇವಣಿಯಿಡಬೇಕು ಎಂದು ತೀರ್ಪಿನ ಉಳಿದ ಭಾಗವನ್ನು ಓದುವಾಗ ಪೀಠ ತಿಳಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೇಳುವುದು ಹಬ್ಬ, ಮಾಡುವುದು ಯುದ್ಧ, ಸಾಯುವುದು ಸೈನಿಕರು
ಜನವರಿ 24ರಂದು ವಾದಿ ಪ್ರತಿವಾದಿಗಳ ವಾದವನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.
ಜೈಪುರದ ವಿದ್ಯುತ್ ನಿಗಮದ ಪರವಾಗಿ ಹಾಜರಾಗಿದ್ದ ದುಷ್ಯಂತ್ ದಾವೆ ಅದಾನಿ ಸಂಸ್ಥೆ ಕೇಳಿದ್ದ ಹೆಚ್ಚುವರಿ ವಿಳಂಬ ಶುಲ್ಕ 1300 ಕೋಟಿ ರೂ. ಹಣವನ್ನು ಸ್ಪಷ್ಟವಾಗಿ ವಿರೋಧಿಸಿದರು.
ಅದಾನಿ ಕಂಪನಿಯ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಸಿಂಘ್ವಿ ಹಾಜರಾಗಿದ್ದರು.
ವಿದ್ಯುತ್ ಖರೀದಿಯ ಒಪ್ಪಂದಕ್ಕಾಗಿ 2022ರ ಜೂನ್ 30ರಂದು ರಾಜಸ್ಥಾನ ಸರ್ಕಾರ ಹಾಗೂ ಅದಾನಿ ಸಂಸ್ಥೆ ನಡುವೆ ಒಪ್ಪಂದ ಏರ್ಪಟ್ಟಿತ್ತು. ಅದಾನಿ ಸಂಸ್ಥೆ ಬಾಕಿ ಹಣ ಉಳಿಸಿಕೊಂಡಿದ್ದಕ್ಕಾಗಿ 1376.35 ಕೋಟಿ ರೂ. ಹೆಚ್ಚುವರಿ ವಿಳಂಬ ಶುಲ್ಕ ಬಾಕಿ ನೀಡಬೇಕೆಂದು ಮನವಿ ಸಲ್ಲಿಸಿದೆ.
ಇದನ್ನು ವಿರೋಧಿಸಿರುವ ಜೈಪುರ ವಿದ್ಯುತ್ ಸಂಸ್ಥೆ ಪ್ರಕರಣವನ್ನು ಸುಪ್ರೀಂ ಕೋರ್ಟ್ 2020ರಲ್ಲಿಯೇ ಬಗೆಹರಿಸಿದೆ ಎಂದು ತಿಳಿಸಿದೆ.